Manish sisodia attack On Bjp : ಬಿಜೆಪಿ ಸೇರಿದ್ರೆ ಎಲ್ಲಾ ಕೇಸ್ ಕ್ಲೋಸ್-ಮನೀಶ್ ಸಿಸೋಡಿಯಾ

ದೆಹಲಿ : ಅಬಕಾರಿ ನೀತಿ ಅನುಷ್ಠಾನ ಹಗರಣದ ಆರೋಪ ಎದುರಿಸ್ತಿರೋ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. Manish sisodia attack On Bjp ಡಿಸಿಎಂ ಸಿಸೋಡಿಯಾ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮತ್ತು AAP ಪಕ್ಷದ ಮಧ್ಯೆ ಮತ್ತೊಂದು ಸುತ್ತಿನ ರಾಜಕೀಯ ಕದನ ಆರಂಭವಾಗಿದೆ.

‘ಆಮ್ ಆದ್ಮಿ ಪಕ್ಷವನ್ನ ಒಡೆಯಬೇಕು, ಬಿಜೆಪಿ ಪಕ್ಷವನ್ನ ಸೇರಬೇಕು. ಆಗ ನಿಮ್ಮ ಮೇಲಿರೋ ಎಲ್ಲ ಕೇಸ್ ಗಳನ್ನ ಕ್ಲೋಸ್ ಮಾಡ್ತೀವಿ ಅಂತಾ ಹೇಳಿದ್ರು. ಈ ಬಗ್ಗೆ ಟ್ವೀಟ್ ಮಾಡಿರೋ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ. ಬಿಜೆಪಿಯಿಂದ ನನಗೆ ಒಂದು ಆಫರ್ ಬಂತು. ನೀವು ಆಪ್ ಪಕ್ಷವನ್ನ ಒಡೆಯಬೇಕು. ನೀವು ಸಹ  ಆ ಪಕ್ಷದಿಂದ ಹೊರಗೆ ಬಂದು ಬಿಜೆಪಿಗೆ ಸೇರಬೇಕು. ನಿಮ್ಮ ಮೇಲಿರೋ ಎಲ್ಲ ಕೇಸ್ ಗಳನ್ನ ಕ್ಲೋಸ್ ಮಾಡೋದಾಗಿ ಹೇಳಿದ್ರು. ಆದ್ರೆ ನಾನು ಬಿಜೆಪಿಯವ್ರಿಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದೇನೆ. ನಾನು ಒಬ್ಬ ರಜಪೂತ. ಮಹಾರಾಣಾ ಪ್ರತಾಪ್ ಅವರ ವಂಶಸ್ಥ, ಬೇಕಿದ್ರೆ ನನ್ನ ತಲೆಯನ್ನೇ ಕಡಿದು ಹಾಕ್ತೇನೆ, ಆದ್ರೆ ಭ್ರಷ್ಟ ಸಂಚುಕೋರರ ಮುಂದೆ ತಲೆ ಬಾಗೋದಿಲ್ಲ ಅಂತಾ ಟ್ವೀಟ್ ಮಾಡಿದ್ರು.

ಇದಾಗಿ ಕೆಲವೇ ಹೊತ್ತಲ್ಲಿ ಬಿಜೆಪಿ ಕೊಟ್ಟ ಆಫರ್ ಸಂಬಂಧ ನಮ್ಮ ಬಳಿ ಆಡಿಯೋ ರೆಕಾರ್ಡಿಂಗ್ ಕೂಡಾ ಇದೆ ಅಂತಾ ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಸಮಯ ಬಂದಾಯ ಆಡಿಯೋ ರಿಲೀಸ್ ಮಾಡ್ತೀವಿ, ಬಿಜೆಪಿ ಬಂಡವಾಳವನ್ನ, ಬಿಜೆಪಿಯ ಭ್ರಷ್ಟ ಮುಖವನ್ನ ಬಯಲು ಮಾಡೋದಾಗಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಆಪ್ ನಾಯಕರು ಸಿಸೋಡಿಯಾ ಹೇಳಿಕೆಯನ್ನ ಬೆಂಬಲಿಸಿದ್ದಾರೆ. ಆದ್ರೆ ಇದುವರೆಗೂ ಆಫರ್ ನೀಡಿರೋ ಬಿಜೆಪಿಯ  ಆ ವ್ಯಕ್ತಿ ಯಾರೆಂದು ಹೆಸರನ್ನ ಹೇಳಿಲ್ಲ..

ದೆಹಲಿಯ ಅಬಕಾರಿ ನೀತಿಯ ಅನುಷ್ಠಾನ ಹಗರಣ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ದಾಳಿ ಮಾಡಿದ ಕೆಲವು ದಿನಗಳ ನಂತರ ಸಿಸೋಡಿಯಾ ಅವರ ಆಶ್ಚರ್ಯಕರ ಹೇಳಿಕೆಗಳು ಬಂದಿವೆ. ತನಗೆ ಈ ‘ಆಫರ್’ ನೀಡಿದ ವ್ಯಕ್ತಿಯನ್ನು ಹೆಸರನ್ನು ಬಹಿರಂಗಪಡಿಸುವಂತೆ ಈಶಾನ್ಯ ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ : Alia Bhatt Trolled: ಆಲಿಯಾ ಭಟ್ ವಿರುದ್ಧ ಬಾಯ್ಕಾಟ್ ‘ಬ್ರಹ್ಮಾಸ್ತ್ರ’..!

ಇದನ್ನೂ ಓದಿ : Zomato ಪಿಜ್ಜಾ ಆರ್ಡರ್ ರದ್ದು: ಗ್ರಾಹಕರಿಗೆ 10,000 ರೂ. ಪಾವತಿಸಲು ಆದೇಶ

Manish Sisodia attack On Bjp CBI politics Aam Admi party Arvind Kejriwal Delhi

Comments are closed.