ನಿತ್ಯಭವಿಷ್ಯ : 29-06-2020

0

ಮೇಷರಾಶಿ
ಸಮಸ್ಯೆಗಳು ತೋರಿ ಬಂದರೂ ತಕ್ಕಮಟ್ಟಿಗೆ ನಿವಾರಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು. ಎಲ್ಲಿ ಹೋದರೂ ಅಶಾಂತಿ, ಶತ್ರುಗಳ ಬಾಧೆ, ಕೋರ್ಟ್ ಕೇಸ್‍ಗಳಿಂದ ತೊಂದರೆ. ಅನಿರೀಕ್ಷಿತ ದೂರ ಸಂಚಾರ ಒದಗಿ ಬಂದೀತು. ವಿದ್ಯಾರ್ಥಿಗಳು ಉತ್ಸಾಹಹೀನರಾದಾರು.

ವೃಷಭರಾಶಿ
ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ತೀರ್ಥಯಾತ್ರೆ ದರ್ಶನ, ಕೆಲಸ ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಆರ್ಥಿಕವಾಗಿ ಖರ್ಚುವೆಚ್ಚಗಳು ಅಧಿಕವಾಗಲಿದೆ. ದಾಯಾದಿಗಳ ಬಗ್ಗೆ ಜಾಗ್ರತೆ ವಹಿಸಿರಿ. ಆಗಾಗ ಕೆಲಸ ಕಾರ್ಯಗಳಲ್ಲಿ ಅಡಚಣೆಗಳಿದ್ದರೂ ಕಾರ್ಯಸಾಧನೆಯಾಗಲಿದೆ.

ಮಿಥುನರಾಶಿ
ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ಕುಟುಂಬ ಸೌಖ್ಯ, ಗೌರವ, ಕೀರ್ತಿ ಪ್ರಾಪ್ತಿ, ಬಂಧು ಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅಧಿಕವಾದ ಖರ್ಚು. ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ಹಿರಿಯರ ಸಹಕಾರ ಕಾರ್ಯಸಾಧನೆಗೆ ಸಹಕಾರಿಯಾಗಲಿದೆ. ದಾಯಾದಿಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವರು.

ಕಟಕರಾಶಿ
ಜಲ ಸಂಬಂಧಿ ವೃತ್ತಿಯಲ್ಲಿ ಲಾಭವಿದೆ. ಉದ್ಯೋಗಿಗಳಿಗೆ ಇದ್ದ ವೃತ್ತಿಯಲ್ಲಿಯೇ ಸಂತೃಪ್ತಿ ಪಡಬೇಕಾದೀತು. ಕಠೋರವಾಗಿ ಮಾತನಾಡುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಶುಭ ಫಲ ಯೋಗ. ಮಿತ್ರರ ಸಹಕಾರದಿಂದ ಕಾರ್ಯಸಾಧನೆ ಆಗಲಿದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಮುನ್ನಡೆ ಇದೆ.

ಸಿಂಹರಾಶಿ
ಮಿತ್ರರ ಸಹಕಾರದಿಂದ ಕಾರ್ಯಸಾಧನೆಯಾಗಿ ಸಮಾಧಾನ ತರಲಿದೆ. ತಂದೆ-ತಾಯಿ ಬಗ್ಗೆ ಕಾಳಜಿ, ನಾನಾ ರೀತಿಯ ಸಂಪಾದನೆ, ಮಾನಸಿಕ ನೆಮ್ಮದಿ, ದೇವರಲ್ಲಿ ಭಕ್ತಿ, ಗುರುಗಳ ಭೇಟಿ. ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಆದಾಯ ಒದಗಿಬರಲಿದೆ. ಬಂಧು ಮಿತ್ರರ ಸಹಕಾರದಿಂದ ಸಮಾಧಾನ ಸಿಗಲಿದೆ. ದಿನಾಂತ್ಯ ಶುಭವಿದೆ.

ಕನ್ಯಾರಾಶಿ
ಪಾಲು ಬಂಡವಾಳದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯದಿಂದ ಬಿಕ್ಕಟ್ಟು ತರಲಿದೆ. ನಿರುದ್ಯೋಗಿಗಳಿಗೆ ನಿರಾಶೆ ತಂದೀತು. ಎಲ್ಲರೊಂದಿಗೆ ಆತ್ಮೀಯತೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ಆತ್ಮೀಯರಿಂದಲೇ ಮೋಸ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ. ಸಾಂಸಾರಿಕವಾಗಿ ಹೊಂದಾಣಿಕೆ ಪರಿಸ್ಥಿತಿ ಅಗತ್ಯವಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ತಂದೀತು.

ತುಲಾರಾಶಿ
ಉದ್ಯೋಗದಲ್ಲಿ ಬಡ್ತಿ, ಮಾತೃವಿನಿಂದ ಧನ ಸಹಾಯ, ವಿವಾಹ ಯೋಗ, ಇಷ್ಟವಾದ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ. ಎಲ್ಲವನ್ನೂ ಸಮತೋಲನ ರೀತಿಯಲ್ಲಿ ಮಾಡಿಕೊಂಡು ಹೋದಲ್ಲಿ ಯಶಸ್ಸು ದೊರಕೀತು ವ್ಯಾಪಾರ, ವ್ಯವಹಾರಗಳು ಯಥಾರೀತಿಯಲ್ಲಿ ನಡೆಯಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳಲ್ಲಿ ಗೊಂದಲಗಳು ಕಂಡುಬಂದು ಬೇಸರವಾದೀತು

ವೃಶ್ಚಿಕರಾಶಿ
ಕಂಟ್ರಾಕ್ಟ್ ವೃತ್ತಿಯವರಿಗೆ ಉತ್ತಮ ಆದಾಯಕಾರ್ಯಸಾಧನೆಗೆ ಸಾಧಕವಾಗಲಿದೆ. ಪರರ ಧನ ಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ, ದೈವಿಕ ಚಿಂತನೆ, ವಾಹನ ಅಪಘಾತ ಸಾಧ್ಯತೆ, ಪೆಟ್ಟಾಗುವ ಪರಿಸ್ಥಿತಿ ನಿರ್ಮಾಣ. ಆರ್ಥಿಕ ಪರಿಸ್ಥಿತಿಯು ಸುಧಾರಿತ್ತಾ ಹೋಗಲಿದೆ. ಶುಭಮಂಗಲ ಕಾರ್ಯದ ತಯಾರಿ ನಡೆಯಲಿದೆ. ವಿದ್ಯಾರ್ಥಿಗಳು ಉತ್ತಮ ಅವಕಾಶ ಹೊಂದಲಿದ್ದಾರೆ.

ನುರಾಶಿ
ಸಾಂಸಾರಿಕವಾಗಿ ಮುನ್ನಡೆ ತೋರಿ ಬಂದರೂ ಕಿರಿಕಿರಿ ತಪ್ಪಲಾರದು. ಮಾಜದಲ್ಲಿ ಗೌರವ ಪ್ರಾಪ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯರ್ಥ ಧನಹಾನಿ, ಇಲ್ಲ ಸಲ್ಲದ ತಕರಾರು. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದ ಪ್ರತಿಫ‌ಲ ಸಿಗಲಿದೆ. ಸಣ್ಣಪುಟ್ಟ ವಿಚಾರದಲ್ಲಿ ಅಭಿಪ್ರಾಯ ಬೇಧದಿಂದಾಗಿ ಕಲಹವು ತೋರಿ ಬಂದೀತು.

ಮಕರರಾಶಿ
ಅನಿರೀಕ್ಷಿತ ರೂಪದಲ್ಲಿ ನಿಮ್ಮ ನಿರೀಕ್ಷಿತ ಕಾರ್ಯಗಳು ನೆರವೇರಲಿದೆ. ಕುಟುಂಬದಲ್ಲಿ ಕಲಹ, ದುಷ್ಟ ಬುದ್ಧಿ, ಸ್ಥಿರಾಸ್ತಿ ಮಾರಾಟದಿಂದ ಲಾಭ, ದಾನ-ಧರ್ಮ ಕಾರ್ಯದಲ್ಲಿ ಆಸಕ್ತಿ, ಭೂ ಲಾಭ. ಕೋರ್ಟು ಕಚೇರಿ ಕಾರ್ಯಗಳು ನಿಮ್ಮ ಪರವಾಗಿ ವಾಲಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದಿಂದ ಫ‌ಲವನ್ನು ಪಡೆಯಲಿದ್ದಾರೆ.

ಕುಂಭರಾಶಿ
ಹಲವಾರು ಸಮಸ್ಯೆಗಳು ನಿಮ್ಮನ್ನು ಸುತ್ತಿಕೊಳ್ಳಲಿದೆ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆತ್ಮೀಯರಿಂದ ಸಹಾಯ, ಮಹಿಳೆಯರಿಗೆ ಶುಭ, ಮಾತಿನ ಚಕಮಕಿ, ದುಷ್ಟರಿಂದ ದೂರವಿರಿ, ವ್ಯವಹಾರಗಳಲ್ಲಿ ಎಚ್ಚರ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಕೆಲಸಕಾರ್ಯಗಳು ಅಡೆತಡೆಗಳಿಂದಲೇ ಮುನ್ನಡೆಯಲಿದೆ. ಕೋರ್ಟು ಕಚೇರಿಯ ಕಾರ್ಯದಲ್ಲಿ ಹಿನ್ನಡೆ ಇದೆ.

ಮೀನರಾಶಿ
ಋಣಾತ್ಮಕ ಚಿಂತನೆಗಳು ನಿಮ್ಮನ್ನು ಕಂಗೆಡಿಸಲಿದೆ. ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ಅಧಿಕವಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಹೊಗಳಿಗೆ ಮಾತಿಗೆ ಮರುಳಾಗಬೇಡಿ. ದಾಯಾದಿಗಳಿಂದ ಕೆಟ್ಟ ಮಾತುಗಳನ್ನು ಕೇಳಲಿದ್ದೀರಿ. ಶುಭ ಮಂಗಲ ಕಾರ್ಯಗಳಿಗೆ ಅಡ್ಡಿ ತರಲಿದೆ. ನಿಮ್ಮ ವೃತ್ತಿಯಲ್ಲಿ ನೀವು ಯಶಸ್ಸು ಸಂಪಾದಿಸುವಿರಿ. ಶುಭವಿದೆ.

Leave A Reply

Your email address will not be published.