ವೈದ್ಯಕೀಯ ಶಿಕ್ಷಣ ಖಾತೆಯ ಬಗ್ಗೆ ಅಸಮಾಧಾನವಿದೆ : ರಾಜೀನಾಮೆ ನೀಡಿಲ್ಲವೆಂದ್ರು ಸಚಿವ ಮಾಧುಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವರ ಖಾತೆಗಳ ಮರು ಹಂಚಿಕೆಯನ್ನು ಮಾಡಲಾಗಿದೆ. ಜಿ.ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಇದು ಸಚಿವ ಮಾಧುಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಖಾತೆಗಳ ಮರು ಹಂಚಿಕೆಯ ಬೆನ್ನಲ್ಲೇ ಮಾಧುಸ್ವಾಮಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆನ್ನುವ ಸುದ್ದಿ ಹರಿದಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಾಧುಸ್ವಾಮಿ, ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಜನರ ಜೊತೆಗೆ ಇದ್ದು ಕೆಲಸ ಮಾಡುವ ಖಾತೆಯನ್ನು ನೀಡಿದ್ದರೆ ಖುಷಿಯಾಗುತ್ತಿತ್ತು. ಆದರೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಇದಕ್ಕೂ ನನಗೂ ಸಂಬಂಧವೇ ಇಲ್ಲಾ ಎಂದು ಸಚಿವ ಮಾಧುಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ತನಗೆ ಈ ಹಿಂದೆ ಇದ್ದ ಖಾತೆಯಲ್ಲಿಯೇ ಸಮಾಧಾನವಿತ್ತು. ಆದರೆ ಗ್ರಾಮೀಣ ಭಾಗದಿಂದ ಬಂದವನು, ನನಗೂ ವೈದ್ಯಕೀಯ ಶಿಕ್ಷಣ ಖಾತೆಗೂ ಸಂಬಂಧವೇ ಇಲ್ಲಾ. ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರವಿದೆ. ಅದನ್ನು ಹೊರತಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ನಿರ್ದಾರವನ್ನು ತಾನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.