ನಿತ್ಯಭವಿಷ್ಯ : 04-08-2020

0

ಮೇಷರಾಶಿ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಜಲವೃತ್ತಿಯವರಿಗೆ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳಿರುತ್ತದೆ. ನೆರೆಹೊರೆಯವರ ಹಾಗೂ ಹಿತಶತ್ರುಗಳ ಕಾಟದಿಂದ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬಂದಾವು. ವಾಸಸ್ಥಳದ ಬದಲಾವಣೆ ಇದೆ. ದೇವತಾಕಾರ್ಯಗಳಿಗೆ ಭಾಗಿ, ಹಿರಿಯರ ಆಗಮನದಿಂದ ಸಂತೋಷ.

ವೃಷಭರಾಶಿ
ನೀಚ ಜನರ ಸಹವಾಸ, ಮನಸ್ತಾಪ, ಶತ್ರುಗಳಿಂದ ತೊಂದರೆ, ವಾಹನ ರಿಪೇರಿ, ಭಾತೃತ್ವಗಳಿಂದ ತೊಂದರೆ. ವಿಲಾಸೀ ಸಾಮಗ್ರಿಗಳ ವ್ಯವಹಾರ ತಕ್ಕಮಟ್ಟಿಗೆ ಲಾಭ ತರಲಿದೆ. ಮಕ್ಕಳಿಗೆ ಪ್ರವಾಸದಿಂದ ಸಂತಸ. ದೇವತಾ ಸಂದರ್ಶನದಿಂದ ಹಿರಿಯರಿಗೆ ಸಮಾಧಾನ ತರಲಿದೆ. ಕೃಷಿ ಕಾರ್ಯಕ್ಕೆ ಹಿತಕರವಾದ ವಾತಾವರಣವಿದೆ.

ಮಿಥುನರಾಶಿ
ಶತ್ರುಬಾಧೆ, ಜನರಲ್ಲಿ ಕಲಹ, ಸಾಲಭಾದೆ, ಬಹುದಿನದ ಋಣಬಾಧೆಯು ನಿವಾರಣೆಯಾಗಲಿದೆ. ಪತ್ನಿಗೆ ಆಭರಣ ಖರೀದಿ ಇರುತ್ತದೆ. ಗೃಹನಿರ್ಮಾಣದಂತಹ ಮಹತ್ಕಾರ್ಯದ ಚಿಂತನೆ ಸಾಕಾರಗೊಳ್ಳಲಿದೆ. ವಯಸ್ಕರಿಗೆ ಮದುವೆ ಯೋಗವಿದೆ. ಕಾರ್ಯ ವಿಕಲ್ಪ, ದಾಯಾದಿ ಕಲಹ, ಆರೋಗ್ಯದಲ್ಲಿ ಏರುಪೇರು.

ಕಟಕರಾಶಿ
ಹಿರಿಯರಿಗೆ ಶೀತ, ಕಫ‌ ಬಾಧೆಯಿಂದ ಅನಾರೋಗ್ಯ. ಪಾಲುದಾರಿಕೆಯಲ್ಲಿ ವಂಚನೆ ನಡೆಯಲಿದೆ. ದೇವತಾ ಕಾರ್ಯಗಳಿಗೆ ಸಂಚಾರ ಒದಗಿ ಬರಲಿದೆ. ದಾಯಾದಿಗಳಲ್ಲಿ ಸಣ್ಣಪುಟ್ಟ ಘರ್ಷಣೆಗಳು ಏಳುವುದು. ತಾಳ್ಮೆ ಅಗತ್ಯ,ಮಿತ್ರರಿಂದ ತೊಂದರೆ, ಇಲ್ಲಸಲ್ಲದ ತಕರಾರು, ಮನಸ್ತಾಪ, ವ್ಯವಹಾರದಲ್ಲಿ ಏರುಪೇರು.

ಸಿಂಹರಾಶಿ
ಹಿರಿಯರ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಕಾಂಟ್ರಾಕ್ಟ್ ವೃತ್ತಿಯವರಿಗೆ ಉತ್ತಮ ಆದಾಯವಿರುತ್ತದೆ. ಆಗಾಗ ಮನೆಯಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಆಹಾರದಲ್ಲಿ ವ್ಯತ್ಯಯ. ಸಂತೋಷದ ಸಂಭ್ರಮ,ನೂತನ ವಸ್ತು ಖರೀದಿ, ಸ್ತ್ರೀ ಲಾಭ, ಉತ್ತಮ ಬುದ್ಧಿ ಶಕ್ತಿ, ಆರೋಗ್ಯದಲ್ಲಿ ಏರುಪೇರು.

ಕನ್ಯಾರಾಶಿ
ಈ ದಿನ ಐಶ್ವರ್ಯ ಸಿದ್ದಿ, ವ್ಯಾಪಾರದಲ್ಲಿ ಅಭಿವೃದ್ಧಿ, ಆಗಾಗ ಅಡಚಣೆಗಳಿಂದಲೇ ಕಾರ್ಯಸಾಧನೆಯಾದೀತು. ಸ್ತ್ರೀಯರಿಗೆ ಅನಾವಶ್ಯಕ ಅಪವಾದ ಬಾಕಿ ತೋರಿಬರಲಿದೆ. ಮನೆಯಲ್ಲಿ ಅಸಾಮಾಧಾನ ವಾತಾವರಣವಿರುತ್ತದೆ. ಅನಿರೀಕ್ಷಿತ ವಸ್ತುಗಳ ಖರೀದಿಗಾಗಿ ಖರ್ಚು. ವಾದ-ವಿವಾದ, ಶತ್ರು ಕಾಟ, ಅಧಿಕ ಖರ್ಚು. ಸಮಾಜದಲ್ಲಿ ಗೌರವ.

ತುಲಾರಾಶಿ
ವಿವಾಹಯೋಗ, ಕೊಟ್ಟ ಸಾಲ ಮರಳಿಬಾರದು. ಅಧಿಕ ಖರ್ಚುಜೊತೆಗೆ ರಕ್ತದೊತ್ತಡದಂತಹ ಕಾಯಿಲೆಯು ಬಾಧಿಸಲಿದೆ. ಪ್ರಾಮಾಣಿಕತೆಗೆ ಬೆಲೆ ತಪ್ಪಿ ವಂಚನೆಗೆ ಮಾನ್ಯತೆ ದೊರಕಲಿದೆ. ಮಕ್ಕಳ ಶಿಕ್ಷಣದಲ್ಲಿ ಉನ್ನತ ಅಭಿವದ್ಧಿ ಇರುವುದು. ಆರೋಗ್ಯದಲ್ಲಿ ಏರುಪೇರು,ಶತ್ರು ಕಾಟ, ದಾನ ಧರ್ಮದಲ್ಲಿ ಆಸಕ್ತಿ, ಮನಶಾಂತಿ.

ವೃಶ್ಚಿಕರಾಶಿ
ಮಾತಿನ ಮೇಲೆ ಹಿಡಿತವಿರಲಿ, ದೇವತಾ ಕಾರ್ಯಗಳಿಂದ ಸಮಾಧಾನ ದೊರಕಲಿದೆ. ತಂದೆಗೆ ಆರೋಗ್ಯ ಹಾನಿ ಸಂಭವವಿದೆ. ಆದರೆ ಆದಾಯ ಉತ್ತಮವಿರುವುದರಿಂದ ಕಾರ್ಯಸಾಧನೆಯಾಗಲಿದೆ. ಬಂಧುವರ್ಗದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗದಿರಿ. ದಾಯಾದಿ ಕಲಹ, ಮಿತ್ರರಿಂದ ತೊಂದರೆ, ಮನಕ್ಲೇಷ, ದ್ರವ್ಯ ನಷ್ಟ, ಮನಸ್ಸಿಗೆ ಚಿಂತೆ.

ಧನಸ್ಸುರಾಶಿ
ಧನಲಾಭ, ನೂತನ ವಸ್ತು ಖರೀದಿಸುವಿರಿ, ಹಣದ ಮುಗ್ಗಟ್ಟು ಆಗಾಗ ಸರಿದೂಗಿಸಲು ಹೆಣಗಾಟ ಮಾಡಬೇಕಾದೀತು. ನಿರಂತರ ಕಾರ್ಯ ಭಾರದಿಂದ ಬಿಡುವ ದೊರೆಯಲಾರದು. ಯೋಗ್ಯ ವಯಸ್ಕರು ಕಂಕಣಬಲ ಹೊಂದಲಿದ್ದಾರೆ. ಅಧಿಕ ಉದ್ವೇಗ ಬೇಡ. ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ದುಷ್ಟ ಜನರಿಂದ ತೊಂದರೆ, ಅನಿರೀಕ್ಷಿತ ಖರ್ಚು.

ಮಕರರಾಶಿ
ಕೃಷಿಯಲ್ಲಿ ಅಭಿವೃದ್ಧಿ, ಉತ್ತಮ ಬುದ್ಧಿಶಕ್ತಿ, ನೂತನ ಗೆಳೆತನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ನೌಕರ ವರ್ಗಕ್ಕೆ ಆದಾಯವು ಉತ್ತಮ. ಸರಕಾರಿ ಅಧಿಕಾರಿಗಳು ವ್ಯಾಪಾರಿ ವರ್ಗದವರಿಗೆ ಸಮಸ್ಯೆ ತಂದಾರು. ನಿರುದ್ಯೋಗಿಗಳಿಗೆ ಉದ್ಯೋಗ ದೊರಕೀತು. ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬದಲ್ಲಿ ನೆಮ್ಮದಿ ಶಾಂತಿ.

ಕುಂಭರಾಶಿ
ಎಲ್ಲಿ ಹೋದರೂ ಅಶಾಂತಿ, ಮಿತ್ರರಿಂದ ತೊಂದರೆ, ಹಿರಿಯರಿಗೆ ಪ್ರವಾಸ, ಯಾತ್ರಾದಿಗಳಿಂದ ಸಮಾಧಾನವಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಇರುವುದು. ಬಂಧು ವರ್ಗದಲ್ಲಿ ಶುಭಮಂಗಲ ಕಾರ್ಯವು ನಡೆಯಬಹುದು. ಮನೆಯೊಡತಿಗೆ ಆರೋಗ್ಯ ಹಾನಿ. ಸ್ಥಳ ಬದಲಾವಣೆ, ಬೇರೆಯವರನ್ನು ನಿಂದಿಸುವುದು, ಮನಕ್ಲೇಷ.

ಮೀನರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಕ್ರಯ ವಿಕ್ರಯಗಳಲ್ಲಿ ಹೆಚ್ಚಿನ ಲಾಭವಿದೆ. ಬಂಧುವರ್ಗದವರ ಕಿರಿಕಿರಿಗಳು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಕೋರ್ಟು ಕಚೇರಿಯ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಿರುತ್ತದೆ. ಮನಸ್ಸು ಶಾಂತವಾಗಿಟ್ಟುಕೊಳ್ಳಿರಿ.ಗೆಳೆಯರೊಡನೆ ಕಲಹ, ಅಪಘಾತ, ರಿಯಲ್ ಎಸ್ಟೇಟ್‍ನಲ್ಲಿ ಲಾಭ.

Leave A Reply

Your email address will not be published.