Rajnath Singh : ಜೀವನ್ಮರಣ ಹೋರಾಟದಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​: ಸಂಸತ್ತಿಗೆ ರಾಜನಾಥ್​ ಸಿಂಗ್​ ಮಾಹಿತಿ

ತಮಿಳುನಾಡಿನ ಕುನೂರ್​ ಬಳಿಯ ನೀಲಗಿರಿ ಅರಣ್ಯದಲ್ಲಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದ ವಿಸ್ತೃತ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್(Rajnath Singh)​​ ಸಂಸತ್ತಿಗೆ ನೀಡಿದ್ದಾರೆ. ಅತಿಯಾದ ದುಃಖ ಹಾಗೂ ಭಾರವಾದ ಹೃದಯದಿಂದ 2021ರ ಡಿಸೆಂಬರ್​ 8ರಂದು ಮಧ್ಯಾಹ್ನದ ವೇಳೆಗೆ ಮಿಲಿಟರಿ ಹೆಲಿಕಾಪ್ಟರ್​ ಪತನವಾದ ಬಗ್ಗೆ ದುರದೃದಷ್ಟಕರ ವರದಿಯನ್ನು ನೀಡಲು ನಾನಿಲ್ಲಿ ನಂತಿದ್ದೇನೆ. ಈ ಹೆಲಿಕಾಪ್ಟರ್​ನಲ್ಲಿ ದೇಶದ ಮೊದಲ ಸೇನಾ ಮುಖ್ಯಸ್ಥ ಬಿಪಿನ್​​ ರಾವತ್​ ಕೂಡ ಇದ್ದರು.


ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​​ ವೆಲ್ಲಿಂಗ್ಟನ್​​ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿಗೆ ಕಾಲೇಜಿಗೆ ನಿಗದಿತ ಭೇಟಿಗೆ ತೆರಳುತ್ತಿದ್ದರು. ವಾಯುಪಡೆಯ ಎಂಐ 17 ವಿ5 ಹೆಲಿಕಾಪ್ಟರ್​ ನಿನ್ನೆ ಬೆಳಗ್ಗೆ 11.48ರ ಸುಮಾರಿಗೆ ಸೂಲೂರು ಏರ್​ಬೇಸ್​ನಿಂದ ಟೇಕಾಫ್​ ಆಗಿತ್ತು. ಮಧ್ಯಾಗ್ನ 12:15ರ ಸುಮಾರಿಗೆ ವೆಲ್ಲಿಂಗ್ಟನ್​ನಲ್ಲಿ ಲ್ಯಾಂಡ್​ ಆಗಬೇಕಿತ್ತು.


ಆದರೆ ಸುಮಾರು 12:08ರ ಸುಮಾರಿಗೆ ಸುಲೂರು ವಾಯುನೆಲೆಯಲ್ಲಿದ್ದ ಹೆಲಿಕಾಪ್ಟರ್​​​ ಏರ್​ ಟ್ರಾಫಿಕ್​ ಕಂಟ್ರೋಲ್​ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಕುನೂರ್​ ಎಂಬಲ್ಲಿ ಹೆಲಿಕಾಪ್ಟರ್​ ಪತನಗೊಂಡಿತ್ತು. ಕಾಡಿನಲ್ಲಿ ಬೆಂಕಿಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಅಲ್ಲಿ ಮಿಲಿಟರಿ ಹೆಲಿಕಾಪ್ಟರ್​ನ ಅವಶೇಷಗಳನ್ನು ಗಮನಿಸಿದ್ದಾರೆ. ಕೂಡಲೇ ಹೆಲಿಕಾಪ್ಟರ್​ನಲ್ಲಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭವಾಗಿತ್ತು. ಬದುಕುಳಿದವರನ್ನು ಕೂಡಲೇ ಆಸ್ಪತ್ರೆಗೂ ದಾಖಲಿಸಲಾಗಿತ್ತು

.
ದುರಂತದಲ್ಲಿ ಗಾಯಗೊಂಡಿದ್ದವರನ್ನು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಪ್ರಸ್ತುತ ಮಾಹಿತಿಯ ಪ್ರಕಾರ ಹೆಲಿಕಾಪ್ಟರ್​ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​, ಸಿಡಿಎಸ್​​ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್​​​ ಲಖ್ಬಿಂದರ್​ ಸಿಂಗ್​ ಲಿಡ್ಡೆರ್​, ಲೆ.ಕ ಹರ್ಜಿಂದರ್​ ಸಿಂಗ್, ವಿಂಗ್​ ಕಮಾಂಡರ್​ ಪಿಎಸ್​ ಚವ್ಹಾಣ್​, ಸ್ಕ್ವಾಡ್ರನ್​ ಲೀಡರ್​ ಕೆ ಸಿಂಗ್​, ಜೆಡಬ್ಲು ಓ ಪ್ರದೀಪ್​, ಜೆಡಬ್ಲುಓ ದಾಸ್​, ನಾಯಕ್​ ಬಿ ಸಾಯಿ ತೇಜ, ಸತ್ಪಾಲ್​, ನಾಯಕ್​ ವಿವೇಕ ಕುಮಾರ್, ನಾಯಕ್​ ಗುರುಸೇವಕ್​ ಸಿಂಗ್​ ಎಂದು ಗುರುತಿಸಲಾಗಿದೆ

.
ಈ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​​ರನ್ನು ಲೈಫ್​ ಸಪೋರ್ಟ್​ನಲ್ಲಿ ಇಡಲಾಗಿದೆ. ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು ಸಿಂಗ್​​ರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.

Rajnath Singh briefs Parliament on IAF chopper crash

ಇದನ್ನು ಓದಿ : Gp Capt Varun Singh : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬಚಾವಾದ ಏಕೈಕ ಸೇನಾಧಿಕಾರಿ ಯಾರು ಗೊತ್ತೇ..?

ಇದನ್ನು ಓದಿ : CDS Bipin Rawat chopper crash :‘ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

Comments are closed.