Kantara: ‘ಕಾಂತಾರ’ ಸಿನಿಮಾವನ್ನು ಹಾಡಿಹೊಗಳಿದ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

Kantara Shilpa Shetty : ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾದ ಕಾಳ್ಗಿಚ್ಚು ಎಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದರೆ ತಪ್ಪಾಗೋದಿಲ್ಲ. ಈ ಸಿನಿಮಾವನ್ನು ವೀಕ್ಷಿಸಿದ ಪ್ರತಿಯೊಬ್ಬರು ಸಿನಿಮಾದ ಕತೆ ಹಾಗೂ ಅದಕ್ಕಿಂತ ಹೆಚ್ಚಾಗಿ ಶಿವ ಪಾತ್ರದಲ್ಲಿ ರಿಷಬ್​ ಶೆಟ್ಟಿ ಅಭಿನಯಿಸಿದ ರೀತಿಯನ್ನು ಕೊಂಡಾಡುತ್ತಿದ್ದಾರೆ. ಸಿನಿಮಾದ ಕ್ಲೈಮಾಕ್ಸ್​ನಲ್ಲಿ ಪ್ರೇಕ್ಷಕರು ತಮ್ಮ ಪಾದರಕ್ಷೆಗಳನ್ನು ಕಳಚಿಟ್ಟು ವೀಕ್ಷಿಸುವಷ್ಟರ ಮಟ್ಟಿಗೆ ರಿಷಬ್​ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರ ಜೊತೆಯಲ್ಲಿ ಸೆಲೆಬ್ರಿಟಿಗಳಿಗೂ ತುಂಬಾನೇ ಇಷ್ಟವಾಗಿದೆ .


ನಟ ಪ್ರಭಾಸ್​ ಅಂತೂ ಈ ಸಿನಿಮಾವನ್ನು ಎರಡೆರಡು ಭಾರಿ ವೀಕ್ಷಿಸಿದ್ದು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.ಇದಲ್ಲದೇ ನಟ ಧನುಷ್​, ಅನಿಲ್​ ಕುಂಬ್ಳೆ, ಪ್ರಶಾಂತ್​ ನೀಲ್​ ಹಾಗೂ ಅನುಷ್ಕಾ ಶೆಟ್ಟಿಯಂತಹ ಸಾಕಷ್ಟು ಸೆಲೆಬ್ರಿಟಿಗಳು ಕಾಂತಾರ ಸಿನಿಮಾಗೆ ಶಹಬ್ಬಾಸ್​ ಎಂದಿದ್ದಾರೆ. ಪೃಕ್ರತಿ ಹಾಗೂ ಮಾನವನ ನಡುವಿನ ಸಂಘರ್ಷವನ್ನು ತೋರಿಸುವ ಈ ಸಿನಿಮಾ ಇದೀಗ ಎಲ್ಲರ ಮನೆ ಮಾತಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿನ ಸಾಕಷ್ಟು ದಾಖಲೆಗಳನ್ನು ಕಾಂತಾರ ಸಿನಿಮಾ ಮುರಿಯುತ್ತಿದೆ.


ತುಳುನಾಡಿನ ಭೂತ ಕೋಲ ಹಾಗೂ ದೈವದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಪಂಜುರ್ಲಿ ಎಂಬ ದೈವವೇ ಈ ಕತೆಯ ಮೂಲಾಧಾರವಾಗಿದೆ. ಹೀಗಾಗಿ ಈ ಸಿನಿಮಾದ ಕರಾವಳಿ ಭಾಗದ ಜನತೆಗೆ ಇನ್ನಷ್ಟು ಹತ್ತಿರವಾಗಿದೆ. ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ನೆಲೆಸಿದ್ದರೂ ಸಹ ತುಳುನಾಡು ಹಾಗೂ ತುಳು ಸಂಸ್ಕೃತಿಯ ಬಗ್ಗೆ ಈಗಲೂ ಗೌರವವನ್ನು ಹೊಂದಿದ್ದಾರೆ. ಮೂಲತಃ ತುಳುನಾಡಿನವರೇ ಆಗಿರುವ ಶಿಲ್ಪಾಶೆಟ್ಟಿ ಕಾಂತಾರಾ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಕಾಂತಾರ ಸಿನಿಮಾವನ್ನು ನೋಡುವ ಸಂದರ್ಭದಲ್ಲಿ ತಮಗಾದ ಅನುಭವವನ್ನು ನಟಿ ಶಿಲ್ಪಾಶೆಟ್ಟಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ.


ಕಾಂತಾರಾ ಸಿನಿಮಾಗೆ ಇದು ನನ್ನ ಮೆಚ್ಚುಗೆಯ ಪೋಸ್ಟ್​ ಆಗಿದೆ. ಥಿಯೇಟರ್​ನಲ್ಲಿ ನಾನು ಈ ಸಿನಿಮಾವನ್ನು ವೀಕ್ಷಿಸಿದೆ. ಓ ದೇವರೆ.. ಎಂತಹ ನಿರೂಪಣೆ, ಭಾವನೆ ಹಾಗೂ ಜಗತ್ತು,,, ಕ್ಲೈಮಾಕ್ಸ್​ ಸಂದರ್ಭದಲ್ಲಿ ಮೈ ರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿ ಹೇಗಿದೆ ಅಂದರೆ ಇದು ನಿಮ್ಮ ಈ ಜಗತ್ತಿಗೆ ಕೊಂಡೊಯ್ಯುತ್ತದೆ. ಯಾವುದೇ ಪಕ್ಷಪಾತವಿಲ್ಲದೇ , ಕತೆ ಹೇಳುವಿಕೆ, ಪ್ರದರ್ಶನಗಳು, ನಂಬಿಕೆ ಹಾಗೂ ನಿರ್ದೇಶನದ ಸಂಪೂರ್ಣ ತೇಜಸ್ಸಿಗೆಗಾಗಿ ಈ ಸಿನಿಮಾವನ್ನು ವೀಕ್ಷಿಸಲೇಬೇಕು. ರಿಷಬ್​ ಶೆಟ್ಟಿ ನಿಮ್ಮ ಬಹುಮುಖತೆಗೆ ಹ್ಯಾಟ್ಸಾಫ್​​ ಎಂದು ಹಾಡಿ ಹೊಗಳಿದ್ದಾರೆ . ಶಿಲ್ಪಾಶೆಟ್ಟಿಯ ಈ ಪೋಸ್ಟ್​ಗೆ ಕಮೆಂಟ್​ ಮಾಡಿರುವ ರಿಷಬ್​ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.
ಕಾಂತಾರ ಸಿನಿಮಾವು ಶುದ್ಧ ಮನರಂಜನೆಗೆ ಉದ್ದೇಶಿಸಿದ ಚಿತ್ರವಾಗಿದೆ. ಈ ಸಿನಿಮಾವು ಸ್ಯಾಂಡಲ್​ವುಡ್​ ಇಂಡಸ್ಟ್ರಿಯ ಯಶಸ್ಸಿಗೆ ಮತ್ತೊಂದು ಗರಿಯನ್ನು ಸೇರಿಸಿದೆ. ದಕ್ಷಿಣ ಭಾರತದ ಕರಾವಳಿ ಭಾಗದ ಧಾರ್ಮಿಕ ನಂಬಿಕೆಯನ್ನು ಸಾರುವ ಈ ಸಿನಿಮಾ ಪ್ರೇಕ್ಷಕರಿಗೆ ತುಂಬಾನೆ ಮೆಚ್ಚುಗೆ ಎನಿಸಿದೆ.

ಇದನ್ನು ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ

ಇದನ್ನೂ ಓದಿ : Congress President Polls :ಇಲ್ಲಿದೆ ನೋಡಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಪ್ರಮುಖ ವಿಚಾರಗಳು

Shilpa Shetty shares her experience watching Kantara, says ‘had goosebumps in climax’

Comments are closed.