shantaveera swamiji of kolada mutt : ಹೃದಯಾಘಾತದಿಂದ ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ

ಬೆಂಗಳೂರು :shantaveera swamiji of kolada mutt: ಬೆಂಗಳೂರಿನ ಶಾಂತಿ ನಗರದಲ್ಲಿರುವ ಕೊಳದ ಮಠದ ಶಾಂತವೀರ ಸ್ವಾಮೀಜಿ ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಶಾಂತವೀರ ಸ್ವಾಮೀಜಿಗಳಿಗೆ 80 ವರ್ಷ ವಯಸ್ಸಾಗಿತ್ತು.ಎಂದಿನಂತೆ ಶಾಂತವೀರ ಸ್ವಾಮೀಜಿ ಇಂದು ತಮ್ಮ ನಿತ್ಯ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.


ನಿನ್ನೆ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಂತವೀರ ಸ್ವಾಮೀಜಿ ಭಾಗಿಯಾಗಿದ್ದರು. ನಿನ್ನೆಯಂತೂ ಶಾಂತವೀರ ಸ್ವಾಮೀಜಿಗಳು ಸಂಪೂರ್ಣ ಆರೋಗ್ಯವಾಗಿಯೇ ಇದ್ದರು.


ಶಾಂತವೀರ ಸ್ವಾಮೀಜಿಗಳ ನಿಧನದ ಬಗ್ಗೆ ಅವರ ಪೂರ್ವಾಶ್ರಮದ ಅಣ್ಣನ ಪುತ್ರ ಹರ್ಷ ಮಾಹಿತಿ ನೀಡಿದ್ದಾರೆ. ಶಾಂತವೀರ ಮಹಾಸ್ವಾಮೀಜಿಗಳಿಗೆ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ. ಅವರು ನಿನ್ನೆ ಕೂಡ ಮಹಾಲಕ್ಷ್ಮೀ ಲೇ ಔಟ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಇಂದು ಬೆಳಗ್ಗೆ ಮಠಕ್ಕೆ ಬಂದು ನೋಡಿದರೆ ಈ ರೀತಿ ಆಗಿದೆ ಎಂದು ಹೇಳಿದರು.

head constable who committed suicide: ಕರ್ತವ್ಯಕ್ಕೆ ಮರಳಿದ ದಿನವೇ ಹೆಡ್​ಕಾನ್​​ಸ್ಟೇಬಲ್​ ಆತ್ಮಹತ್ಯೆ

ಉಡುಪಿ :head constable who committed suicide : ಸೇವೆಯಿಂದ ಅಮಾನತುಗೊಂಡು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದ ಹೆಡ್​ ಕಾನಸ್ಟೇಬಲ್​ ಸೇವೆಗ ಹಾಜರಾದ ದಿನವೇ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆಯು ಉಡುಪಿಯಲ್ಲಿ ನಡೆದಿದೆ. ಮೃತ ಹೆಡ್​ ಕಾನ್​ಸ್ಟೇಬಲ್​ ರಾಜೇಶ್​ ಕುಂದರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್​ ಕಾನ್​ಸ್ಟೇಬಲ್​ ಆಗಿದ್ದರು. ಇವರು ಅಮಾನತುಗೊಂಡ ಬಳಿಕ ಮತ್ತೆ ಸೇವೆಗೆ ಸೇರಿದ್ದರು ಎಂದು ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ಎಸ್​. ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ.

ಆದಿ ಉಡುಪಿಯ ಪ್ರೌಢಶಾಲೆಯ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಇಡಲಾಗಿದ್ದ ಸ್ಟೋರ್​ ರೂಮ್​​ನ ಹೊರಗೆ ಹೆಡ್​ ಕಾನ್​ಸ್ಟೇಬಲ್​ ರಾಜೇಶ್​ ಕುಂದರ್​ ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ ಕರ್ತವ್ಯನಿರತಾಗಿದ್ದ ರಾಜೇಶ್​ ಕುಂದರ್​ ಇಂದು ಬೆಳಗ್ಗೆ ಸಿಬ್ಬಂದಿ ಬಂದು ನೋಡುವ ವೇಳೆಯಲ್ಲಿ ಸ್ಟೋರ್​ ರೂಮ್​ನ ಹೊರೆಗೆ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ರಾಜೇಶ್​ ಕುಂದರ್​ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬಸ್ಥರು ಉಡುಪಿಗೆ ಆಗಮಿಸಿದ್ದಾರೆ, ಕುಟುಂಬಸ್ಥರು ನೀಡುವ ದೂರನ್ನ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್​.ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ. ಸೇವೆಯಿಂದ ಅಮಾನತುಗೊಂಡಿದ್ದ ರಾಜೇಶ್​ ಕುಂದರ್​ ಗುರುವಾರದಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

ಇದನ್ನು ಓದಿ : acid attack : ಆಸಿಡ್‌ ಪ್ರೇಮಿ ನಾಗೇಶ್‌ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ

ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

shantaveera swamiji of kolada mutt passes away due to cardiac arrest

Comments are closed.