ಬೆಂಗಳೂರು : actress bhavana : ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ವಿಚಾರಣೆಗೆ ಕರೆಸಿರುವುದನ್ನು ವಿರೋಧಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸುತ್ತಿದೆ.ಈ ಪ್ರತಿಭಟನೆಗೆ ಭಾಗಿಯಾಗಲು ಬಂದಿದ್ದ ಸ್ಯಾಂಡಲ್ವುಡ್ ನಟಿ ಭಾವನಾಗೆ ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ವರದಿಯಾಗಿದೆ.
ಜಾರಿ ನಿರ್ದೇಶನಾಲಯದಿಂದ ಸೋನಿಯಾ ಗಾಂಧಿ ವಿಚಾರಣೆಯನ್ನು ಖಂಡಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಮೌನ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ನಟಿ ಭಾವನಾ ಆಗಮಿಸಿದ್ದರು. ಭಾವನಾ ಸತ್ಯಾಗ್ರಹದ ಸ್ಥಳಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಬಿಜೆಪಿಗೆ ಹೋಗಿದ್ರಿ ಈಗ ಬಂದಿದ್ದೀರಾ..? ಮುಂದೆ ಬಂದು ಕೂರೋದಕ್ಕೆ ಹೋಗ್ತಿರಾ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ .ಆಕ್ರೋಶಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಸಮಾಧಾನ ಪಡಿಸಲು ಭಾವನಾ ಯತ್ನಿಸಿದರು.
ಇದು ಮಾತ್ರವಲ್ಲದೇ ಸತ್ಯಾಗ್ರಹದಲ್ಲಿ ಕುಳಿತುಕೊಳ್ಳಲು ಕುರ್ಚಿ ಕೂಡ ಸಿಗದೇ ನಟಿ ಭಾವನಾ ಪರದಾಡಿದ್ದಾರೆ. ಡಿ.ಕೆ ಶಿವಕುಮಾರ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಭಾವನಾ ಮುಂದಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಓಯ್ ಎಂದು ಜೋರಾಗಿ ಕೂಗಿದ್ದಾರೆ. ಎಲ್ಲಿ ಕುಳಿತುಕೊಳ್ಳಬೇಕು ಎಂದು ತಿಳಿಯದೇ ಪರದಾಡುತ್ತಿದ್ದ ಭಾವನಾಗೆ ಬಳಿಕ ಆಸನದ ವ್ಯವಸ್ಥೆ ಮಾಡಿಕೊಡಲಾಯ್ತು.
ಈ ಎಲ್ಲಾ ಘಟನೆಗಳ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಭಾವನಾ, ನಾನು ಕೋವಿಡ್ ಸಂದರ್ಭದಲ್ಲಿಯೇ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೆ. ಆದರೆ ಅನೇಕ ಜನರಿಗೆ ಈ ಬಗ್ಗೆ ಮಾಹಿತಿಯಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಇಂದು ನನಗೆ ಕೇಳಿದ ಯಾವುದೇ ಪ್ರಶ್ನೆಗಳು ತಪ್ಪಲ್ಲ. ಅವರೆಲ್ಲರ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ನನಗೆ ಕಾಂಗ್ರೆಸ್ನ ತತ್ವ ಸಿದ್ಧಾಂತಗಳು ಒಪ್ಪಿಗೆಯಾಗಿದೆ. ನಾನು ಕಾಂಗ್ರೆಸ್ನಲ್ಲಿಯೇ ಇದ್ದು ಚುನಾವಣೆಗಳಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದರು.
ಇದನ್ನು ಓದಿ : Neeraj Chopra : ಕಾಮನ್ವೆಲ್ತ್ ಗೇಮ್ಸ್ 2022ನಿಂದ ಹೊರಗುಳಿದ ಚಿನ್ನದ ಹುಡುಗ ನೀರಜ್ ಚೋಪ್ರಾ : ಭಾರತಕ್ಕೆ ಭಾರಿ ಆಘಾತ
ಇದನ್ನೂ ಓದಿ : severed snake : ವಿಮಾನಯಾನದ ಸಸ್ಯಾಹಾರಿ ಊಟದಲ್ಲಿತ್ತು ಹಾವಿನ ತಲೆ : ವಿಡಿಯೋ ವೈರಲ್
ಇದನ್ನೂ ಓದಿ : India Senior Women squad : ಬರ್ಮಿಂಗ್’ಹ್ಯಾಮ್ ತಲುಪಿದ ಭಾರತ ಮಹಿಳಾ ಕ್ರಿಕೆಟ್ ತಂಡ
congress member takes classes to actress bhavana in congress satyagraha at Bengaluru
Comments are closed.