Thalapathy Vijay: ಚಿತ್ರರಂಗಕ್ಕೆ ಕಾಲಿಡಲಿರುವ ದಳಪತಿ ವಿಜಯ್ ಪುತ್ರ ಸಂಜಯ್

ತಮಿಳು ನಟ ವಿಜಯ್ (Thalapathy Vijay) ಅವರ ಬೀಸ್ಟ್ ಸಿನಿಮಾ ಇವತ್ತಿನಿಂದಲೇ ಎಲ್ಲೆಡೆ ಬಿಡುಗಡೆಯಾಗುತ್ತಲಿದೆ. ಬೀಸ್ಟ್ ಸಿನಿಮಾ ಎಲ್ಲ ಕಡೆ ಚರ್ಚೆಗೆ ಗ್ರಾಸವಾಗಿರುವುದಕ್ಕೆ ಕಾರಣ ವಿಜಯ್ ನಟನೆ ಜೊತೆಗೆ ಕೆಜಿಎಫ್ ಸಿನಿಮಾ ಜೊತೆಗೆ ಬಿಡುಗಡೆ ಗೊಳ್ಳುತ್ತಿರುವುದು. ಕೆಜಿಎಫ್ ಸಿನಿಮಾ ನಾಳೆ ಅಂದರೆ ಏಪ್ರಿಲ್ 14ರಂದು ತೆರೆಗೆ ಬರುತಲಿದೆ. ಬೀಸ್ಟ್ ಇವತ್ತು ಅಂದರೆ ಏಪ್ರಿಲ್ 13ರಂದು ಬಿಡುಗಡೆ ಗೊಂಡಿದೆ. ಇದರಲ್ಲಿ ಗೆಲ್ಲೋರು ಯಾರು ಅನ್ನೋ ಚರ್ಚೆ ಜೋರಾಗಿ, ಬೀಸ್ಟ್ ಗೆ ಅದ್ಬುತ ಪ್ರಚಾರ ಸಿಕ್ಕಿದ್ದಂತು ಸತ್ಯ.

ಬೀಸ್ಟ್ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದುವೆ, ದಳಪತಿ ವಿಜಯ್ ಮಗ ಸಂಜಯ್ ಕೂಡ ಸಿನಿಮಾ ರಂಗಕ್ಕೆ ಕಾಲಿಡಲಿದ್ದಾನೆ ಅನ್ನೋದು. ಈ ಹಿಂದೆ, ದಳಪತಿ ಮಗ ಕೂಡ ಸಿನಿಮಾ ಮಾಡುತ್ತಿದ್ದಾನೆ. ಇದಕ್ಕೆ ತಂದೆಯೇ ಮುಂದೆ ನಿಂತು ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆಗ ನಟ ವಿಜಯ್ ಅವರಿಗೆ ಈ ಬಗ್ಗೆ ಪ್ರಶ್ನಿಸಿದಾಗ, ಮಗ ಸಂಜಯ್ ಮನಸಲ್ಲಿ ಏನಿದೆ ಅನ್ನೋದು ನನಗೂ ತಿಳಿದಿಲ್ಲ. ಅವನಿಗೆ ಚಿತ್ರರಂಗಕ್ಕೆ ಬರಲೇಬೇಕು ಅಂತಲೂ, ನನ್ನ ಎಲ್ಲಾ ಸಿನಿಮಾಗಳಿಗೆ ಬೆಂಬಲ ನೀಡಬೇಕು ಅಂತಲೂ ಯಾವತ್ತು ಒತ್ತಾಯ ಮಾಡಿಲ್ಲ, ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಪ್ರೇಮಂ ನಿರ್ದೇಶಕ ಆಲ್ಫಾನ್ಸ್ ಪುತ್ರೇನ್ ಒಂದು ಸಲ ವಿಜಯ್ ಅವರಿಗೆ ಕಥೆ ಒಂದನ್ನು ಹೇಳಿದರಂತೆ, ಅದನ್ನು ಕೇಳಿದ ತಕ್ಷಣ ವಿಜಯ್ ಅವರಿಗೆ ಮೊದಲು ಜ್ಞಾಪಕಕ್ಕೆ ಬಂದದ್ದೇ ಮಗ. ಅವನಿಗೆ ಈ ಕಥೆ ಶೂಟ್ ಆಗುತ್ತೆ ಅಂದುಕೊಂಡೆ ಎಂದು ವಿವರಣೆ ಕೊಟ್ಟಿದ್ದರು. ಆಲ್ಫಾನ್ಸ್ ಆಹ್ವಾನವನ್ನು ಸಂಜಯ್ ತಣ್ಣಗೆ ನಿರಾಕರಿಸಿ, ನಾನು ಸಿನಿಮಾ ರಂಗಕ್ಕೆ ಬರಬೇಕಾದರೆ ಸ್ವಲ್ಪ ಸಿದ್ಧತೆ, ಸಮಯ ಎಲ್ಲವೂ ಬೇಕು ಎಂದಿದ್ದರು. ಇಷ್ಟಾದರೂ, ಆ ಕತೆ ದಳಪತಿ ವಿಜಯ್ ಅವರಿಗೆ ಇಷ್ಟವಾಗಿತ್ತು.

ಈಗ ಮತ್ತೆ ಸಂಜಯ್ ಚಿತ್ರರಂಗಕ್ಕೆ ಕಾಲಿಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಬಗ್ಗೆ ವಿಜಯ್ ಮಾತನಾಡಿದ್ದು, ಆದರೆ ಅವನು ಯಾವಾಗ ಸಿನಿಮಾ ಮಾಡುತ್ತಾನೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಸುಮೂಹರ್ತದಲ್ಲಿ ನಟನಾಗಿ ಹೊರಬರುವುದಂತೂ ಸತ್ಯ ಎಂದು ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ :KGF Chapter 2 Vs Beast : ಕೆಜಿಎಫ್ ಚಾಪ್ಟರ್ -2 Vs ಬೀಸ್ಟ್ : ಇದರಲ್ಲಿ ಗೆಲ್ಲೋರು ಯಾರು?

ಇದನ್ನೂ ಓದಿ :KGF Chapter 2 : ಕೆಜಿಎಫ್-2 ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ಮಲ್ಟಿಪ್ಲೆಕ್ಸ್ ಗೆ ಬರಲ್ಲ ರಾಕಿ ಬಾಯ್ ಸಿನಿಮಾ

(Thalapathy Vijay planning to introduce his son into film industry)

Comments are closed.