ನಿತ್ಯಭವಿಷ್ಯ : 21-08-2020

0

ಮೇಷರಾಶಿ
ಮಕ್ಕಳಿಂದ ಅನುಕೂಲ, ಉತ್ತಮ ಹೆಸರು ಪ್ರಾಪ್ತಿ, ವಾಹನ-ಸ್ಥಿರಾಸ್ತಿಯಿಂದ ಅನುಕೂಲ, ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಅಸಮಾಧಾನವು ತೋರಿಬಂದೀತು. ಸ್ತ್ರೀ ನಿಮಿತ್ತ ಅಪವಾದದ ಭೀತಿಗೆ ಕಾರಣರಾದೀರಿ. ಜಾಗ್ರತೆ ಮಾಡಿರಿ. ಕೋರ್ಟು ವ್ಯವಹಾರದಲ್ಲಿ ಮುನ್ನಡೆ ಇದೆ. ಅಕ್ಕಪಕ್ಕದವರ ಕಿರಿಕರಿ ಇದೆ. ಮನೋರೋಗಗಳು ಕಾಡುತ್ತವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಮಕ್ಕಳ ವಿದ್ಯಾಭ್ಯಾಸದ ಆಲೋಚನೆ, ಸರ್ಕಾರದಿಂದ ಅನುಕೂಲ.

ವೃಷಭರಾಶಿ
ಪತ್ರ ವ್ಯವಹಾರಗಳಿಂದ ಅನುಕೂಲ, ದೈವಕಾರ್ಯಗಳ ಸಂಭವ, ಬಂಧುಗಳಿಂದ ಸಹಕಾರ, ಧನಲಾಭ, ಶತ್ರುನಾಶ, ಇಷ್ಟಾರ್ಥ ಸಿದ್ಧಿ, ದೇವತಾ ಕಾರ್ಯಗಳ ಪುಣ್ಯ ಸಂಪಾದನೆ ಇತ್ಯಾದಿಗಳಿಂದ ಸಮಾಧಾನವು ಸಿಗಲಿದೆ. ವಿನಾಕಾರಣ ಖರ್ಚುವೆಚ್ಚ ಅಧಿಕವಾದೀತು. ಯಾವುದಕ್ಕೂ ದುಡುಕುತನ ಮಾಡದೆ ಮುನ್ನಡೆಯಿರಿ. ಕೋರ್ಟ್ ಕೆಲಸದ ಚಿಂತೆ, ಹಿರಿಯರೊಂದಿಗೆ ಕಿರಿಕಿರಿ, ಚಿರಾಸ್ತಿ ವಾಹನದಿಂದ ಅನುಕೂಲ

ಮಿಥುನರಾಶಿ
ಕಾರ್ಯ ನಿಮಿತ್ತ ಪ್ರಯಾಣ, ಆರ್ಥಿಕ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ಆನುವಂಶಿಕ ಆಸ್ತಿಪಾಸ್ತಿ ಕೈ ಸೇರಲಿದೆ. ಆತ್ಮೀಯರಲ್ಲಿ ಬಂಧುತ್ವ ಕುದುರೀತು. ಮಂಗಲ ಕಾರ್ಯಗಳಿಗೆ ಬುನಾದಿ ಹಾಕಲಿದೆ. ಆಗಾಗ ಕಫ‌ಬಾಧೆಯಿಂದ ಆರೋಗ್ಯ ಕೆಡಲಿದೆ. ಹೊಸ ಕೆಲಸಗಳಿಗೆ ಆರಂಭ ಒಳ್ಳೆಯದಲ್ಲ. ಸರ್ಕಾರದಿಂದ ಅನುಕೂಲದ ಭರವಸೆ, ಉದ್ಯೋಗ ಬದಲಾವಣೆ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಿಂದ ಅನುಕೂಲ.

ಕಟಕರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ಹತ್ತಿರದ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ಸಾಲ ದೊರೆಯುವುದು, ಕಾರ್ಯಸಾಧನೆಯಲ್ಲಿ ಸೋಲನ್ನು ಒಪ್ಪದೆ ಮುಂದುವರಿಯಿರಿ. ಸಂಚಾರದಿಂದ ಆಯಾಸ ಹೆಚ್ಚಲಿದೆ. ವಾದವಿವಾದಗಳಿಂದ ಅಸಮಾಧಾನ ತೋರಿಬಂದೀತು. ಕೃಷಿ ಕಾರ್ಯಗಳಲ್ಲಿ ಮುನ್ನಡೆ ಇದೆ. ಮುಂದುವರಿಯಿರಿ. ನೇರ ಮಾತಿನಿಂದ ವಿರೋಧ, ಹಿತಶತ್ರುಗಳಿಂದ ನೋವು, ಸರ್ಕಾರದಿಂದ ಅನುಕೂಲ.

ಸಿಂಹರಾಶಿ
ಆಲಸ್ಯ ಮತ್ತು ಬೇಸರ, ವ್ಯವಹಾರದ ಚಿಂತೆ, ಆತ್ಮಾಭಿಮಾನ, ಮಕ್ಕಳಿಂದ ಅನುಕೂಲ, ನೂತನ ದಂಪತಿಗಳಿಗೆ ಸಂತಾನ ಭಾಗ್ಯವಿದೆ. ವ್ಯಾಪಾರಿ ವರ್ಗದವರಿಗೆ ತೆರಿಗೆ ಅಧಿಕಾರಿಗಳ ಸಹಕಾರವು ದೊರಕೀತು. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಕಾಣಿಸಲಿದೆ. ಮಕ್ಕಳ ಆಲಸ್ಯದಿಂದ ವಿದ್ಯೆಯಲ್ಲಿ ಹಿನ್ನಡೆ ಕಂಡೀತು. ಸರ್ಕಾರಿ ಕಾರ್ಯದಲ್ಲಿ ಜಯ, ಉದ್ಯೋಗ ಹುಡುಕಾಟ. ಪರಿಹಾರ: ಕುಲದೇವತಾ ನಾಮಸ್ಮರಣೆ ಮಾಡಿ.

ಕನ್ಯಾರಾಶಿ
ಮಿತ್ರರ ಆಗಮನ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಸೋಲು ನಷ್ಟಗಳಿಂದ ನಿರಾಸೆ, ಒತ್ತಡಗಳಿಂದ ನಿದ್ರಾಭಂಗ, ಧನಲಾಭದ ಆಸೆಯಿಂದ ಉಳಿತಾಯವೆಲ್ಲಾ ಶತ್ರು ಪಾಲಾಗುವ ಭೀತಿ ಇದೆ. ಅಸ್ತಮಾ, ಹರ್ನಿಯಾ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಸಾಂಸಾರಿಕವಾಗಿ ಪರಸ್ಪರ ಅವಿಶ್ವಾಸ, ಒಳಜಗಳ, ಮುಸುಕಿನ ಗುದ್ದಾಟವಿದೆ. ಮೇಲಧಿಕಾರಿಗಳಿಂದ ದಂಡನೆ, ಸರ್ಕಾರಿ ಕಾರ್ಯದಲ್ಲಿ ಹಿನ್ನಡೆ.

ತುಲಾರಾಶಿ
ಉದ್ಯೋಗಕ್ಕಾಗಿ ಹುಡುಕಾಟ, ಮಂತ್ರ ತಂತ್ರದ ಭೀತಿ, ಬಂಧುಗಳಲ್ಲಿ ಧರ್ಮಕಾಯಕದಲ್ಲಿ ಭಾಗವಹಿಸುವಿರಿ. ಬಾಡಿಗೆದಾರರಿಗೆ ಗೃಹ ಬದಲಿ ಸಂಭವವಿದೆ. ಕಲಾಕಾರರಿಗೆ ಆರ್ಥಿಕ ಬಿಕ್ಕಟ್ಟು ಕಂಡು ಬಂದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ ಸಿಗಲಾರದು. ಜಾಗ್ರತೆ ಮಾಡಿರಿ. ಮಿತ್ರರಿಂದ ಅನುಕೂಲ, ಬಾಲಗ್ರಹ ದೋಷಗಳು, ಮೇಲಧಿಕಾರಿಗಳಿಂದ ಅನುಕೂಲ, ಅಧಿಕ ಲಾಭ.

ವೃಶ್ಚಿಕರಾಶಿ
ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ಅನುಕೂಲ, ತೊಡಗಿಸಿಕೊಂಡ ಕಾರ್ಯಗಳು ಅರ್ಧಕ್ಕೆ ನಿಂತೀತು. ಸಣ್ಣ ಸಣ್ಣ ವಿಚಾರದಲ್ಲಿ ಗೃಹಿಣಿಯ ನೆಮ್ಮದಿ ಕೆಡಲಿದೆ. ಮಕ್ಕಳ ವಿದ್ಯಾ ಪ್ರಗತಿಯಲ್ಲೂ ಸಮಾಧಾನ ಸಿಗಲಾರದು. ಆರೋಗ್ಯದಲ್ಲಿ ಆಗಾಗ ವಾಯುಪ್ರಕೋಪದಿಂದ ಸಮಸ್ಯೆ ಇದೀತು. ಸರ್ಕಾರಿ ಕಾರ್ಯದಲ್ಲಿ ಜಯ, ಅದೃಷ್ಟದ ದಿವಸ, ದೈವ ಕಾರ್ಯಗಳು, ವಿದ್ಯಾಭ್ಯಾಸ ಪ್ರಗತಿ, ಅಹಂಭಾವದ ನಡವಳಿಕೆ.

ಧನಸ್ಸುರಾಶಿ
ತಂದೆಯಿಂದ ಅನುಕೂಲ, ಪ್ರಯಾಣದಿಂದ ಪ್ರಗತಿ, ಆರ್ಥಿಕವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂದು ನೆನಪಿರಲಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಗಳಲ್ಲಿ ಒಳ್ಳೆಯ ಉತ್ತೇಜನ ವಿರುತ್ತದೆ. ನೌಕರ ವರ್ಗಕ್ಕೆ ಮುಂಭಡ್ತಿ ಸಿಗದೆ ನಿರಾಸೆ ತರಲಿದೆ. ದಿನಾಂತ್ಯ ಶುಭವಿದೆ. ಆಕಸ್ಮಿಕ ಲಾಭ, ಅನಿರೀಕ್ಷಿತ ಯಶಸ್ಸು, ಉದ್ಯೋಗದಲ್ಲಿ ಅನುಕೂಲ ಆರ್ಥಿಕ ಪ್ರಗತಿ, ಧರ್ಮಕಾರ್ಯದಲ್ಲಿ ಆಸಕ್ತಿ.

ಮಕರರಾಶಿ
ಅನಿರೀಕ್ಷಿತ ನಷ್ಟ, ಅಪಘಾತವಾಗುವ ಸಾಧ್ಯತೆ, ಸೋಲು ನಷ್ಟ ನಿರಾಸೆಗಳು, ಉದ್ಯೋಗದಲ್ಲಿ ತೊಂದರೆ, ಆರ್ಥಿಕವಾಗಿ ವಿತರಣೆ ಅಧಿಕವಿದ್ದು ಎಷ್ಟಿದ್ದರೂ ಸಾಲದೆಂಬಂತ ಅನುಭವ ಬರಲಿದೆ. ಕೂಡಿಟ್ಟ ಹಣವು ನೀರಿನಂತೆ ಪೋಲಾದೀತು. ಎಲ್ಲವನ್ನೂ ತೂಗಿ ನೋಡಿ ಮುನ್ನಡಿ ಇಡಿರಿ. ಹಣದ ತಾಪತ್ರಯ ಉದ್ವೇಗ ಉಂಟು ಮಾಡಲಿದೆ. ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ತೊಂದರೆ.

ಕುಂಭರಾಶಿ
ಅಹಂಭಾವಗಳು ಜಾಸ್ತಿ, ದಾಂಪತ್ಯದಲ್ಲಿ ಕಿರಿಕಿರಿ, ರಾಹುವಿನ ಪ್ರತಿಕೂಲತೆಯಿಂದ ಮಾನಸಿಕ ಸಮಾಧಾನವಿರದು. ಹಿತಬಾಂಧವರೇ ಶತ್ರುವಾಗಿ ಕಾಡಿ ಯಾರು. ಉದ್ಯೋಗದಲ್ಲಿ ಸಮಾಧಾನವಿರದು. ಬಂಧುಗಳು ಸಹಕಾರ ನೀಡಿಯಾರು. ದೇವತಾದರ್ಶನ ಯೋಗದಿಂದ ಸಮಾಧಾನ. ಪಾಲುದಾರಿಕೆಯಲ್ಲಿ ಲಾಭ, ಮಿತ್ರರಿಂದ ಅನುಕೂಲ, ಸೇವಕರಿಂದ ಸಮಸ್ಯೆ, ಸಂಗಾತಿಯಿಂದ ಲಾಭ,ಸ್ವಯಂಕೃತ ಅಪರಾಧಗಳು.

ಮೀನರಾಶಿ
ನೂತನ ವಧೂವರರಿಗೆ ಸಂತತಿ ಲಾಭವಿದೆ. ಹಂತ ಹಂತವಾಗ ಆದಾಯವು ವೃದ್ಧಿಯಾಗಲಿದೆ. ರಾಜಕೀಯದಲ್ಲಿ ಅಧಿಕಾರ, ಸ್ಥಾನಮಾನ ಪ್ರಾಪ್ತಿ ಯೋಗವಿದೆ. ಖರ್ಚುವೆಚ್ಚಗಳಿದ್ದರೂ ಧನಾದಾಯ ಉತ್ತಮವಿದ್ದು ಕಾರ್ಯಾನುಕೂಲವಾಗಲಿದೆ. ಶತ್ರು ದಮನ, ಅನಾರೋಗ್ಯ ಸಮಸ್ಯೆಗಳು, ಆತ್ಮ ಸಂಕಟಗಳು, ಪ್ರೀತಿ-ಪ್ರೇಮದಲ್ಲಿ ಸಿಲುಕುವಿರಿ, ಮಕ್ಕಳೊಂದಿಗೆ ವಾಗ್ವಾದ, ಭವಿಷ್ಯದ ಚಿಂತೆಗಳು, ಸಾಲದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

Leave A Reply

Your email address will not be published.