Vaastu Tips : ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ

Vaastu Tips : ದೈನಂದಿನ ಜೀವನದಲ್ಲಿ, ನಾವು ಆಗಾಗ್ಗೆ ಅನೇಕ ತಪ್ಪುಗಳನ್ನು ಮಾಡುತ್ತೇವೆ, ಅದು ನಂತರದಲ್ಲಿ ತೊಂದರೆಗೆ ಕಾರಣವಾಗುತ್ತದೆ. ತಿಳಿದೋ ತಿಳಿಯದೆಯೋ ಮಾಡಿದ ಕೆಲವು ತಪ್ಪುಗಳು ವ್ಯಕ್ತಿಯ ಮೇಲೆ ಯಾವಾಗ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆಯೋ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ವಾಸ್ತು ಪ್ರಕಾರ ಕೆಲವು ಕೆಲವು ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸದೇ ಹೋದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದೀರಿ.

ಪೂಜೆ ಮಾಡುವ ವೇಳೆಯಲ್ಲಿ ದೇವರ ವಿಗ್ರಹಗಳನ್ನು ಮುಖಾಮುಖಿಯಾಗಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ರೀತಿ ಮಾಡುವುದರಿಂದ ಆರ್ಥಿಕ ಪ್ರಗತಿಯ ಹಾದಿಗಳು ಮುಚ್ಚಿಹೋಗುತ್ತವೆ ಮತ್ತು ಹಣ ಪಡೆಯುವಲ್ಲಿ ಅಡಚಣೆ ಉಂಟಾಗುತ್ತದೆ.

ಮನೆಯಲ್ಲಿರುವ ಪೊರಕೆಗೂ ನೀವು ವಿಶೇಷವಾದ ಗೌರವ ನೀಡಲೇಬೇಕು. ಪೊರಕೆಯು ಲಕ್ಷ್ಮೀಯ ರೂಪವಾದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತ ಸ್ಥಳದಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಪೊರಕೆಯನ್ನು ಎಂದಿಗೂ ಕಪಾಟಿನ ಬಳಿ ಇಡಬೇಡಿ ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ.

ವಾಸ್ತು ಪ್ರಕಾರ, ಮುರಿದ ವಸ್ತುಗಳನ್ನು ಎಂದಿಗೂ ಬಳಸಬೇಡಿ. ಒಡೆದ ಪಾತ್ರೆಗಳನ್ನು ಮನೆಯಲ್ಲಿ ಇಡಬಾರದು. ಹಾಗೆಯೇ ಹರಿದು ಹೋದ ಚಪ್ಪಲಿ ಮತ್ತು ಬಟ್ಟೆಗಳನ್ನು ಧರಿಸಬಾರದು. ನೀವು ಈ ವಸ್ತುಗಳನ್ನು ಮನೆಯಿಂದ ಹೊರ ಹಾಕದೇ ಇದ್ದರೆ ಮನೆಯಲ್ಲಿ ದರಿದ್ರ ಬರುತ್ತದೆ.

ಮನೆಗಳಲ್ಲಿ ಬೊನ್ಸಾಯ್​ ಗಿಡಗಳನ್ನು ನೆಡುವುದು ಒಳ್ಳೆಯದಲ್ಲ. ಬೊನ್ಸಾಯ್​ ಗಿಡ ಮನೆಯಲ್ಲಿ ಇದ್ದರೆ ಪ್ರಗತಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಯಲ್ಲಿ ಪಾಪಾಸ್​ ಕಳ್ಳಿಯಂತಹ ಗಿಡಗಳನ್ನು ಮನೆ ಹಾಗೂ ಕಚೇರಿಗಳಲ್ಲಿ ನೆಡಬೇಡಿ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ .

ಇದನ್ನು ಓದಿ : India Ban International flights : ಭಾರತದಲ್ಲಿ ಫೆಬ್ರವರಿ 28 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್‌

ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

vaastu tips these things in house create economic trouble and progress in life

Comments are closed.