ಚೆನ್ನೈ: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿರುವ ಎಸ್ ಪಿಬಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಚೇತರಿಕೆಗೆ ವಿಶ್ವದಾದ್ಯಂತ ಪ್ರಾರ್ಥಿಸಲಾಗುತ್ತಿದೆ.
ದೇಶ ಕಂಡ ಸುಪ್ರಸಿದ್ದ ಗಾಯಕ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ದಿನ ಕಳೆದಂತೆ ಕ್ಷೀಣಿಸುತ್ತಲೇ ಇದೆ. ಹಲವು ದಿನಗಳಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ ಪಿಬಿ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದಾರೆ. ದೇಶದ ವಿಶೇಷ ತಜ್ಞರು ಮಾತ್ರವಲ್ಲದೇ ವಿದೇಶಿ ತಜ್ಞರ ಸಲಹೆಯನ್ನು ಪಡೆದು ಎಂಜಿಎಂ ಆಸ್ಪತ್ರೆಯ ವೈದ್ಯರ ತಂಡ ಚಿಕಿತ್ಸೆಯನ್ನು ನೀಡುತ್ತಿದೆ.
ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿನ ಚೇತರಿಕೆಗಾಗಿ ದೇಶದಾದ್ಯಂತ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿದೆ. ಚಿತ್ರರಂಗದ ಸ್ಟಾರ್ ನಟರು, ಲಕ್ಷಾಂತರ ಅಭಿಮಾನಿಗಳು ಎಸ್ ಪಿಬಿ ಅವರು ಬೇಗನೇ ಗುಣಮುಖರಾಗುವಂತೆ ದೇವರಿಗೆ ಮೊರೆಯಟ್ಟಿದ್ದಾರೆ. ಕೇವಲ ದೇಶವಷ್ಟೇ ಅಲ್ಲಾ ವಿದೇಶಗಳಲ್ಲಿನ ಅಭಿಮಾನಿಗಳು ಕೂಡ ಗಾನ ಕೋಗಿಲೆ ಮತ್ತೆ ಹಾಡು ಎನ್ನುತ್ತಿದ್ದಾರೆ.