Animal Cruelty:ನಾಯಿ ಬೊಗಳಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ ದುಷ್ಕರ್ಮಿಗಳು : ವಿಡಿಯೋ ವೈರಲ್​​, ಆರೋಪಿಗಳ ಬಂಧನ

ಮಧ್ಯ ಪ್ರದೇಶ : Animal Cruelty :ಮೂಖ ಪ್ರಾಣಿಗಳಿಗೆ ಹಿಂಸೆ ನೀಡಿದರೆ ಆ ದೇವರು ಕೂಡ ಕ್ಷಮಿಸಲಾರ. ಈಗಂತೂ ಕಾನೂನುಗಳು ಎಷ್ಟರ ಮಟ್ಟಿಗೆ ಬಿಗಿ ಆಗಿದೆ ಅಂದರೆ ಮೂಖಪ್ರಾಣಿಗಳನ್ನು ಕೆಣಕುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾದ ಸ್ಥಿತಿ ಇದೆ. ಎಷ್ಟೇ ಕಾನೂನುಗಳು ಇದ್ದರೂ, ಪ್ರಾಣಿದಯಾ ಸಂಘ ಸಂಸ್ಥೆಗಳು ಹುಟ್ಟಿಕೊಂಡಿದ್ದರೂ ಸಹ ಪ್ರಾಣಿ ಹಿಂಸೆ ಮಾಡುವಂತಹ ನೀಚ ಬುದ್ಧಿ ಇನ್ನೂ ಕೊನೆಯಾಗಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಬೀದಿ ನಾಯಿ ನಿರಂತರವಾಗಿ ಬೊಗಳುತ್ತಿದೆ ಎಂಬ ಕಾರಣಕ್ಕೆ ಇಬ್ಬರು ದುಷ್ಕರ್ಮಿಗಳು ಸೇರಿ ನಾಯಿಯನ್ನು ಕೊಂದು ಹಾಕಿದ ಅಮಾನವೀಯ ಘಟನೆಯು ಮಧ್ಯಪ್ರದೇಶದ ಇಂದೋರ್​ ನಗರದಲ್ಲಿ ಸಂಭವಿಸಿದೆ. ಭಾನುವಾರ ರಾತ್ರಿ ಬಂಗಾಂಗ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 20 ರಿಂದ 25 ವರ್ಷ ಪ್ರಾಯದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಶ್ವಾನವು ಬೊಗಳುತ್ತಿತ್ತು ಇದರಿಂದ ನಮಗೆ ಕಿರಿಕಿರಿಯಾಗುತ್ತಿತ್ತು ಎಂದು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿ ಮತ್ತೆ ನಾಯಿ ಕೂಗಿದ್ದನ್ನು ಕೇಳಿ ಕೋಪಗೊಂಡ ಇಬ್ಬರು ಆರೋಪಿಗಳು ನಾಯಿಗೆ ಚಾಕುವಿನಿಂದ ಇರಿದಿದ್ದಾರೆ. ರಕ್ತಸ್ರಾವದಿಂದ ನಾಯಿಯು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ಬಂಗಾಂಗ ಪೊಲೀಸ್​ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶ್ವಾನವನ್ನು ಚಾಕುವಿನಿಂದ ಇರಿದ ವಿಡಿಯೋ ವೈರಲ್​ ಆದ ಬಳಿಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಈ ಪೈಶಾಚಿಕ ಕೃತ್ಯವೆಸಗಿದವರನ್ನು ಬಂಧಿಸಲೇಬೇಕು ಎಂಬ ಕೂಗು ಎಲ್ಲೆಡೆ ಕೇಳಿಬಂದ ಬಳಿಕ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


ಈ ಸಂಬಂಧ ಸರ್ಕಾರೇತರ ಪ್ರಾಣಿ ದಯಾ ಸಂಸ್ಥೆಯಾದ ಪೀಪಲ್​ ಫಾರ್​ ಎನಿಮಲ್ಸ್​ ಇಂದೋರ್​ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್​ ನೀಡಿದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ಪ್ರಾಣಿ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಇತರೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆಯಾಗಲು ಹೊರಟ ವರನಿಗೆ ಧರ್ಮದೇಟು

ಇದನ್ನೂ ಓದಿ : Prithvi Shaw : “ನೀನು ಎಲ್ಲವನ್ನೂ ನೋಡುತ್ತಿರುವೆ ಸಾಯಿ ಬಾಬಾ”, ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಬಾಬಾಗೆ ಮೊರೆ ಇಟ್ಟ ಪೃಥ್ವಿ ಶಾ

Animal Cruelty in MP: Irked by Barking, Two Men Kill Stray Dog in Indore; Arrested

Comments are closed.