ಚಿನ್ನದ ಕಾಯಿನ್ ನಲ್ಲಿ ಬಂಗಾರದ ಮನುಷ್ಯ….! ನಟಸಾರ್ವಭೌಮನಿಗೆ ಸ್ವರ್ಣ ನಮನ..!!

0

ಬೆಂಗಳೂರು : ಡಾ.ರಾಜ್ ಕುಮಾರ್ ಯಾರಿಗೆ ಗೊತ್ತಿಲ್ಲ ಹೇಳಿ ? ಭಾಷೆ ಮೀರಿ ದೇಶದ ಎಲ್ಲಾ ಸಿನಿ ರಸಿಕರನ್ನು ಸೆಳೆದ ಡಾ.ರಾಜ ಕುಮಾರ್ ಗೆ ಈಗಾಗಲೇ ಸಾಕಷ್ಟು ಗೌರವ, ಪ್ರಶಸ್ತಿಗಳು ಸಂದಿವೆ. ಆದರೆ ಇದೇ ಮೊದಲ ಬಾರಿಗೆ ಸ್ವರ್ಣ ಗೌರವಕ್ಕೆ ಡಾ.ರಾಜ್ ಭಾಜನರಾಗಿದ್ದಾರೆ.

ಹೌದು, ಕಲೆಕ್ಟಿಬಲ್ ಮಿಂಟ್ ಎಂಬ ಚಿನ್ನ ಹಾಗೂ ಬೆಳ್ಳಿ ಕಾಯಿನ್ ಉತ್ಪಾದನಾ ಸಂಸ್ಥೆ ಡಾ.ರಾಜ್ ಕುಮಾರ್ ಕುಟುಂಬದ ಅನುಮತಿ ಪಡೆದು ಡಾ.ರಾಜ್ ಚಿತ್ರವಿರೋ ಚಿನ್ನ ಹಾಗೂ ಬೆಳ್ಳಿ ಕಾಯಿನ್ ಮುದ್ರಿಸಲು ಆರಂಭಿಸಿದೆ.

ಹಲವು ದಿನಗಳ ಕಾಲ ಸಿದ್ಧತೆ ನಡೆಸಿ ಡಾ.ರಾಜ್ ಭಾವಚಿತ್ರವನ್ನು ಚಿನ್ನ ಹಾಗೂ ಬೆಳ್ಳಿ ಕಾಯಿನ್ ಮೇಲೆ ಡಿಸೈನ್ ಮಾಡಲಾಗಿದೆ. ಈ ಕಾಯಿನ್ ಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು ರಾಜಕುಮಾರ್ ಅಭಿಮಾನಿಗಳು ಈ ಕಾಯಿನ್ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ರಾಜಣ್ಣನವರ ಪೌರಾಣಿಕ ಪಾತ್ರಗಳು ಹಾಗೂ ಇತರ ಪಾತ್ರಗಳ ಪೋಟೋ ಚಿತ್ರಿಸಲಾಗಿದ್ದು, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಡಾ.ರಾಜ್ ಕುಮಾರ್ ಎಂದು ಬರೆಯಲಾಗಿದೆ. 15 ಹಾಗೂ 25 ಗ್ರಾಂ ತೂಕದ ಚಿನ್ನದ ನಾಣ್ಯಗಳು ಲಭ್ಯವಿದ್ದು ತೂಕಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗಿದೆ.

ಡಾ.ರಾಜ್ ಅಭಿಮಾನಿಗಳನ್ನು ಸೆಳೆಯೋದು ಹಾಗೂ ಬಂಗಾರದ ಮನುಷ್ಯನಿಗೆ ಗೌರವ ಸಲ್ಲಿಸೋ ಉದ್ದೇಶದಿಂದ ಕಲೆಕ್ಟಿಬಲ್ ಮಿಂಟ್ ಸಂಸ್ಥೆ ಆರಂಭಿಸಿರೋ ಈ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಪದ್ಮಭೂಷಣ,ಕರ್ನಾಟಕ ರತ್ನ,ದಾದಾ ಸಾಹೇಬ್ ಫಾಲ್ಕೆ,ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ ಪಡೆದಿರೋ ಡಾ.ರಾಜ್ ಕುಮಾರ್ ಗೆ ಈಗ ಸ್ವರ್ಣ ಗೌರವ ಸಂದಂತಾಗಿದ್ದು ಕರ್ನಾಟಕ ಹಾಗೂ ಕನ್ನಡಿಗರ ಪಾಲಿಗೆ ಸಂತೋಷದ ವಿಚಾರ.

Leave A Reply

Your email address will not be published.