ನನ್ನನ್ನು ಬಳಸಿ ಬಿಸಾಡಿದ್ರು….! ಖ್ಯಾತ ನಟನ ವಿರುದ್ಧ ಸ್ಯಾಂಡಲ್ ವುಡ್ ನಟಿ ಅಕ್ರೋಶ….!

ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪ ಸಾಮಾನ್ಯ ಸಂಗತಿಯಂತಾಗಿದ್ದು, ಇದೀಗ ತಮಿಳು ಖ್ಯಾತ ನಟ ಹಾಗೂ ನಿರ್ಮಾಪಕ ವಿಶಾಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.

ಸ್ಯಾಂಡಲ್ ವುಡ್ ನ ಮನಸೆಲ್ಲಾ ನೀನೆ ಚಿತ್ರದ ನಟಿ  ಗಾಯತ್ರಿ ರಘುರಾಮ್, ವಿಶಾಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ‌ ಮಾಡಿದ್ದು ಸರಣಿ ಟ್ವಿಟ್ ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ವಿಶಾಲ್ ಒಮ್ಮೆ‌ಹೊರಗಡೆ ನೋಡು ನಿನ್ನ ಹೊರಗೆ ಏನಾಗುತ್ತಿದೆ ಎಂದು, ಹೊಸದಾಗಿ  ಬರುತ್ತಿರುವ ನಟಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡು.ನೀನು ಮತ್ತು ನಿನ್ನ ಸ್ನೇಹಿತರು ಇದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿನಗೆ ಅಭ್ಯಾಸವಾಗಿದೆ ಎಂದು ಗಾಯತ್ರಿ ರಘುರಾಮ್ ಕಿಡಿಕಾರಿದ್ದಾರೆ. ನಟ ವಿಶಾಲ್ ಕಳೆದ ಕೆಲ ತಿಂಗಳಿನಿಂದ ವಿವಾದಕ್ಕೆ ಗುರಿಯಾಗುತ್ತಲೇ ಇದ್ದು, ತಮ್ಮ ಬಹುಕಾಲದ ಸ್ನೇಹಿತೆ ಅನಿಶಾ ಜೊತೆಗೂ ವಿಶಾಲ್ ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ.

ವಿಶಾಲ್ ನಟಿಸಿದ್ದ ಚಿತ್ರ ಆಕ್ಷ್ಯನ್ ಸಿನಿಮಾ ನಿರ್ಮಾಪಕರು ಕೂಡ ವಿಶಾಲ್ ವಿರುದ್ಧ ಸಮರ ಸಾರಿದ್ದು ನ್ಯಾಯಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಪ್ರಕರಣವೂ ನಿರ್ಮಾಪಕರ ಪರವಾಗಿದ್ದು ವಿಶಾಲ್ ಗೆ 8 ಕೋಟಿ ರೂಪಾಯಿ ಹಣವನ್ನು ನಿರ್ಮಾಪಕರಿಗೆ ಮರಳಿಸುವಂತೆ ನ್ಯಾಯಾಲಯ ಸೂಚಿಸಿತ್ತು.

ಇದೀಗ ವಿಶಾಲ್ ವಿರುದ್ಧ ಕನ್ನಡದ ನಟಿ ಗಾಯತ್ರಿ ರಘುರಾಮ್ ಕೂಡ ಆರೋಪ ಮಾಡಿದ್ದಾರೆ.‌ ಮನಸೆಲ್ಲಾ ನೀನೆ  ಚಿತ್ರದ ಬಳಿಕ ಕೋರಿಯೋ ಗ್ರಾಫಿಯಲ್ಲಿ ತೊಡಗಿಸಿ ಕೊಂಡ ಗಾಯತ್ರಿ ಬಿಗ್ ಬಾಸ್ ಸ್ಪರ್ಧಿಯಾಗಿ ದ್ದರು.

Comments are closed.