plant parijat : ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆಯೇ..? ಈ ಗಿಡವನ್ನು ನಿಮ್ಮ ಅಂಗಳದಲ್ಲಿ ನೆಡಿ

plant parijat : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮೀ ಹಾಗೂ ವಿಷ್ಣು ನೆಲೆಸಿದ್ದಾರೆ ಎಂದು ನಂಬಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಖಂಡಿತವಾಗಿಯೂ ಶುಭ ಇರುತ್ತದೆ. ಆದರೆ ಇದರ ಜೊತೆಯಲ್ಲಿ ನೀವು ಇನ್ನೊಂದು ವಿಶೇಷ ಗಿಡವಿದ್ದು ಇದೂ ಸಹ ಮನೆಗೆ ಶುಭವನ್ನು ತರುತ್ತದೆ ಎಂದು ನಂಬಲಾಗಿದೆ.

ಮನೆಯಲ್ಲಿ ವಾಸ್ತುವೊಂದು ಸರಿಯಾಗಿಲ್ಲ ಅಂದರೆ ಸಾಕು ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಿಮಗೆ ಶುಭ ದೊರಕುವುದಿಲ್ಲ ಯಾವಾಗಲೂ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ. ಇದರಿಂದ ಕುಟುಂಬಸ್ಥರ ನಡುವೆ ವೈಮನಸ್ಯ ಉಂಟಾಗಬಹುದು. ನಿಮ್ಮ ಮನೆಯಲ್ಲೂ ಇಂತಹ ಸಮಸ್ಯೆಗಳು ಇದ್ದರೆ ನೀವು ಪಾರಿಜಾತ ಗಿಡವನ್ನು ನೆಟ್ಟರೆ ಎಲ್ಲಾ ವಾಸ್ತುದೋಷಗಳು ದೂರಾಗುತ್ತದೆ . ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಪಾರಿಜಾತದಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ ಎಂದು ನಂಬಲಾಗಿದೆ.

ಪಾರಿಜಾತ ಗಿಡದಲ್ಲಿ ಲಕ್ಷ್ಮೀ ನೆಲೆಸಿರುವುದರಿಂದ ಮನೆಯ ಅಂಗಳದಲ್ಲಿ ಈ ಗಿಡವನ್ನು ನೆಟ್ಟರೆ ಮನೆಯ ವಾಸ್ತುದೋಷವು ನಿವಾರಣೆಯಾಗಿ ಸುಖ ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರವಿರುತ್ತದೆ. ಅಲ್ಲದೇ ಕುಟುಂಬ ಸದಸ್ಯರ ನಡುವೆ ಒಗ್ಗಟ್ಟು ಹೆಚ್ಚಾಗುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಪಾರಿಜಾತ ಗಿಡವನ್ನು ನೆಟ್ಟರೆ ಕುಟುಂಬದಲ್ಲಿನ ವೈಮನಸ್ಸು ದೂರವಾಗುತ್ತದೆ ಎಂದು ನಂಬಲಾಗಿದೆ. ಕುಟುಂಬ ಸದಸ್ಯರು ದೀರ್ಘಾವದಿಯ ಕಾಯಿಲೆಯಿಂದ ಬಳಲುತ್ತಿದ್ದರೆ ಅನಾರೋಗ್ಯ ದೂರಾಗಿ ದೀರ್ಘಾಯುಷ್ಯ ಸಿಗಲಿದೆ. ಮಾನಸಿಕ ಒತ್ತಡಗಳು ದೂರಾಗುತ್ತದೆ. ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಪಾರಿಜಾತ ಗಿಡದಲ್ಲಿ ಬಿಳಿ ಬಣ್ಣದ ದೂವು ಮನೆಯ ತುಂಬೆಲ್ಲ ಸುಗಂಧವನ್ನು ಪಸರಿಸುತ್ತದೆ. ಈ ಹೂವು ಮಾತಾ ಲಕ್ಷ್ಮೀಗೆ ತುಂಬಾ ಪ್ರಿಯಕರ ಎಂದು ನಂಬಲಾಗಿದೆ. ಆದ್ದರಿಂದ ಪಾರಿಜಾತದ ಹೂವನ್ನು ಲಕ್ಷ್ಮೀಗೆ ಅರ್ಪಿಸಿದರೆ ಶ್ರೇಷ್ಠ ಎಂದು ನಂಬಲಾಗಿದೆ. ಇದ್ದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ.

ಇದನ್ನು ಓದಿ: Best Vastu Tips :ಮಲಗುವ ಕೋಣೆ ಹಾಗೂ ಅಡುಗೆ ಕೋಣೆಯಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ

ಇದನ್ನೂ ಓದಿ : Vaastu Tips Money loss : ಧನಹಾನಿಯಿಂದ ಪಾರಾಗಲು ಮನೆಯಲ್ಲಿ ಈ ಬದಲಾವಣೆಯನ್ನು ಮಾಡಿ

plant parijat in house you get virtue like tulsi astrology vastu tips

Comments are closed.