Actor Shivaram : ಖ್ಯಾತ ಹಿರಿಯ ನಟ ಶಿವರಾಮ್‌ ಗಂಭೀರ : ಆಸ್ಪತ್ರೆಗೆ ದಾಖಲು

ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಶಿವರಾಮ್‌ (Actor Shivaram) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆಯಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರು ನಗರದ ಪ್ರಶಾಂತ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಕಾರಿನಲ್ಲಿ ತೆರಳಿದ್ದ ವೇಳೆಯಲ್ಲಿ ಶಿವರಾಮ್‌ ಅವರು ಅಪಘಾತಕ್ಕೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಚೇತರಿಸಿಕೊಂಡ ನಂತರದಲ್ಲಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ರಾತ್ರಿಯ ವೇಳೆಯಲ್ಲಿ ದೇವರ ಪೂಜೆ ಮಾಡುವ ಸಂದರೌದಲ್ಲಿ ರೂಂನಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಶಿವರಾಮ್‌ ಅವರ ಹಿರಿಯ ಪುತ್ರ ರವಿಶಂಕರ್‌ ಮಾಹಿತಿ ನೀಡಿದ್ದಾರೆ.

ಶಿವರಾಮ್‌ ಅವರ ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಮೆದುಳಿನಲ್ಲಿ ತೀವ್ರ ರಕ್ತಶ್ರಾವ ಉಂಟಾಗಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಲಾಗಿದ್ದು, ವಯಸ್ಸಿನ ಹಿನ್ನೆಲೆಯಲ್ಲಿ ಸರ್ಜರಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ಐಸಿಯುನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶಿವರಾಮ್ ಕೇವಲ ಕನ್ನಡ ಸಿನಿಮಾವಷ್ಟೇ ಅಲ್ಲಾ ಭಾರತೀಯ ಚಿತ್ರರಂಗದಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದಾರೆ. ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಸುಮಾರು ಆರು ದಶಕಗಳ ಕಾಲ ಸಿನಿಮಾರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹಾಸ್ಯ, ಪೋಷಕ ಪಾತ್ರಗಳ ಮೂಲಕ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಶಿವರಾಮ್‌ ಅವರ ಹಿರಿಯ ಸಹೋದರ ಎಸ್. ರಾಮನಾಥನ್ ಅವರೊಂದಿಗೆ ಸೇರಿಕೊಂಡು1972 ರಲ್ಲಿ ಹೃದಯ ಸಂಗಮವನ್ನು ನಿರ್ದೇಶಿಸುವುದರ ಜೊತೆಗೆ ರಾಶಿ ಬ್ರದರ್ಸ್ ಹೆಸರಿನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಶಿವರಾಮ್‌ ಅವರಿಗೆ ಸಲ್ಲುತ್ತದೆ.

ನಟನಾಗಿ ಶಿವರಾಮ್ ಅವರು ಅನೇಕ ಧೀಮಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ರಾಜಕುಮಾರ್ ಅಭಿನಯದ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಎಲ್ಲಾ ಏಳು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ನಟ, ದೊಡ್ಮನೆ ರಾಜಕುಮಾರ ಎನಿಸಿಕೊಂಡಿದ್ದ ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾದ ಒಂದು ತಿಂಗಳಲ್ಲೇ ಶಿವರಾಮ್‌ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಚಿಂತಾಕ್ರಾಂತರಾಗಿದ್ದಾರೆ.

ಶಿವರಾಮ್‌ ಅವರ ನಿರ್ಮಾಣದಲ್ಲಿ ಗೆಜ್ಜಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್‌ ಹನುಮಂತು, ಧರ್ಮ ದುರೈ, ಬಹಳ ಚೆನ್ನಾಗಿದೆ ಸಿನಿಮಾಗಳು ಮೂಡಿ ಬಂದಿವೆ. ಇನ್ನು ಶಿವರಾಮ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದ ಹೃದಯ ಸಂಗಮ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಬೆರೆತ ಜೀವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶಿವರಾಮ್‌ ಮಾವನ ಮಗಳು, ದುಡ್ಡೆ ದೊಡ್ಡಪ್ಪ, ಶ್ರೀ ಪುರಂದರ ದಾಸರ, ನಮ್ಮ ಮಕ್ಕಳು, ಲಗ್ನ ಪತ್ರಿಕೆ, ಮುಕ್ತಿ, ಅನಿರೀಕ್ಷಿತ, ಸಿಪಾಯಿ ರಾಮು, ನಾ ಮೆಚ್ಚಿದ ಹುಡುಗ, ಹೃದಯ ಸಂಗಮ, ಹೆಣ್ಣು ಸಂಸಾರದ ಕಣ್ಣು, ಶುಭ ಮಂಗಲ, ಒಂದೇ ರೂಪ ಎರಡು ಕಣ್ಣು, ದೇವರ ಗುಡಿ, ಹುಡುಗಾಟದ ಹುಡುಗಿ, ಬೆಸುಗೆ, ಪ್ರೇಮಾಯಣ, ಕಿಲಾಡಿ ಕಿಟ್ಟು, ಹೊಂಬಿಸಿಲು, ಕಾಡು ಕುದುರೆ, ಮರಿಯಾ ಮೈ ಡಾರ್ಲಿಂಗ್‌, ಮಕ್ಕಳ ಸೈನ್ಯ, ಮರೆಯದ ಹಾಡು, ಗುರು ಶಿಷ್ಯರು, ಗೀತಾ, ಗರ್ಜನೆ, ಹೊಸ ಬೆಳಕು ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Puneeth – DK Ravi : ಡಿ.ಕೆ.ರವಿ ಕುಟುಂಬಕ್ಕೂ ನೆರವಾಗಿದ್ರು ಪುನೀತ್: ಅಪ್ಪು ಸ್ಮರಿಸಿ ಕಣ್ಣಿರಿಟ್ಟ ಗೌರಮ್ಮ

ಇದನ್ನೂ ಓದಿ : Actress Amulya: ಶುಭಸುದ್ದಿ ನೀಡಿದ ನಟಿ ಅಮೂಲ್ಯ

(Sandalwood senior actor Shivaram admited hospital after accident)

Comments are closed.