ಅಪಘಾತದಿಂದಾಗಿ ತೀವ್ರ ನಿಗಾ ಘಟಕ್ಕೆ ಸೇರಿದ ಬಡ ಯುವಕ: ಆಕಾಶ್‌ ಚಿಕಿತ್ಸೆಗೆ ಬೇಕಿದೆ ನಿಮ್ಮ ನೆರವಿನ ಹಸ್ತ

ನೆರವು ನೀಡಿ: ಬೀಜಾಡಿ: ಉಡುಪಿ ಜಿಲ್ಲೆಯ ಬೀಜಾಡಿಯ ಶೇಖರ್‌ ಬಿ.ಪಿ ಮತ್ತು ಗೀತಾ ಅವರ ಮಗ ಆಕಾಶ್‌ ಬೆಂಗಳೂರಿನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 21 ವರ್ಷದ ಆಕಾಶ್‌ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಕಾಶ್‌ ಅವರ ಚಿಕಿತ್ಸೆಗೆ ಬಹಳಷ್ಟು ಹಣ ಖರ್ಚಾಗುತ್ತಿದೆ. ಎರಡು ದಿನದ ಆಸ್ಪತ್ರೆಯ ವೆಚ್ಚ ಸುಮಾರು 7 ಲಕ್ಷ ದಾಟಿದೆ. ಬಡ ಕುಟುಂಬದಿಂದ ಬಂದು ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದ ಆಕಾಶ್‌ ಅವರು ಚೇತರಿಸಿಕೊಳ್ಳಲು ಇನ್ನೂ ಚಿಕಿತ್ಸೆಯ ಅಗತ್ಯವಿದೆ. ಅದಕ್ಕೆ ಸಾಕಷ್ಟು ಹಣ ಕೂಡಾ ಖರ್ಚಾಗಲಿದೆ. ಆಕಾಶ್‌ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದೆ. ಸಹಾಯ ಮಾಡ ಬಯಸುವವರು ಈ ಫೋನ್‌ ಪೇ ನಂಬರ್‌ 9901268700 ಅಥವಾ 9945330256 ಗೆ ತಮ್ಮ ಕೈಲಾದಷ್ಟು ನೆರವು ನೀಡಿ ಆಕಾಶ್‌ ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡಬಹುದಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories