ನಿತ್ಯಭವಿಷ್ಯ : 14-07-2020

0

ಮೇಷರಾಶಿ
ಭೂ ಸಂಬಂಧದ ವ್ಯವಹಾರಗಳು ಲಾಭಕರವಾಗಲಿವೆ. ಉದ್ಯೋಗ, ವ್ಯವಹಾರಗಳಲ್ಲಿ ಕೆಲವೊಂದು ಅನುಕೂಲವಾಗಲಿದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುತ್ತವೆ. ಯಾರನ್ನೂ ಹೆಚ್ಚು ನಂಬಬೇಡಿ, ಪರಿಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಭಯ ಭೀತಿ, ಪ್ರಿಯ ಜನರ ಭೇಟಿ, ಚಿನ್ನಾಭರಣ ಪ್ರಾಪ್ತಿ, ಗೌರವ-ಕೀರ್ತಿ ಲಾಭ.

ವೃಷಭರಾಶಿ
ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೂರ ಪ್ರಯಾಣಕ್ಕೆ ಮನಸ್ಸು. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಮುಂದುವರಿಯಿರಿ. ವೃತ್ತಿರಂಗದಲ್ಲಿ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ಅಡಚಣೆಗಳಿರುತ್ತವೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆಯು ಬರಲಿದೆ.

ಮಿಥುನರಾಶಿ
ದೇವತಾ ಕಾರ್ಯಗಳಲ್ಲಿ ಒಲವು, ಪತ್ನಿಯಿಂದ ಬುದ್ಧಿಮಾತು, ಬುದ್ಧಿ ಶಕ್ತಿ, ಆಲೋಚನಾ ಶಕ್ತಿಯು ಉತ್ತಮವಿರುವ ನಿಮಗೆ ಸ್ವಲ್ಪ ಆತುರತೆ ಸಲ್ಲದು. ಉದ್ವೇಗವು ನಿಮಗೆ ಸರಿಯಲ್ಲ. ಉದ್ಯಮ, ವ್ಯವಹಾರದಲ್ಲಿ ಅಲ್ಪಮಟ್ಟಿನ ಲಾಭವಿರುವುದು. ಖರ್ಚಿನ ಬಗ್ಗೆ ಚಿಂತೆ ಬೇಡ. ಶತ್ರುಗಳ ನಾಶ, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.

ಕಟಕರಾಶಿ
ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಬುದ್ಧಿ ಶಕ್ತಿ, ಆಲೋಚನಾ ಶಕ್ತಿಯು ಉತ್ತಮವಿರುವ ನಿಮಗೆ ಸ್ವಲ್ಪ ಆತುರತೆ ಸಲ್ಲದು. ಉದ್ವೇಗವು ನಿಮಗೆ ಸರಿಯಲ್ಲ. ಉದ್ಯಮ, ವ್ಯವಹಾರದಲ್ಲಿ ಅಲ್ಪಮಟ್ಟಿನ ಲಾಭವಿರುವುದು. ಖರ್ಚಿನ ಬಗ್ಗೆ ಚಿಂತೆ ಬೇಡ. ಶೀತ ಸಂಬಂಧಿತ ರೋಗ, ಮಾತಿನಲ್ಲಿ ಹಿಡಿತ ಅಗತ್ಯ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ಸಾಧ್ಯತೆ, ಇಷ್ಟಾಥ ಸಿದ್ಧಿಗಾಗಿ ಪರಿಶ್ರಮ.

ಸಿಂಹರಾಶಿ
ವ್ಯಾಪಾರ ವ್ಯವಹಾರ ಮೇಲೆ ಕೆಟ್ಟದೃಷ್ಟಿ, ಪತಿ ಹಾಗೂ ಮಕ್ಕಳಿಂದ ಸುಖವು ದೂರವಾಗಲಿದೆ. ಚಿಂತೆಯ ಗೂಡಾಗಲಿದೆ ಮನಸ್ಸು. ಆದರೂ ಹೆಚ್ಚು ಚಿಂತಿಸದೆ ಹೇಗೆ ಬರುವುದೋ ಹಾಗೇ ಸ್ವೀಕರಿಸಿರಿ. ಗೃಹದಲ್ಲಿ ಸಮಾಧಾನವನ್ನು ತಂದುಕೊಳ್ಳುವುದು. ಶರೀರದಲ್ಲಿ ನೋವು, ಪಾಪದ ಕೆಲಸಕ್ಕೆ ಮನಸ್ಸು, ಮಾನಸಿಕ ಒತ್ತಡ, ಆತುರ ಸ್ವಭಾವದಿಂದ ನಷ್ಟ ಸಾಧ್ಯತೆ.

ಕನ್ಯಾರಾಶಿ
ದೇಹಾರೋಗ್ಯದಲ್ಲಿ ಬದಲಾವಣೆ ತೋರಿಬಂದು ತಲೆ ಚಿಟ್ಟಿಡಿಸಲಿದೆ. ಹಣಕಾಸಿನಲ್ಲೂ ಬಾಧೆ ಬರಲಿದೆ. ಮನಸ್ಸಿಗೆ ಬಂದ ಕೆಟ್ಟ ಆಲೋಚನೆಗಳನ್ನು ಬಿಟ್ಟುಬಿಡಿರಿ. ಮುಂದಿನ ಭವಿಷ್ಯದ ಆಲೋಚನೆ ಮಾಡಿರಿ. ಸಮಾಜದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ಪರಿಸ್ಥಿತಿ ಚೇತರಿಕೆ.

ತುಲಾರಾಶಿ
ಮನಸ್ಸಿನಲ್ಲಿ ಭಯ, ಆತಂಕ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಉದ್ಯೋಗ, ವ್ಯವಹಾರದಲ್ಲಿ ಒಳ್ಳೆಯ ಅನುಕೂಲವು ಒದಗಿಬರುವುದು. ಕೌಟುಂಬಿಕ ಸುಖ ಅಭಿವೃದ್ಧಿ ಇರುತ್ತದೆ. ಸೇವಾಕಾರ್ಯಗಳಿಗೆ ಇತರರಿಂದ ಪ್ರಶಂಸೆ ಹಾಗೂ ನಿಮ್ಮ ಬಗ್ಗೆ ಅಭಿಮಾನ ಗಳಿಸುವಿರಿ. ಸರಿ ತಪ್ಪುಗಳ ಬಗ್ಗೆ ಚಿಂತನೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

ವೃಶ್ಚಿಕರಾಶಿ
ಇತರರ ಮಾತಿಗೆ ಮರುಳಾಗಬೇಡಿ, ಜೀವನದಲ್ಲಿ ಶಿಸ್ತು ಕ್ರಮ ಇಟ್ಟುಕೊಂಡಲ್ಲಿ ಮುನ್ನಡೆ ಉತ್ತಮವಿದೆ. ಪರಸ್ಥಳ ಸಂಚಾರವೆಲ್ಲಾ ಕಡಿತಗೊಂಡು ಮನಸ್ಸಿಗೆ ಡೋಲಾಯಮಾನ ಪರಿಸ್ಥಿತಿ ಎದುರಾಗಲಿದೆ. ಆದರೆ ಸಮಾಧಾನ ಚಿತ್ತದಿಂದ ಇರಿ. ಆತ್ಮೀಯರು-ಬಂಧುಗಳಿಂದ ಎಚ್ಚರಿಕೆ, ಅಧಿಕವಾದ ಖರ್ಚು, ಶತ್ರುಗಳ ಧ್ವಂಸ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ.

ಧನಸ್ಸುರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಅವಿವಾಹಿತರಿಗೆ ವೈವಾಹಿಕ ಭಾಗ್ಯದ ಯೋಗವಿದ್ದು ಪ್ರಯತ್ನ ಸ್ವಲ್ಪ ಸಾಕಾದೀತು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿವೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆಯು ತೋರಿ ಬರುವುದು. ಮಹಿಳೆಯರಿಗೆ ತೊಂದರೆ, ವಿಪರೀತ ಯೋಚನೆಯ ದಿನ.

ಮಕರರಾಶಿ
ನಿಮ್ಮ ಪ್ರಯತ್ನಕ್ಕೆ ನಿರೀಕ್ಷಿತ ರೀತಿಯಲ್ಲಿ ಫ‌ಲವಿರದು. ಆಗಾಗ ಧನಾಗಮನದಿಂದ ಕೊಂಚ ಸಮಾಧಾನವಿರುವುದು. ಕಾರ್ಯಕ್ಷೇತ್ರದಲ್ಲಿ ಗಂಭೀರ ಸ್ವಭಾವ ದವರಾದ ನಿಮಗೆ ಅರ್ಥೈಸಿಕೊಳ್ಳುವವರು ಅಲ್ಪ. ಬೇಡವಾದ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ವಸ್ತುಗಳ ಖರೀದಿ, ಭೂ ವ್ಯವಹಾರದಲ್ಲಿ ಲಾಭ, ಭವಿಷ್ಯದ ಆಲೋಚನೆ, ಋಣ ವಿಮೋಚನೆ.

ಕುಂಭರಾಶಿ
ರಫ್ತು ವ್ಯವಹಾರಸ್ಥರಿಗೆ ಲಾಭ, ಬಿಡುವಿಲ್ಲದ ಕೆಲಸ ಕಾರ್ಯಗಳು, ಆರ್ಥಿಕವಾಗಿ ಋಣ ಭಾರದ ಚಿಂತೆ ಪರಿಹಾರವಾಗಲಿದೆ. ಶ್ರೀದೇವರ ಅನುಗ್ರಹಕ್ಕಾಗಿ ದೇವತಾಕಾರ್ಯಗಳು ಮನೆಯಲ್ಲಿ ನಡೆದಾವು. ಅವಿರತ ಕಾರ್ಯದೊತ್ತಡ ಆಗಾಗ ದೇಹದ ಮೇಲೆ ಪರಿಣಾಮ ಬೀರಲಿದೆ. ವಿಪರೀತ ಒತ್ತಡ, ರಾಜಕಾರಣಿಗಳಿಗೆ ಯಶಸ್ಸು, ಕಾರ್ಯದಲ್ಲಿ ನಿರ್ವಿಘ್ನ.

ಮೀನರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆಯು ಗುರುತಿಸಲ್ಪಡುವುದು. ಮಿಶ್ರಫ‌ಲವು ನಿಮಗೆ ಸಿಗಲಿದೆ. ದೈವಬಲ ಕ್ಷೀಣಿಸಿ ಕಾರ್ಯಗಳಲ್ಲಿ ಆಲಸ್ಯ, ಶಾರೀರಿಕ ಕಷ್ಟಗಳಿಂದ ಹಲವು ನಷ್ಟಗಳುಂಟಾದೀತು. ವಿಪರೀತ ಕೆಲಸ, ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ.

Leave A Reply

Your email address will not be published.