Mangaluru Crime : ಕೋಳಿ ಸಾರಿನ ವಿಚಾರಕ್ಕೆ ಮಗನನ್ನೇ ಕೊಂದ ತಂದೆ

ಮಂಗಳೂರು: (Mangaluru Crime) ಕ್ಷುಲಕ ಕಾರಣಕ್ಕೆ ನಡೆಯುವ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮನೆಯಲ್ಲಿ ಕೋಳಿ ಸಾಂಬಾರ್‌ ಮಾಡಿಕೊಡುವಂತೆ ಕೇಳಿದ ತಪ್ಪಿಗೆ ತಂದೆಯೋರ್ವ ದೊಣ್ಣೆಯಿಂದ ಹೊಡೆದು ತನ್ನ ಮಗನನ್ನೇ ಕೊಲೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರ ಎಂಬಲ್ಲಿ ನಡೆದಿದೆ.

ಗುತ್ತಿಗಾರಿನ ಮೊಗ್ರದ ಶಿವರಾಮ್ (33 ವರ್ಷ) ಕೊಲೆಯಾದವರು. ಶೀನ ಮಗನನ್ನೇ ಕೊಲೆ ಮಾಡಿರುವ ಪಾಪಿ ತಂದೆ. ನಿನ್ನೆ ರಾತ್ರಿ ಮನೆಯಲ್ಲಿ ಕೋಳಿ ಸಾಂಬಾರ್‌ ಮಾಡಲಾಗಿತ್ತು. ಮನೆಯವರೆಲ್ಲಾ ಉಂಡು ಮಲಗಿದ ಮೇಲೆ ಕೂಲಿ ಕೆಲಸಕ್ಕೆ ಹೋಗಿದ್ದ ಮಗ ಶಿವರಾಮ್‌ ಮನೆಗೆ ಬಂದಿದ್ದಾನೆ. ಈ ವೇಳೆಯಲ್ಲಿ ಚಿಕನ್‌ ಸಾಂಬಾರ್‌ ಖಾಲಿಯಾಗಿರುವ ವಿಚಾರ ತಿಳಿದು ಕೂಡಲೇ ಚಿಕನ್‌ ಸಾಂಬಾರ್‌ ಮಾಡಿಕೊಡುವಂತೆ ಜಗಳವಾಡಿದ್ದಾನೆ.

ಮೊದಲೇ ಕುಡಿದು ಬಂದಿದ್ದ ಶಿವರಾಮ್‌ ಮನೆಯಲ್ಲಿದ್ದ ನಾಟಿ ಕೋಳಿಯನ್ನು ಹಿಡಿಯಲು ಮುಂದಾಗಿದ್ದಾನೆ. ಈ ವೇಳೆಯಲ್ಲಿ ತಂದೆ ಹಾಗೂ ಮಗನ ನಡುವೆ ವಾಗ್ವಾದ ನಡೆದಿದೆ. ಶಿವರಾಮ್‌ ಪಂಜರದಲ್ಲಿದ್ದ ಕೋಳಿಯನ್ನು ಹಿಡಿಯುವ ವೇಳೆಯಲ್ಲಿ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತೆರಳಿ ದೊಣ್ಣೆಯಿಂದ ಮಗನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಶಿವರಾಮ್‌ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : Chennai crime : ಉತ್ಸವದ ವೇಳೆ ನೀರಿನ ತೊಟ್ಟಿಯಲ್ಲಿ ಬಿದ್ದು 5 ಮಂದಿ ಬಾಲಕರು ಸಾವು

ಇದನ್ನೂ ಓದಿ : Kerala train attack: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿದ ಪ್ರಕರಣ : ಆರೋಪಿ ಅಂದರ್‌

ಈ ಕುರಿತು ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿ ಶೀನನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಚಿಕನ್‌ ಸಾಂಬಾರ್‌ ವಿಚಾರಕ್ಕೆ ಮಗನನ್ನೇ ಕೊಲೆಗೈದಿರುವುದು ಮಾತ್ರ ದುರಂತವೇ ಸರಿ. ಕೊಲೆಯಾಗಿರುವ ಶಿವರಾಮ್‌ ಪುಟ್ಟ ಮಗು ಹಾಗೂ ಪತ್ನಿಯನ್ನು ಅಗಲಿದ್ದಾನೆ.

ಇದನ್ನೂ ಓದಿ : Home theater explosion: ಮದುವೆಯ ಉಡುಗೊರೆಯಾಗಿ ಪಡೆದಿದ್ದ ಹೋಮ್ ಥಿಯೇಟರ್ ಸ್ಫೋಟ : 2 ಸಾವು, 4 ಜನರಿಗೆ ಗಾಯ

Mangaluru Crime: Father kills son over chicken broth

Comments are closed.