ಬಿಗ್ ಬಾಸ್ ಸ್ಪರ್ಧಿಗಳಿಗೆ,ಪ್ರೇಕ್ಷಕರಿಗೆ ಶಾಕ್…! ಈ ವಾರವೂ ಕತೆ ಹೇಳೋಕೆ ಬರ್ತಿಲ್ಲ ಕಿಚ್ಚ ಸುದೀಪ್…!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ವಾರದ ಕತೆ ಕಿಚ್ಚನ ಜೊತೆ ನೋಡೋದೆ ಒಂದು ವಿಶಿಷ್ಟ ಅನುಭವ. ಎಲ್ಲರನ್ನು ರೇಗಿಸುತ್ತ, ಮಾತಿನಲ್ಲೇ ನೀಡಬೇಕಾದ ಸ್ಪಷ್ಟ ಸಂದೇಶ ರವಾನಿಸುತ್ತ ಕಿಚ್ಚ ಸುದೀಪ್ ನಡೆಸಿಕೊಡುವ ಎಲಿಮಿನೇಶನ್ ಹಾಗೂ ಆಂಕ್ಯರಿಂಗ್ ಎಲ್ಲರನ್ನು ಸೆಳೆಯುತ್ತೆ. ಆದರೆ ಎರಡು ವಾರದಿಂದ ಕಿಚ್ಚನ ಕಂಠ ಬಿಗ್ ಬಾಸ್ ಮನೆಯಲ್ಲಿ ಕೇಳಲಿಲ್ಲ. ಈಗ ಮೂರನೇ ವಾರವೂ ಸುದೀಪ್ ದೊಡ್ಮನೆಯಿಂದ ದೂರ ಉಳಿದಿದ್ದಾರೆ.

ಸಾಲು ಸಾಲು ಕಾರ್ಯಕ್ರಮಗಳು, ಸಿನಿಮಾ ಶೂಟಿಂಗ್ ನಿಂದ ದಣಿದಿದ್ದ ನಟ ಸುದೀಪ್ ಅನಾರೋಗ್ಯಕ್ಕಿಡಾಗಿದ್ದರು. ಹೀಗಾಗಿ ಎರಡು ವಾರಗಳ ಸುದೀಪ್  ಬಿಗ್ ಬಾಸ್ ಮನೆಯಲ್ಲಿ ವಾರದ ಕತೆ ಹೇಳೋಕೆ ಬಂದಿರಲಿಲ್ಲ. ಆದರೆ ಬಿಗ್ ಬಾಸ್ ಶೋ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದ ಸುದೀಪ್ ಆದಷ್ಟು ಬೇಗ ಶೋ ಗೆ ಮರಳೋದಾಗಿ ಹೇಳಿದ್ದರು.

ಎರಡು ವಾರಗಳ ಬಳಿಕ ಮೊನ್ನೆಯಷ್ಟೇ ಟ್ವೀಟ್ ಮಾಡಿದ್ದ ಸುದೀಪ್ ನಿಮ್ಮೆಲ್ಲರ ಹಾರೈಕೆಯಿಂದ ನಾನು ಚೇತರಿಸಿಕೊಂಡಿದ್ದೇನೆ. ಈ ವಾರದ ಬಿಗ್ ಬಾಸ್ ಶೋಗೆ ಬರುತ್ತಿದ್ದೇನೆ ಎಂದಿದ್ದರು. ಆದರೆ ಈಗ ಬಿಗ್ ಬಾಸ್ ಅಂಗಳದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಈ ವಾರ ಬಿಗ್ ಬಾಸ್ ವಾರದ ಕತೆ ಶೂಟಿಂಗ್ ಮಾಡದಿರಲು ನಿರ್ಧರಿಸಿದೆ. ಹೀಗಾಗಿ ಕಿಚ್ಚನ ಜೊತೆ ವಾರದ ಕತೆ ಹಾಗೂ ಎಲಿಮಿನೇಶನ್ ರದ್ದಾಗಿದೆ.

ಎಲಿಮಿನೇಶನ್ ಪ್ರಕ್ರಿಯೆಯನ್ನು ಓಟ್ ಆಧಾರದಲ್ಲಿ ನಡೆಸಲು ಬಿಗ್ ಬಾಸ್ ನಿರ್ಧರಿಸಿದೆ. ಹೀಗಾಗಿ ಈ ವಾರವೂ ಸುದೀಪ್ ರನ್ನು ತೆರೆ ಮೇಲೆ ನೋಡೋ ಪ್ರೇಕ್ಷಕರ ಆಸೆ ಗೆ ನಿರಾಸೆಯೇ ಉತ್ತರವಾಗಿದೆ. ಕೊರೋನಾ ಎರಡನೇ ಅಲೆಯ ಸಂಕಷ್ಟ ಹಾಗೂ ಸರ್ಕಾರದ ಕೊವಿಡ್-19 ನಿಯಮಗಳ ಹಿನ್ನೆಲೆಯಲ್ಲಿ ಬಿಗ್ ಬಾಸ್ ಈ ನಿರ್ಧಾರ ಕೈಗೊಂಡಿದೆಯಂತೆ. ಹೀಗಾಗಿ ಸುದೀಪ್ ಅನಾರೋಗ್ಯದಿಂದ ಚೇತರಿಸಿಕೊಂಡ್ರು ಶೋ ದಿಂದ ಹೊರಗುಳಿಯುವಂತಾಗಿದೆ.

ಬಿಗ್ ಬಾಸ್ ಕನ್ನಡದ 8 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಇಲ್ಲದೇ ಮೂರು ವಾರಗಳ ಓಟಿಂಗ್ ಪ್ರಕ್ರಿಯೆ ನಡೆದಿದ್ದು, ಸ್ಪರ್ಧಿಗಳು ಹಾಗೂ ಪ್ರೇಕ್ಷಕರು ಸುದೀಪ್ ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಕಮೆಂಟ್ ಮಾಡ್ತಿದ್ದಾರೆ.

ಸುದೀಪ್ ಕೂಡ  ಕಲರ್ಸ್ ಚಾನೆಲ್ ಹಾಗೂ ಬಿಗ್ ಬಾಸ್ ನ  ಈ ನಿರ್ಧಾರವನ್ನು  ಒಪ್ಪಿಕೊಂಡಿದ್ದು ಸಧ್ಯದ ಸ್ಥಿತಿಯಲ್ಲಿ ನಾವೆಲ್ಲರೂ ಒಂದೆಡೆ ಸೇರೋದು ಹಾಗೂ ಶೂಟಿಂಗ್ ನಡೆಸೋದು ಸರಿಯಲ್ಲ. ಬೇಸರ ಬೇಡ ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.

Comments are closed.