Olavina Nildana Serial : ಸಾವು ಬದುಕಿನ ಹೋರಾಟದಲ್ಲಿರುವ ತಾರಿಣಿಗೆ ತಿಳಿಯುತ್ತಾ ಸಿದ್ದಾಂತ್ ಪ್ರೀತಿ ?

(Olavina Nildana Serial )ಒಲವಿನ ನಿಲ್ದಾಣ ಧಾರಾವಾಹಿ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಂಡು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ. ಅದರಲ್ಲೂ ತಾರಿಣಿ ಮತ್ತು ಸಿದ್ದಾಂತ್‌ ಇವರಿಬ್ಬರ ಜೋಡಿಯ ಸಂಭಾಷಣೆಯನ್ನು ನೋಡುವುದಕ್ಕೆ ವೀಕ್ಷಕರು ಇಷ್ಟಪಡುತ್ತಾರೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಲಗ್ನಪತ್ರಿಕೆ ಪೂಜೆಯ ದಿನ ಸಿದ್ದಾಂತ್‌ ಮನೆಯವರ ಮುಂದೆ ತಾರಿಣಿಯನ್ನು ಇಷ್ಟಪಡುತ್ತಿರುವ ವಿಷಯವನ್ನು ತಿಳಿಸುವುದಾಗಿ ಅವನ ಅಪ್ಪನ ಹತ್ತಿರ ಹೇಳಿಕೊಂಡಿದ್ದ. ತಾರಿಣಿಗೂ ಕೂಡ ಸರ್ಪೈಸ್‌ ಕೊಡುತ್ತೇನೆ ಎಂದು ತಿಳಿಸಿದ್ದ. ಆದರೆ ತಾರಿಣಿ ಸಿದ್ದಾಂತ್‌ ಪ್ರೀತಿಯನ್ನು ನಿರಾಕರಿಸಿದ್ದಾಳೆ.

(Olavina Nildana Serial )ಲಗ್ನಪತ್ರಿಕೆ ಪೂಜೆಯ ದಿನ ತಾರಿಣಿ ಮನೆಯವರ ಮುಂದೆ ಸಿದ್ದಾಂತ್‌ ನನ್ನು ಮದುವೆಯಾಗಲು ಇಷ್ಟವಿಲ್ಲವೆಂದು ತಿಳಿಸಿದ್ದಾಳೆ. ಆಗ ತಾರಿಣಿಯ ತಾತ ಇಬ್ಬರನ್ನು ಪ್ರಶ್ನಿಸಿದಾಗ ಸಿದ್ದಾಂತ್ ನನ್ನು ಪ್ರಶ್ನಿಸುವುದು ಬೇಡ ನನಗೆ ಈ ಮದುವೆ ಇಷ್ಟವಿಲ್ಲವೆಂದು ಹೇಳುತ್ತಾಳೆ . ತಾರಿಣಿಯಿಂದ ಬಂದ ಈ ಹೇಳಿಕೆಯಿಂದ ಸಿದ್ದಾಂತ್‌ ಶಾಕ್‌ ಆಗಿದ್ದಾನೆ. ಅವನ ಮನಸ್ಸಿನಲ್ಲಿ ಪ್ರಶ್ನೆಗಳ ಸುರಿಮಳೆ ಹುಟ್ಟಿಕೊಂಡಿದೆ. ತಾರಿಣಿಯ ತಾತ ಸಿದ್ದಾಂತ್‌ ತಂದೆ ಅನಂತಕೃಷ್ಣನ ಹತ್ತಿರ ಕ್ಷಮಿಸುವಂತೆ ಕೇಳುತ್ತಾನೆ ಆಗ ಅನಂತಕೃಷ್ಣ ನಿಮ್ಮ ಕೈಗಳು ಕ್ಷಮೆ ಕೇಳಬಾರದು ಯಾವಾಗಲು ಆರ್ಶಿವಾದ ಮಾಡುತ್ತಿರಬೇಕು ಎನ್ನುತ್ತಾನೆ. ಸಿದ್ದಾಂತ್‌ ತಾರಿಣಿಯೊಂದಿಗೆ ಮಾತನಾಡಬೇಕು ಎಂದು ಅವಳ ಅಜ್ಜನ ಹತ್ತಿರ ಕೇಳಿಕೊಂಡಾಗ, ತಾರಿಣಿಯ ಅಜ್ಜ ನೀನು ಹೋಗಿ ಮಾತನಾಡು ನಿನ್ನ ಹತ್ತಿರ ಉತ್ತರ ಹೇಳಬಹುದೆನೊ ಎಂದು ಹೇಳುತ್ತಾರೆ. ಸಿದ್ದಾಂತ್‌ ಅಲ್ಲಿಂದ ಹೋರಟು ಹೋಗುತ್ತಾನೆ.

ತೋಟದಲ್ಲಿ ಸಿದ್ದಾಂತ್‌ ಮರದ ಮೇಲೆ ಕೈ ಇಟ್ಟುಕೊಂಡು ಬೇಜಾರಿನಲ್ಲಿ ಚಿಂತಿಸುತ್ತಾ ಇರುತ್ತಾನೆ. ತಾರಿಣಿ ಬಂದರೂ ಕೂಡ ಎನು ಮಾತಾಡದೆ ಮೌನವಾಗಿರುತ್ತಾಳೆ. ಸಿದ್ದಾಂತ್‌ ತಾರಿಣಿ ಹತ್ತಿರ ಪ್ರಶ್ನೆಗಳನ್ನು ಕೇಳುತ್ತಾ ಹೋಗುವಾಗ ಮಾತನಾಡುವುದಿಲ್ಲ. ಆಗ ಸಿದ್ದಾಂತ್‌ ಮದುವೆ ಎಂದರೆ ನನಗಿಂತ ಹೆಚ್ಚು ನೀನೆ ಸಂಭ್ರಮ ಪಡುತ್ತಿದ್ದೆ ಈಗ ಯಾಕೆ ಎಲ್ಲರ ಮುಂದೆ ನನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದೆ ಎಂದು ಪ್ರಶ್ನಿಸಿದಾಗ ಉತ್ತರಕೊಡದೆ ಹಾಗೆ ಇರುತ್ತಾಳೆ. ಆಗ ಸಿದ್ದಾಂತ್‌ ಹತ್ತಿರ ಹೋಗಿ ಕೈ ಹಿಡಿದು ಪ್ರಶ್ನೆಯನ್ನು ಕೇಳುವಾಗ ತಾರಿಣಿ ಹಾಗೆ ನೆಲಕ್ಕೆ ಉರುಳುತ್ತಾಳೆ. ಕೂಡಲೆ ಆಸ್ಪತ್ರೆಗೆ ಸೇರಿಸಿದರು ವೈದ್ಯರು ತಾರಣಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ತಾರಿಣಿಯ ಮಾವ ಪಾಲಾಕ್ಷ ಸಿದ್ದಾಂತ್‌ ನನ್ನು ಕೊಲ್ಲಲು ಸುಪಾರಿ ಕೊಟ್ಟಿರುತ್ತಾನೆ. ಅದರಂತೆ ಸುಪಾರಿ ಕಿಲ್ಲರ್‌ ಸಿದ್ದಾಂತ್‌ ಗೆ ಗುರಿ ಇಟ್ಟು ಹೊಡೆಯುವಾಗ ಆ ಬುಲೆಟ್‌ ಮಿಸ್ಸಾಗಿ ತಾರಿಣಿಗೆ ತಾಕಿದೆ. ಈ ಕೆಲಸ ಪಾಲಾಕ್ಷನದ್ದು ಎಂದು ಗೊತ್ತಾದರೆ ಎಲ್ಲರೂ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಬೇಕಿದೆ. ಇನ್ನು ಸಿದ್ದಾಂತ್‌ ಮನೆಯವರಿಗೆ ತಾರಿಣಿಗೆ ಎನೂ ಆಗುವುದಿಲ್ಲ ಎಂದು ಧೈರ್ಯವನ್ನು ತುಂಬಿದ್ದಾನೆ. ತಾರಿಣಿ ಬೇಗ ಚೇತರಿಸಿಕೊಳ್ಳುತ್ತಳಾ ಅವಳಿಗೆ ಸಿದ್ದಾಂತ್‌ ಪ್ರೀತಿಸುತ್ತಿರುವ ವಿಷಯ ತಿಳಿಯುತ್ತದಾ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಇದನ್ನೂ ಓದಿ:Bad news for Kantara team: Kerala Court says Varaha Roopam song can’t be used in film

ಇದನ್ನೂ ಓದಿ:Matte Mayamruga Serial:’ಮತ್ತೆ ಮಾಯಾಮೃಗ’ : ಅಕ್ಟೋಬರ್‌ 31 ರಿಂದ ಸಿರಿ ಕನ್ನಡ ಆರಂಭ

Siddhant is in love with Tharini

Comments are closed.