ಆತ್ಮ ಬಿಡಿಸುವ ನೆಪದಲ್ಲಿ ಅತ್ಯಾಚಾರ: 16 ಬಾಲಕಿ ಮೇಲೆ ದೌರ್ಜನ್ಯ ನಡೆಸಿದ ಬಾಬಾ
ಸತ್ತ ವ್ಯಕ್ತಿಯ ಆತ್ಮದ ಕಾಟವಿದೆ ಎಂದು ನಂಬಿಸಿ ಆತ್ಮದ ಬಾಧೆ ಬಿಡಿಸುವ ನೆಪದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಹಾರಾಷ್ಟ್ರ ರಾಜ್ಯದ ಪುಣೆಯ ಭಿವಂಡಿಯಲ್ಲಿ ಘಟನೆ ನಡೆದಿದೆ.
ಬಾಲಕಿ ಕೊಂಚ ಅನಾರೋಗ್ಯ ಪೀಡಿತಳಾಗಿದ್ದು, ಇದಕ್ಕಾಗಿ ಬಾಲಕಿಯ ತಾಯಿ ಸ್ವಯಂ ಘೋಷಿತ ಬಾಬಾನ ಬಳಿ ತೆರಳಿದ್ದಳು ಎನ್ನಲಾಗಿದೆ. ಈ ವೇಳೆ ಬಾಲಕಿಯ ಸತ್ತ ಚಿಕ್ಕಪ್ಪನ ಆತ್ಮ ಆಕೆಗೆ ತೊಂದರೆ ನೀಡುತ್ತಿದೆ ಎಂದು ಆರೋಪಿ ನಂಬಿಸಿದ್ದಾನೆ.
ಬಳಿಕ ತಾಯಿಯನ್ನು ಮರಳು ಮಾಡಿ ಆಕೆಯ ಸಹಾಯದಿಂದಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಪರೀತ ಕತ್ತು ನೋವಿನಿಂದ ಬಳಲುತ್ತಿದ್ದ ಬಾಲಕಿಯ ದೇಹದಲ್ಲಿ ಸಂಬಂಧಿಯ ಆತ್ಮ ಸೇರಿಕೊಂಡಿದೆ ಎಂದು ಸಾಧು ನಂಬಿಸಿದ್ದ.
ಬಾಲಕಿಯನ್ನು ಕಾಡಿಗೆ ಕರೆದೊಯ್ದು ಹೀನ ಕೃತ್ಯ ಎಸಗಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ನಾರ್ಪೋಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾಧು, ಸಹಾಯ ನೀಡಿದ ತಾಯಿ ಹಾಗೂ ಬಾಲಕಿಯ ಸಂಬಂಧಿಯನ್ನು ಬಂಧಿಸಲಾಗಿದೆ.
(rape on minor girl from sadhu in bivandi maharashtra)
Comments are closed.