30 ವರ್ಷ ಕೊರೊನಾ ಹೋಗಲ್ಲ : ಬ್ರಹ್ಮಾಂಡ ಗುರೂಜಿ ಭವಿಷ್ಯ

0

ಹಾಸನ : ವಿಶ್ವದಾದ್ಯಂತ ಆರ್ಭಟಿಸುತ್ತಿರುವ ಕೊರೊನಾ ವೈರಸ್ ಸೋಂಕು ಇನ್ನು 30 ವರ್ಷ ಜೀವಂತವಾಗಿ ಇರಲಿದೆ. ಕೊರೊನಾ ಸೋಂಕಿನ ಜೊತೆಗೆ ನಾವು ಬದುಕು ನಡೆಸಬೇಕು ಎಂದು ಬ್ರಹ್ಮಾಂಡ ಖ್ಯಾತಿಯ ಗುರೂಜಿ ಡಾ.ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳು ಇನ್ನಷ್ಟು ಭೀಕರವಾಗಿರಲಿದೆ. ಹಿಂದೆಂದೂ ಕಂಡರಿಯದ ಭೂಕಂಪ, ಜಲಪ್ರಳಯ ಹಾಗೂ ತರ್ಕಕ್ಕೆ ನಿಲುಕದ ರೋಗ – ರುಜಿನಗಳು ಬಂದೊದಗಲಿವೆ. ಅಲ್ಲದೇ ಮುಂದಿನ ಎರಡು ಮುಕ್ಕಾಲು ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು 18 ಕೋಟಿ ಜನರು ಸಾಂಕ್ರಾಮಿಕ ರೋಗಗಳಿಂದಲೇ ಸಾವನ್ನಪ್ಪಲಿದ್ದಾರೆ ಎಂದಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆಯನ್ನು ಪಡೆಯಲು ಮಾಸ್ಕ್​ ಧರಿಸಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಸೂಕ್ತ. ಮುಂಜಾನೆಯೇ ಬೇವು, ಅರಳಿ, ಹೊಂಗೆ ಮರಕ್ಕೆ 11 ಸುತ್ತು ಪ್ರದಕ್ಷಿಣೆ ಹಾಕಿ, ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿ, ಸಾಧ್ಯವಾದಷ್ಟು ಉಪ್ಪು ಮಿಶ್ರಿತ ಬಿಸಿನೀರು ಕುಡಿಯಿರಿ, ದಿನದಲ್ಲಿ ಒಮ್ಮೆ ಕಷಾಯ ಕುಡಿಯುವುದನ್ನು ರೂಢಿಸಿಕೊಳ್ಳಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಇದನ್ನು ಪಾಲಿಸಿದರೆ ಕೊರೊನಾ ನಿಮ್ಮ ಹತ್ತಿರವೇ ಸುಳಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಮೈಸೂರಿಗೆ ಒಬ್ಬ ಅಮ್ಮ ಬಂದಿದ್ದಾಳೆ, ಅವಳ ದರ್ಶನ ಇನ್ನೂ ಯಾರಿಗೂ ಆಗಿಲ್ಲ. ಲೋಕಕಲ್ಯಾಣಕ್ಕಾಗಿಯೇ ಅಮ್ಮ ಭೂಮಿಯ ಮೇಲೆ ಪಾದಸ್ಪರ್ಶ ಮಾಡಿದ್ದಾಳೆ. ಸ್ವಲ್ಪ ದಿನದಲ್ಲಿಯೇ ಧಾಮಿರ್ಕ ಸಮಾಜಕ್ಕೆ ಅವಳನ್ನು ತೋರಿಸುತ್ತೇನೆ. ದುರಾಹಂಕಾರ ಮತ್ತು ಅಹಂಕಾರವನ್ನು ಹೊದ್ದು ಮಲಗಿರುವವರಿಗೆ ಎಚ್ಚರಿಸಲು ಶನೈಶ್ಚರನೇ ಈ ರೂಪದಲ್ಲಿ ಬಂದಿದ್ದಾನೆ. ಭಗವಂತನನ್ನು ಸ್ಮರಿಸಿ ಪೂಜೆ ಹಾಗೂ ಜಪ ಮಾಡದೆ ಇರುವವರಿಗೆ ಬಂದೊದಗಿದೆ ವಕ್ರಕಾಲ. ದೇವರನ್ನು ಮರೆತವರಿಗೆ ಇನ್ನುಮುಂದೆ ಉಳಿಗಾಲವಿಲ್ಲವೆಂದು ಎಚ್ಚರಿಸಿದ್ದಾರೆ.

Leave A Reply

Your email address will not be published.