ಸಾಕ್ಷರತಾ ಪ್ರಮಾಣದಲ್ಲಿ ವಿಶೇಷ ಸಾಧನೆ : ಶೀಘ್ರದಲ್ಲೇ ಉಡುಪಿ ರಾಜ್ಯದಲ್ಲೇ ನಂ.1 ಸಾಕ್ಷರ ಜಿಲ್ಲೆ ಗರಿಮೆ

Udupi Literacy : ಉಡುಪಿ : ಸಾಕ್ಷರತೆಯ ಪ್ರಮಾಣದಲ್ಲಿ ನಮ್ಮ ಉಡುಪಿ ಜಿಲ್ಲೆ ವಿಶೇಷ ಸಾಧನೆಗೈದಿದೆ. ಶೀಘ್ರದಲ್ಲಿಯೇ ಉಡುಪಿ ಜಿಲ್ಲೆಯು ರಾಜ್ಯದ ನಂ.1 ಸಾಕ್ಷರ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಲಿದ್ದು ಈ ಸಂಬಂಧ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ.

ಸಾಕ್ಷರತಾ ಜಿಲ್ಲೆ ಘೋಷಣೆಗೆ ಆಯಾ ಗ್ರಾಮ ಪಂಚಾಯ್ತಿ ಪಿಡಿಓಗಳಿಂದ ದೃಢೀಕರಣ ಪ್ರಮಾಣ ಪತ್ರದ ಅವಶ್ಯಕತೆಯಿದ್ದು ಈ ಸಂಬಂಧ ಅಧಿಕಾರಿಗಳು ಪ್ರಮಾಣ ಪತ್ರ ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ.

ರಾಜ್ಯ ಸರ್ಕಾರದ ಸಾಕ್ಷರತಾ ಯೋಜನೆಯ ಅಡಿಯಲ್ಲಿ 15 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆಮಾಡಿಕೊಂಡು ಅಕ್ಷರಾಭ್ಯಾಸ ಮಾಡಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ 6158 ಮಂದಿ ನವಸಾಕ್ಷರರ ಸಾಲಿಗೆ ಸೇರಿದ್ದು ಈ ಮೂಲಕ ಉಡುಪಿ ಜಿಲ್ಲೆಯ ಸಾಕ್ಷರತಾ ಪ್ರಮಾಣ 95 ಪ್ರತಿಶತಕ್ಕೆ ಏರಿಕೆ ಕಂಡಿದೆ. ಉಳಿದ 5 ಪ್ರತಿಶತ ಜನರಿಗೂ ಶೀಘ್ರದಲ್ಲಿಯೇ ಅಕ್ಷರಾಭ್ಯಾಸ ಕಲಿಸಲು ತಯಾರಿ ನಡೆದಿದೆ.

Also Read : ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಮತ್ತಷ್ಟು ಸುಲಭ; ಆನ್​ಲೈನ್​ನಲ್ಲೇ ಸಿಗಲಿದೆ ಮಾಹಿತಿ

ನವಸಾಕ್ಷರರಿಗೆ ನೀಡುವ ಪ್ರಮಾಣ ಪತ್ರವು 7ನೇ ತರಗತಿಯ ವಿದ್ಯಾಭ್ಯಾಸಕ್ಕೆ ಸಮನಾಗಿ ಇರುತ್ತದೆ. 95 ಪ್ರತಿಶತ ಸಾಕ್ಷರರಿದ್ದರೂ ಆ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆ ಎಂದೇ ಘೋಷಿಸಲಾಗುತ್ತದೆ.

ಆದರೂ ಉಳಿದ 5 ಪ್ರತಿಶತ ಜನರಿಗೂ ಶಿಕ್ಷಣ ನೀಡುತ್ತೇವೆ. 3 ತಿಂಗಳು ಶಿಕ್ಷಣ ನೀಡಿ ಬಳಿಕ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಿದ್ದೇವೆ ಎಂದು ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯೋಗ ನರಸಿಂಹ ಸ್ವಾಮಿ ಕೆ.ಎಂ ಮಾಹಿತಿ ನೀಡಿದ್ದಾರೆ.

Also Read : ಉಡುಪಿ ಜಿಲ್ಲಾ ರೈತ ಸಂಘದಿಂದ ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆ: ಸ್ಥಳ ಪರಿಶೀಲನೆ

Big Win for Udupi How this Coastal District is Topping Karnatakas Literacy Charts

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories