ಉಡುಪಿ : ಗ್ಯಾಸ್​ ಅಭಾವ.. ಸಂಕಷ್ಟದಲ್ಲಿ ಚಿನ್ನಾಭರಣ ತಯಾರಕರು..!

LPG Cylinder Shortage: ಚಿನ್ನಾಭರಣ ಮೇಕಿಂಗ್​ ಘಟಕಗಳು ಸಂಪೂರ್ಣ ಸಿಲಿಂಡರ್​ಗಳ ಮೇಲೆಯೇ ಅವಲಂಬಿತವಾಗಿದ್ದು, ಇವುಗಳ ಅಭಾವದಿಂದಾಗಿ ಹೊಸ ತಲೆನೋವು ಶುರುವಾಗಿದೆ.

ಉಡುಪಿ : ಮೊದಲೇ ಬೆಲೆ ಏರಿಕೆಯಿಂದಾಗಿ ಚಿನ್ನಾಭರಣ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ನಡುವೆ ಇದೀಗ ಚಿನ್ನಾಭರಣ ಉದ್ಯಮಕ್ಕೂ ಗ್ಯಾಸ್​ ಸಂಕಷ್ಟ ಎದುರಾಗಿದೆ. ಹೌದು..! ಉಡುಪಿಯಲ್ಲಿ ಚಿನ್ನಾಭರಣ ತಯಾರಕ ಘಟಕಗಳು ಗ್ಯಾಸ್​ ಎಮೆರ್ಜೆನ್ಸಿ (LPG Cylinder Shortage) ಎದುರಿಸುತ್ತಿವೆ. ಚಿನ್ನಾಭರಣ ಮೇಕಿಂಗ್​ ಘಟಕಗಳು ಸಂಪೂರ್ಣ ಸಿಲಿಂಡರ್​ಗಳ ಮೇಲೆಯೇ ಅವಲಂಬಿತವಾಗಿದ್ದು, ಇವುಗಳ ಅಭಾವದಿಂದಾಗಿ ಹೊಸ ತಲೆನೋವು ಶುರುವಾಗಿದೆ.

ಮೊದಲೆಲ್ಲ ಫೆರಿಫಿನ್​ ವ್ಯಾಕ್ಸ್​ ಬಳಸಿ ಚಿನ್ನಾಭರ ತಯಾರಿ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಚಿನ್ನಾಭರಣ ತಯಾರಿಕಾ ಘಟಕಗಳು ಗ್ಯಾಸ್​ ಸಂಪರ್ಕ ಹೊಂದಿವೆ. ಚಿನ್ನ ಬಿಸಿ ಮಾಡುವುದು, ಆಭರಣಗಳಿಗೆ ನಿಖರವಾದ ಆಕಾರ ನೀಡುವಲ್ಲಿ ಚಿನ್ನಾಭರಣದ ಪಾತ್ರ ಮಹತ್ವದ್ದಾಗಿದೆ. ಎರಡು ದಿನಗಳಿಗೆ ಒಮ್ಮೆ ಹೊಸ ವಾಣಿಜ್ಯ ಸಿಲಿಂಡರ್​ನ ಅವಶ್ಯಕತೆ ಇರುತ್ತದೆ. ಆದರೆ ಇದೀಗ ವಾಣಿಜ್ಯ ಸಿಲಿಂಡರ್​ಗೆ ಅಭಾವ ಎದುರಾಗಿರುವುದಿಂದ ಚಿನ್ನಾಭರಣ ತಯಾರಿಕಾ ಉದ್ಯಮಕ್ಕೂ ಬಿಸಿ ತಟ್ಟಿದಂತಾಗಿದೆ.

ಇದನ್ನೂ ಓದಿ: ಗ್ಯಾಸ್ ಬಿಲ್ ಅಪ್‌ಡೇಟ್ ಹೆಸರಲ್ಲಿ ಉಡುಪಿ ಮಹಿಳೆಗೆ ₹1.45 ಲಕ್ಷ ನಾಮ ! ಇಪಿಎಸ್‌ (APK) ಲಿಂಕ್ ಬಗ್ಗೆ ಇರಲಿ ಎಚ್ಚರ

ಚಿನ್ನದ ಬೆಲೆ ಏರಿಕೆಯಿಂದಾಗಿ ಉತ್ಪಾದನೆ ಕುಂಠಿತಗೊಂಡಿದೆ. ಇದೀಗ ಗ್ಯಾಸ್​ ಅಭಾವದಿಂದ ಚಿನ್ನಾಭರಣ ತಯಾರಿಕೆ ಸ್ಥಗಿತಗೊಂಡರೆ ನಮ್ಮ ಕತೆ ಏನು ಎಂದು ಅಕ್ಕಸಾಲಿಗರು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನಮ್ಮ ಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಒದಗಿಸಬೇಕು ಎಂದು ಉಡುಪಿಯ ಅಕ್ಕಸಾಲಿಗರು ಮನವಿಮಾಡಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories