ಎಸ್​.ಎಸ್​.ಎಲ್​.ಸಿ ಫಲಿತಾಂಶ : ದಕ್ಷಿಣ ಕನ್ನಡ ಫಸ್ಟ್​ , ಕಲಬುರಗಿ ಲಾಸ್ಟ್​

ಈ ಬಾರಿಯ ಎಸ್​.ಎಸ್​.ಎಲ್​.ಸಿ ಫಲಿತಾಂಶದಲ್ಲಿ ಉಡುಪಿಯ ಪ್ರೀತಂ, ದಾವಣಗೆರೆಯ ಭರತ್​, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್​ , ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

2025-26ನೇ ಸಾಲಿನ ಎಸ್​.ಎಸ್​.ಎಲ್​.ಸಿ ಪರೀಕ್ಷಾ ಫಲಿತಾಂಶ ಇಂದು ಹೊರಬಿದ್ದಿದೆ. ದ್ವಿಭಾಷಾ ನೀತಿಯ ಗೊಂದಲಗಳ ನಡುವೆ ಈ ಬಾರಿ ರಾಜ್ಯವಾರು 94.1 ಪ್ರತಿಶತ ಫಲಿತಾಂಶ ದಾಖಲಾಗಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನು ಈ ಬಾರಿಯ ಎಸ್​.ಎಸ್​.ಎಲ್​.ಸಿ ಫಲಿತಾಂಶದಲ್ಲಿ ಉಡುಪಿಯ ಪ್ರೀತಂ, ದಾವಣಗೆರೆಯ ಭರತ್​, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್​ , ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Karnataka SSLC Result 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಇನ್ನು ಈ ಬಾರಿಯ ಎಸ್​.ಎಸ್​.ಎಲ್​ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದಿದ್ದರೆ ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದೆ.
ಈ ಬಾರಿಯ ಜಿಲ್ಲಾವಾರು ಎಸ್​.ಎಸ್​.ಎಲ್​.ಸಿ ಫಲಿತಾಂಶವನ್ನು ನೋಡುವುದಾದರೆ :

ದಕ್ಷಿಣ ಕನ್ನಡ ಜಿಲ್ಲೆ- 98.40%
ಉಡುಪಿ – 98.18%
ಉತ್ತರ ಕನ್ನಡ- 98.09%
ಹಾಸನ- 97.51%
ಮಂಡ್ಯ- 97.45%
ಶಿರಸಿ- 97.21%
ಹಾವೇರಿ- 96.87%
ಕೊಡಗು- 96.70%
ಶಿವಮೊಗ್ಗ- 96.56%
ವಿಜಯನಗರ- 96.39%
ಬೆಂಗಳೂರು ಗ್ರಾಮಾಂತರ – 95.84%
ಧಾರವಾಡ – 95.59%
ಕೋಲಾರ- 95.50%
ಬಾಗಲಕೋಟೆ- 95.42%
ಬೆಂಗಳೂರು ಉತ್ತರ- 95.34%
ಗದಗ- 95.24%
ಚಿಕ್ಕಮಗಳೂರು- 94.99%
ಬೆಳಗಾವಿ – 94.75%
ದಾವಣಗೆರೆ- 94.64%
ಮೈಸೂರು- 94.50%
ರಾಯಚೂರು- 94.41%
ವಿಜಯಪುರ- 94.17%
ಚಿಕ್ಕೋಡಿ- 94.09%
ಬಳ್ಳಾರಿ- 93.36%
ಕೊಪ್ಪಳ- 93.10%
ರಾಮನಗರ- 92.83%
ಚಿತ್ರದುರ್ಗ- 92.25%
ಬೀದರ್- 92.18%
ತುಮಕೂರು- 92.04%
ಚಾಮರಾಜನಗರ- 91.89%
ಯಾದಗಿರಿ- 91.89%
ಬೆಂಗಳೂರು ದಕ್ಷಿಣ- 91.65%
ಚಿಕ್ಕಬಳ್ಳಾಪುರ- 90.88%
ಮಧುಗಿರಿ- 90.26%
ಕಲಬುರಗಿ-85.06%

ಇದನ್ನೂ ಓದಿ : SSLC Result 2026 : ಮುದ್ದೂರು ವಿಎಸ್‌ಎಸ್‌ನ ಕಲ್ಯಾಣಿಗೆ ರಾಜ್ಯದಲ್ಲಿ 5ನೇ ರಾಂಕ್‌, ಸತತ 100 % ರಿಸಲ್ಟ್‌

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories