ಅಕ್ಟೋಬರ್ 16 ರಂದು ಮತ್ತೊಮ್ಮೆ ತೆರೆಗೆ ಶಿವಾರ್ಜುನ…! ಖುಷಿಸುದ್ದಿ ಹಂಚಿಕೊಂಡ ಮೇಘನಾರಾಜ್….!

0

ಶಿವಾರ್ಜುನ್..ಇತ್ತೀಚಿಗೆ ಚಿತ್ರರಂಗವನ್ನು ಅಗಲಿದ ಪ್ರತಿಭಾನ್ವಿತ ಯುವನಟ ಚಿರಂಜೀವಿ ಸರ್ಜಾ ಅಭಿನಯದ ತೆರೆಕಂಡ ಕೊನೆಯ ಚಿತ್ರ. ಚಿರು ಬದುಕಿದ್ದರೇ ಇನ್ನು ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಲು ಅವಕಾಶವಿತ್ತು. ಆದರೆ ತಮ್ಮ ಮುದ್ದು ಕಂದ  ಭುವಿಗೆ ಬರೋ ಮುನ್ನವೇ ಚಿರು ಚಿರನಿದ್ರೆಗೆ ಜಾರಿದ್ದಾರೆ. ಆದರೆ ಚಿರು ನಿಧನದ ಬಳಿಕವೂ ತಮ್ಮ ನಟನೆಯ ಮೂಲಕ ಜೀವಂತವಾಗಿದ್ದು, ಮತ್ತೊಮ್ಮೆ ಶಿವಾರ್ಜುನ್ ತೆರೆಗೆ ಬರಲಿದೆ.

ಕೊರೋನಾ ಎಫೆಕ್ಟ್ ನಿಂದ ಬಾಗಿಲು ಮುಚ್ಚಿದ್ದ ಥೀಯೇಟರ್ ಗಳು ಅಕ್ಟೋಬರ್ 15 ರಿಂದ ಕಾರ್ಯಾರಂಭ ಮಾಡುವ ನೀರಿಕ್ಷೆ ಇದ್ದು, ಸರ್ಕಾರವೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಥಿಯೇಟರ್ ಗಳು ಬಾಗಿಲು ತೆರೆಯುತ್ತಿದ್ದಂತೆ ಶಿವಾರ್ಜುನ ಮತ್ತೊಮ್ಮೆ ರಿಲೀಸ್ ಆಗಲಿದ್ದು, ಈ ಖುಷಿ ವಿಚಾರವನ್ನು ಸ್ವತಃ ಮೇಘನಾ ಸರ್ಜಾ ಕೂಡಾ ಖಚಿತಪಡಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ಚಿರು ಬರಲಿದ್ದಾರೆ.

ಕೊರೋನಾ ತೀವ್ರಗೊಳ್ಳುವ ಕೆಲವೇ ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರಂದು ಶಿವಾರ್ಜುನ್ ತೆರೆ ಕಂಡಿತ್ತು. ಶಿವತೇಜಾ ನಿರ್ದೇಶನದ  ಈ ಚಿತ್ರದ ಮೇಲೆ ನಟ ಚಿರಂಜೀವಿ ಸರ್ಜಾಗೆ ಸಾಕಷ್ಟು ನೀರಿಕ್ಷೆ ಇತ್ತು. ಉತ್ತಮ ಪ್ರದರ್ಶನ ಕಾಣುತ್ತಿದ್ದ ಚಿತ್ರಕ್ಕೆ ಕೊರೋನಾ ಲಾಕ್ ಡೌನ್ ಹೊಡೆತವಾಗಿ ಪರಿಣಮಿಸಿತ್ತು.  ನೋವು ಕೂಡ  ಸಾವಿಗೂ ಕೆಲ ದಿನಗಳ ಮೊದಲು ಚಿರು ಅವರನ್ನು ಬಾಧಿಸಿತ್ತು.

ಶಿವಾರ್ಜುನ ಚಿತ್ರದ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದ ಚಿರಂಜೀವಿ ಸರ್ಜಾ, ಇದು ತಮ್ಮ ಕೆರಿಯರ್ ನ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸದಲ್ಲಿದ್ದರಂತೆ. ಆದರೆ  ತೆರೆಕಾಣುತ್ತಿದ್ದಂತೆ ಲಾಕ್ ಡೌನ್ ಜಾರಿಯಾಗಿದ್ದರಿಂದ ನೊಂದುಕೊಂಡಿದ್ದ ಚಿರಂಜೀವಿ ಸರ್ಜಾಗೆ ಕುಟುಂಬಸ್ಥರು ಸಾಂತ್ವನ ಹೇಳಿದ್ದರಂತೆ.

ಆಗ ಲಾಕ್ ಡೌನ್ ನಿಂದ ಸರಿಯಾಗಿ ಪ್ರದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧಿರಿಸಿದೆ. ಇದೇ ಅಕ್ಟೋಬರ್ 16 ರಂದು ಶುಕ್ರವಾರ ಶಿವಾರ್ಜುನ್ ಚಿತ್ರ ತೆರೆಗೆ ಬರಲಿದ್ದು, ಈ ಖುಷಿ ವಿಚಾರವನ್ನು ಚಿರು ಪತ್ನಿ ನಟಿ ಮೇಘನಾ ಸರ್ಜಾ ತಮ್ಮ ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಚಿರು ಉದಯಿಸಲಿದ್ದಾರೆ ಎಂಬಂರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ. ಇದೇ ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬವಿದ್ದು  ಪ್ರಯುಕ್ತ 16 ರಂದು ಚಿತ್ರ ತೆರೆಕಾಣಲಿದೆ.

Leave A Reply

Your email address will not be published.