Bidar murder: ಜನನಿಬೀಡ ಪ್ರದೇಶದಲ್ಲಿ ಹಾಡಹಗಲೇ ವ್ಯಕ್ತಿಯನ್ನು ಕಡಿದು ಬರ್ಬರ ಹತ್ಯೆ

ಬೀದರ್:‌ (Bidar murder) ಜನನಿಬೀಡ ರಸ್ತೆಯಲ್ಲಿ ಹಾಡಹಗಲೇ ಯುವಕನೊಬ್ಬನನ್ನು ಕಡಿದು ಹತ್ಯೆ ಮಾಡಲಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಭೀಕರ ಕೊಲೆ ರಾಜ್ಯದ ಬೀದರ್ ಜಿಲ್ಲೆಯ ತ್ರಿಪುರಾಂತ್ ಗ್ರಾಮದಲ್ಲಿ ನಡೆದಿದೆ. ಆನಂದ್ ಫುಲೆ ( 26 ವರ್ಷ) ಹತ್ಯೆಗೊಳಗಾದ ವ್ಯಕ್ತಿ.

ಹಳೇ ದ್ವೇಷದ ಹಿನ್ನಲೆಯಲ್ಲಿ ಸುಮಾರು ನಾಲ್ಕು ಮಂದಿ ದುಷ್ಕರ್ಮಿಗಳು ಜನನಿಬೀಡ ಪ್ರದೇಶದ ರಸ್ತೆಯಲ್ಲಿ ಆನಂದ್‌ ಪುಲೆ ಎನ್ನುವ ಯುವಕನ ಮೇಲೆ ದಾಳಿ ಮಾಡಿದ್ದು, ಕತ್ತಿ ಹಾಗೂ ಇತರ ಆಯುಧಗಳಿಂದ ಹಲ್ಲೆ ನಡೆಸಿ ಯುವಕನನ್ನು ಕಡಿದು ಕೊಲೆ ಗೈದಿದ್ದಾರೆ. ಈ ಸಂಪೂರ್ಣ ಘಟನೆಯ ಭಯಾನಕ ದೃಶು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ಹಿಂದೆ ಪ್ರತೀಕಾರದ ಉದ್ದೇಶವಿತ್ತು ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಯುವಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ದಾಳಿಯಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಫುಲೆ ಹಾಗೂ ಅವರ ಸ್ನೇಹಿತನನ್ನು ಉಮರ್ಗಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಫುಲೆ ಅವರು ಕೊನೆಯುಸಿರೆಳೆದಿದ್ದು, ಅವರ ಸ್ನೇಹಿತ ಬೀದರ್‌ ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

“ಹಿಂದಿನ ದ್ವೇಷದ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಸುಮಾರು ನಾಲ್ಕು-ಐದು ದಾಳಿಕೋರರು ಆನಂದ್ ಫುಲೆ ಅವರನ್ನು ಹತ್ಯೆ ಮಾಡಲು ಯೋಜಿಸಿದ್ದರು” ಎಂದು ಪೊಲೀಸರು ಹೇಳಿದರು. ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದು, ನಮ್ಮ ತಂಡದ ಸದಸ್ಯರು ಸುಳಿವುಗಳನ್ನು ಹುಡುಕುತ್ತಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಇದನ್ನೂ ಓದಿ : shooting attack: ಚಂಚಲ್ ಪಾರ್ಕ್ ಪ್ರದೇಶದ ಕೇಬಲ್ ಕಚೇರಿಯೊಳಗೆ ಗುಂಡಿನ ದಾಳಿ: ಓರ್ವನಿಗೆ ಗಾಯ

ಇದನ್ನೂ ಓದಿ : ಕಾರು ಅಪಘಾತದಲ್ಲಿ 3 ವರ್ಷದ ಬಾಲಕಿ ಸಾವು: ವಾಯುಪಡೆ ಅಧಿಕಾರಿಯ ಪುತ್ರ ಅರೆಸ್ಟ್‌

ಇದೀಗ ಫುಲೆ ಅವರ ಸ್ನೇಹಿತನಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದ್ದು, ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಹಾಗೂ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದಷ್ಟು ಬೇಗ ದುಷ್ಕರ್ಮಿಗಳನ್ನು ಸೆರೆಹಿಡಿಯುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಗುಜರಾತಿನ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ: 2 ಮಂದಿ ಸಾವು, 2 ಮಂದಿಗೆ ಗಾಯ

Bidar murder: Barbaric killing of a person in Jananibida area in broad daylight

Comments are closed.