shivaraj kumar :ನಟ ಶಿವಣ್ಣ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ವಿಸಿಟ್​

ಮೈಸೂರು :shivaraj kumar : ಸ್ಯಾಂಡಲ್​​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಮೈ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಣ್ಣರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಣ್ಣ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಕಂಗಾಲಾಗಿದ್ದಾರೆ. ಆದರೆ ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು ಚಿಂತಪಡಬೇಕಾದ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.


ಪುನೀತ್​ ರಾಜ್​ ಕುಮಾರ್​ ನಿಧನದ ಬಳಿಕ ಮೈಸೂರಿನಲ್ಲಿ ಶಕ್ತಿ ಧಾಮದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತಿರುವ ಶಿವಣ್ಣ ತಮ್ಮ ಹೆಚ್ಚಿನ ದಿನಗಳನ್ನು ಮೈಸೂರಿನಲ್ಲಿಯೇ ಕಳೆಯುತ್ತಿದ್ದಾರೆ. ಶಕ್ತಿ ಧಾಮದ ಮಕ್ಕಳಲ್ಲಿ ನಾನು ಪುನೀತ್​​ನನ್ನು ಕಾಣುತ್ತೇನೆಂದು ಈ ಹಿಂದೆ ಅನೇಕ ಬಾರಿ ಶಿವಣ್ಣ ಹೇಳಿದ್ದಾರೆ. ಇಂದು ಕೂಡ ಶಕ್ತಿಧಾಮಕ್ಕೆ ಭೇಟಿ ನೀಡುವ ಸಲುವಾಗಿ ಮೈಸೂರಿನಲ್ಲಿದ್ದ ಶಿವಣ್ಣರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಅವರ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಕಂಡು ಬರುತ್ತಿದ್ದಂತೆಯೇ ಶಿವಣ್ಣರನ್ನು ಕೂಡಲೇ ಜೆಎಸ್​ಎಸ್​ ಆಸ್ಪತ್ರೆಗೆ ದಾಖಲಿಸಿ ಜನರಲ್​ ಚೆಕಪ್​ ನಡೆಸಲಾಗಿದೆ.


ಇನ್ನು ವೃತ್ತಿ ವಿಚಾರವಾಗಿ ಮಾತನಾಡುವುದಾದರೆ ಶಿವಣ್ಣ ಸದ್ಯ ವೇದ ಸಿನಿಮಾ ಶೂಟಿಂಗ್​​ನಲ್ಲಿದ್ದಾರ. ಇದರ ಜೊತೆಯಲ್ಲಿ ಕಿರುತೆರೆಯಲ್ಲೂ ಬ್ಯುಸಿ ಆಗಿರುವ ಅವರು ಖಾಸಗಿ ವಾಹಿನಿಯೊಂದರ ಡ್ಯಾನ್ಸಿಂಗ್​ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ.

ಇದನ್ನು ಓದಿ : PUC Exams 2022 : ಏಪ್ರಿಲ್ 22 ರಿಂದ ದ್ವಿತೀಯ ಪಿಯು ಪರೀಕ್ಷೆ : ಹಿಜಾಬ್‌ಗೆ ಇಲ್ಲ ಅವಕಾಶ : ಸಚಿವ ಬಿ.ಸಿ.ನಾಗೇಶ್‌

ಇದನ್ನೂ ಓದಿ : Shah Rukh Khan: ಶಾರುಖ್ ಖಾನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ!

shivaraj kumar visits hospital in mysore for check up

Comments are closed.