ನಿತ್ಯಭವಿಷ್ಯ : 04-04-2020

0

ಮೇಷರಾಶಿ
ಕೆಲಸ ಕಾರ್ಯಗಳು ವಿಘ್ನ ಭಯದಿಂದಲೇ ಮುಕ್ತಾಯ ಪಡೆದೀತು. ಕೆಟ್ಟ ಸ್ಪರ್ಧೆಯಿಂದ ವ್ಯವಹಾರ ಸ್ಥಗಿತಗೊಳ್ಳಬಹುದು. ರಾಜಕೀಯದಲ್ಲಿ ಗೊಂದಲದ ಪರಿಸ್ಥಿತಿಯು ಕಂಡುಬರಲಿದೆ. ಸೈಟ್-ವಾಹನಕ್ಕಾಗಿ ಸಾಲ ಮಾಡುವ ಸಾಧ್ಯತೆ, ಮಾತೃವಿನೊಂದಿಗೆ ಶತ್ರುತ್ವ, ಮನಸ್ಸಿನಲ್ಲಿ ಆತಂಕ, ಸರ್ಕಾರಿ ಪತ್ರ ವ್ಯವಹಾರಗಳಲ್ಲಿ ವಿಳಂಬ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ತಲೆ ನೋವು, ನರ ದೌರ್ಬಲ್ಯ .

ವೃಷಭರಾಶಿ
ತಂದೆಯಿಂದ ಧನಾಗಮನ, ಸರ್ಕಾರಿ ಕಚೇರಿಗಳಿಗೆ ಅಲೆದಾಟ, ನಿವೇಶನ ಖರೀದಿಗೆ ಜಾಗ್ರತೆಯಿಂದ ವ್ಯವಹರಿಸಿರಿ. ಆರೋಗ್ಯದ ಬಗ್ಗೆ ಗಮನಹರಿಸಿ. ಆರ್ಥಿಕ ಪರಿಸ್ಥಿತಿಯನ್ನು ಹೊಂದಾಣಿಕೆಯಿಂದ ಎದುರಿಸಿರಿ. ವರ್ಗಾವಣೆಯ ಭೀತಿ ಉದ್ಯೋಗಿಗಳಿಗೆ ಬಂದೀತು. ಪತ್ರ ವ್ಯವಹಾರಗಳಿಗೆ ಓಡಾಟ, ಬಂಧುಗಳೊಂದಿಗೆ ಕಲಹ, ಗಂಟಲು ನೋವು, ಉಸಿರಾಟದ ಸಮಸ್ಯೆ, ಕುಟುಂಬಸ್ಥರಿಂದ ಕಿರಿಕಿರಿ.

ಮಿಥುನರಾಶಿ
ಹಾಳು ವ್ಯಸನದಿಂದ ಆರೋಗ್ಯಕ್ಕೆ ಧಕ್ಕೆಯಾದೀತು. ಹಿರಿಯರ ಸೇವಾ, ಶುಶ್ರೂಷೆಗಾಗಿ ಖರ್ಚು ಮಿತಿ ದಾಟಲಿದೆ. ಅತೀ ಸ್ನೇಹಿತನೆಂಬವನೇ ವಂಚನೆ ಮಾಡಿಯಾನು. ಕಾರ್ಮಿಕ ವರ್ಗಕ್ಕೆ ಈ ದಿನ ಉತ್ತಮವಲ್ಲ. ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಧನಾಗಮನ, ಹಣಕಾಸು ಮೋಸ ಸಾಧ್ಯತೆ, ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಮನಸ್ಸಿಗೆ ಆತಂಕ, ಸ್ಥಿರಾಸ್ತಿ ವಿಚಾರಗಳಲ್ಲಿ ಒತ್ತಡ, ಅನಗತ್ಯ ಕಲಹ ಸಾಧ್ಯತೆ.

ಕಟಕರಾಶಿ
ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆಸ್ತಿ ವಿಚಾರದಲ್ಲಿ ಬಂಧುಗಳೊಂದಿಗೆ ಮನಸ್ತಾಪಕ್ಕೆ ಕಾರಣವಾದೀತು. ಪಿತ್ತ, ವಾಯು ಪ್ರಕೋಪದಿಂದ ಅನಾರೋಗ್ಯವು ಬಾಧಿಸಲಿದೆ. ಹಿರಿಯರಿಗೆ ಆರೋಗ್ಯದಲ್ಲಿ ಜಾಗ್ರತೆ ಮಾಡುವುದು ಅಗತ್ಯವಿದೆ. ಬಂಧುಗಳ ವಿರೋಧ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಅನಗತ್ಯ ಮಾತಿನಿಂದ ವೈಮನಸ್ಸು, ದಾಂಪತ್ಯದಲ್ಲಿ ವಿರಸ, ವ್ಯವಹಾರಕ್ಕೆ ಅಧಿಕಾರಿಗಳಿಂದ ತೊಂದರೆ.

ಸಿಂಹರಾಶಿ
ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ,ಮಹಿಳಾ ಅಧಿಕಾರಿಗಳಿಗೆ ಸ್ಥಾನಪಲ್ಲಟ ಸಂಭವವಿದ್ದರೂ ಇಷ್ಟವಾದ ಸ್ಥಳ ಸಿಗಲಿದೆ. ಕಟ್ಟಡ ನಿರ್ಮಾಣದಂತಹ ಕಾರ್ಯಗಳಿಗೆ ಇದು ಸಕಾಲ. ನಿರೀಕ್ಷಿತ ಕಾರ್ಯಸಾಧನೆ. ಆರ್ಥಿಕ ನಷ್ಟಗಳು, ವ್ಯವಹಾರದಲ್ಲಿ ಲಾಭಾಂಶಕ್ಕೆ ಕತ್ತರಿ, ಸಾಲ ಬಾಧೆ, ಶತ್ರುಗಳ ಕಾಟ, ಅವಕಾಶಗಳು ಕೈ ತಪ್ಪುವುದು, ಆರೋಗ್ಯದಲ್ಲಿ ಎಚ್ಚರ.

ಕನ್ಯಾರಾಶಿ
ಜನರ ಚಾಡಿ ಮಾತಿನಿಂದ, ಛಡಿಯೇಟಿನಿಂದ ತತ್ತರಿಸಬೇಕಾದೀತು. ಶ್ರಮ ಹೆಚ್ಚಿದರೂ ದುಡಿಮೆಗೆ ಫ‌ಲ ಸಿಗಲಾರದು. ಸಾಲಿಗರ ಕಾಟ ಆತಂಕ ತಂದೀತು. ಖರ್ಚುವೆಚ್ಚಗಳಿಂದ ನಿಮ್ಮ ಕೈ ಬರಿದಾದೀತು. ಉದ್ಯೋಗದಲ್ಲಿ ಲಾಭ, ದುಶ್ಚಟಗಳಿಗೆ ದಾಸರಾಗುವಿರಿ, ಒತ್ತಡಗಳಿಂದ ನಿದ್ರಾಭಂಗ, ಮಕ್ಕಳಲ್ಲಿ ಬೇಜವಾಬ್ದಾರಿ, ಮಾನಸಿಕ ಹಿಂಸೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ತುಲಾರಾಶಿ
ಯಾವುದೇ ವಿಚಾರದಲ್ಲಿ ತಾಳ್ಮೆಯಿಂದ ಕಾರ್ಯಸಾಧನೆಯಾದೀತು. ಮನೆಯಲ್ಲಿ ಗೃಹಿಣಿಯ ಅಕಾಂಕ್ಷೆ ಪೂರೈಕೆಯೊಂದಿಗೆ ಧನವ್ಯಯ ಕಂಡು ಬಂದೀತು. ಸಂಚಾರದಲ್ಲಿ ಖರ್ಚುವೆಚ್ಚ ಕಂಡುಬಂದೀತು. ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಗೊಂದಲ, ಪ್ರಯಾಣದಲ್ಲಿ ನಿರಾಸಕ್ತಿ, ಗುಪ್ತ ವಿಚಾರಗಳಿಂದ ಆಪತ್ತು, ವಯೋವೃದ್ಧರಿಗೆ ನಿಂದನೆ, ವಾಹನ ಚಾಲನೆಯಲ್ಲಿ ನಿಯಮ ಉಲ್ಲಂಘನೆ, ದಂಡ ಕಟ್ಟುವ ಸಾಧ್ಯತೆ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಪಯಶಸ್ಸು ಕಂಡುಬರುತ್ತದೆ. ಮಡದಿಯ ಕಿರಿಕಿರಿ ಹೆಚ್ಚಲಿದೆ. ಮಹತ್ವದ ವಿಚಾರದಲ್ಲಿ ಭಿನ್ನಾಭಿಪ್ರಾಯ ಕಲಹಕ್ಕೆ ಕಾರಣವಾಗುತ್ತದೆ. ಅನಿರೀಕ್ಷಿತ ಧನಾಗಮನವಿದೆ. ಅದೃಷ್ಟ ಕೈ ತಪ್ಪುವುದು, ಪದೇ ಪದೇ ಅಪಕೀರ್ತಿ, ನಷ್ಟ ನಿರಾಸೆಗಳು ಅಧಿಕಾರ, ಮನಸ್ಸಿನಲ್ಲಿ ಜಿಗುಪ್ಸೆ, ಉದ್ಯೋಗ ನಿಮಿತ್ತ ಪ್ರಯಾಣ, ಗಂಟಲು ನೋವು, ಸೋದರ ಮಾವನಿಂದ ಲಾಭ.

ಧನಸ್ಸುರಾಶಿ
ರಾಹು ಶತ್ರು ಭಾದಕನಾಗಿ ಕೆಲಸ ಕಾರ್ಯಗಳಲ್ಲಿ ವಿಳಂಬ ತಂದಾನು. ಕ್ರೀಡಾಳುಗಳಿಗೆ ಅನಾವಶ್ಯಕವಾಗಿ ಸಂಚಾರ ಒದಗಿ ಬರಲಿದೆ. ಇಷ್ಟಮಿತ್ರರಿಗೆ ಸಹಾಯ ಸಮಾಧಾನ ತಂದೀತು. ಶುಭವಿದೆ. ತಂದೆಯಿಂದ ಧನಾಗಮನ, ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ, ವಿಶ್ರಾಂತಿ ವೇತನ ಲಭಿಸುವುದು, ಸರ್ಕಾರಿ ಧನ ಸಹಾಯ ಪ್ರಾಪ್ತಿ, ಅಧಿಕಾರಿಗಳಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಕೆಲಸದ ಸ್ಥಳದಲ್ಲಿ ಕಲಹ, ಶತ್ರುಗಳ ಉಪಟಳ.

ಮಕರರಾಶಿ
ಗರ್ಭ ದೋಷ, ಚರ್ಮ ರೋಗ ಬಾಧೆ, ಮನೆಯಲ್ಲಿ ಹೋಮ, ಹವನಾದಿಗಳು ನಡೆದಾವು. ಧನವಿನಿಯೋಗವು ಅಧಿಕವಾಗಿ ಖರ್ಚು ತರಲಿದೆ. ಹೊಟೇಲ್‌, ಬೇಕರಿ, ಪಾನೀಯದ ಅಂಗಡಿ ಇತ್ಯಾದಿಗಳ ಮಾಲಕರಿಗೆ ನಷ್ಟವಿದೆ. ನರ ದೌರ್ಬಲ್ಯ, ಸಂಗಾತಿಯೊಂದಿಗೆ ಶತ್ರುತ್ವ, ಪಾಲುದಾರಿಕೆಯಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಕುಂಭರಾಶಿ
ಮಕ್ಕಳಿಂದ ಸಂಕಷ್ಟ-ಶತ್ರುತ್ವ, ಗುರುವನ್ನು ನೆನೆಯಿರಿ. ಶಾಂತಿ, ಸಮಾಧಾನವು ದೊರಕಲಿದೆ. ದೇಹಾರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಯೋಗ್ಯ ವಯಸ್ಕರಿಗೆ ಕಂಕಣಬಲ ಹಿನ್ನಡೆ ತರುತ್ತದೆ. ನಿರುದ್ಯೋಗಿಗಳಿಗೆ ನಿರುತ್ಸಾಹ. ಕೆಲಸಗಾರರಿಂದ ಸಮಸ್ಯೆ, ಸೇವಕರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ಆತಂಕ, ದುಶ್ಚಟಗಳಿಂದ ತೊಂದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ.

ಮೀನರಾಶಿ
ಗುಪ್ತ ಧನಾಗಮನ, ತಾಯಿ ಕಡೆಯಿಂದ ಲಾಭ, ಸ್ಥಿರಾಸ್ತಿ-ವಾಹನದಿಂದ ಅನುಕೂಲ, ಆಗಾಗ ಚೇತರಿಕೆ ತೋರಿಬಂದರೂ ಸಮಾಧಾನವಿರದು. ಹಿರಿಯರ ಅಸಹಕಾರದಿಂದ ಕಾರ್ಯಸಾಧನೆಗೆ ವಿಳಂಬ ತಂದೀತು. ಸರಕಾರೀ ಕೆಲಸದಲ್ಲಿ ಅಲಕ್ಷ್ಯ ಕಂಡು ಬಂದು ದಂಡ ಕಟ್ಟುವಂತಾದೀತು. ಮಕ್ಕಳ ಜೀವನದಲ್ಲಿ ಏಳಿಗೆ, ಸ್ನೇಹಿತರಿಂದ ನೋವು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಪಿತ್ತ ಬಾಧೆ, ರಕ್ತ ದೋಷ.

Leave A Reply

Your email address will not be published.