Meghanaraj: ಕತ್ತಲಾಗಿದ್ದ ಬಾಳಿನಲ್ಲಿ ಬಂದ ಬೆಳಕು ರಾಯನ್: ಮಗನ ನಾಮಕರಣದ ವೇಳೆ ಮೇಘನಾ ಭಾವುಕ

ಅಗಲಿದ ಪತಿಯ ನೆನಪಾಗಿ ತನ್ನ ಬದುಕಿನಲ್ಲಿ ಬಂದಿರೋ ಪುತ್ರನ ನಾಮಕರಣದ ವೇಳೆ ಭಾವುಕರಾದ ನಟಿ ಮೇಘನಾ ತನ್ನ ಪುತ್ರ ತನ್ನ ಪಾಲಿಗೆ ಯುವರಾಜ್ ನಿದ್ದಂತೆ, ಕತ್ತಲಾಗಿದ್ದ ಬಾಳಿನಲ್ಲಿ ಬೆಳಕು ತಂದಿರೋ ಮಗನಿಗೆ ಅದಕ್ಕಾಗೇ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.

ನಗರ ಚಾನ್ಸರಿ ಪೆವಿಲಿಯನ್ ಹೊಟೇಲ್ ನಲ್ಲಿ ಸರಳವಾಗಿ ನಡೆದ ನಾಮಕರಣ ಸಮಾರಂಭದಲ್ಲಿ ಚಿರಂಜೀವಿ ತಂದೆ-ತಾಯಿ ತಮ್ಮ ಮೊಮ್ಮಗುವಿನ ನಾಮಕರಣ ಮಹೋತ್ಸವ ನೆರವೇರಿಸಿದ್ದು, ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ.

ರಾಯನ್ ಎಂದರೇ ಸ್ವರ್ಗದ ಬಾಗಿಲು ತೆರೆಯುವ ಯುವರಾಜ್ ಎಂದರ್ಥ. ಚಿರು ನಿಧನದ ಬಳಿಕ ಕತ್ತಲಾಗಿದ್ದ ನಮ್ಮ ಬದುಕಿನಲ್ಲಿ ಬೆಳಕು ತಂದವರು ನನ್ನ ಮಗನ. ಅವನು ನಮಗೆ ಯುವರಾಜ್ ನೇ ಹೀಗಾಗಿ ರಾಯನ್ ಎಂಬ ಹೆಸರನ್ನು ಆಯ್ಕೆ ಮಾಡಿ ಇಟ್ಟಿದ್ದೇವೆ. ಈ ಹೆಸರು ಎರಡು ಕುಟುಂಬ ಎಲ್ಲರಿಗೂ ಇಷ್ಟವಾಗಿದೆ ಎಂದು ಮೇಘನಾ ಹೇಳಿದ್ದಾರೆ.

https://www.youtube.com/watch?v=vIYbMf9HJRY

ಚಿರುವನ್ನು ನೆನಪಿಸಿಕೊಂಡು ಭಾವುಕರಾದ ಮೇಘನಾ ರಾಜ್, ಚಿರು ನಮಗೆಲ್ಲರಿಗೂ ರಾಜಾನೆ. ಅವರು ಸ್ನೇಹಜೀವಿ. ಅವರು ನಮ್ಮನ್ನು ಬಿಟ್ಟು ಹೋದರೂ ಒಳ್ಳೆಯ ಸ್ನೇಹಿತರನ್ನು ಬಿಟ್ಟು ಹೋಗಿದ್ದಾರೆ.ಅವನ ಸ್ನೇಹಿತರು ನಮಗೆ ಬೆಂಗಾವಲಾಗಿ ನಿಂತಿದ್ದಾರೆ. ಹೀಗಾಗಿ ಪನ್ನಗಾಭರಣ ಹಾಗೂ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಮೇಘನಾ ರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

Actress meghanaraj bold talk about chiru and son raayan

Comments are closed.