ನಿತ್ಯಭವಿಷ್ಯ : 09-07-2020

0

ಮೇಷರಾಶಿ
ಆರ್ಥಿಕ ಸಮಸ್ಯೆ ಬಗೆಹರಿಯುವುದು, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಗೌರವ ಸನ್ಮಾನ ಪ್ರಶಂಸೆ ಲಭಿಸುವುದು, ಯಾವುದೇ ಕೆಲಸ ಕಾರ್ಯಗಳಿಗೆ ವಿವೇಚನೆ ಅತೀ ಅಗತ್ಯವಿದೆ.ಬುದ್ಧಿ ಚುರುಕಾಗಿದ್ದರೂ ಹವ್ಯಾಸದಿಂದ ವಿದ್ಯೆಯು ನೈವೇದ್ಯವಾದೀತು.ದೇವತಾ ಕಾರ್ಯಗಳು ಮನಸ್ಸಿಗೆ ನೆಮ್ಮದಿಯನ್ನು ನೀಡಲಿದೆ. ಪ್ರಯಾಣದಲ್ಲಿ ಅನುಕೂಲ, ನೆಮ್ಮದಿಯ ವಾತಾವರಣ.

ವೃಷಭರಾಶಿ
ವಾಹನ-ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ನೆರೆಹೊರೆಯವರ ಕಲಹ ಮಾನಸಿಕವಾಗಿ ಕಿರಿಕಿರಿ ತಂದೀತು. ಬಂಧುಗಳ ಸಮಾಗಮದಿಂದ ಕಾರ್ಯಸಾಧನೆ ಆಗಲಿದೆ.ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರಕಲಿದೆ. ದಾಂಪತ್ಯ ಸುಖ ಶಾಂತಿ ಇರುವುದು. ವ್ಯವಹಾರದಲ್ಲಿ ಲಾಭ, ಬಂಧುಗಳಿಂದ ಬೈಯ್ಗುಳ ಕೇಳುವ ಸಾಧ್ಯತೆ, ಗೃಹ, ಉದ್ಯೋಗ, ಸ್ಥಳ ಬದಲಾವಣೆಗೆ ಮನಸ್ಸು, ಅನುಕೂಲಕರವಾದ ವಾತಾವರಣ.

ಮಿಥುನರಾಶಿ
ಉದ್ಯೋಗ ಪ್ರಾಪ್ತಿ ಯೋಗ, ಆರ್ಥಿಕ ಸಮಸ್ಯೆ ನಿವಾರಣೆಗೆ ಅನುಕೂಲ, ನೀವಿಂದು ಸ್ಪಷ್ಟ ನಿರ್ಧಾರ ತಾಳಬೇಕಾದ ಪ್ರಸಂಗವು ಬರಬಹುದು.ಆದರೆ ಹತಾಶರಾಗದಿರಿ. ದೃಢ ನಿರ್ಧಾರದಿಂದ ಮುನ್ನಡೆಯಿರಿ.ಆರ್ಥಿಕವಾಗಿ ಖರ್ಚು ವೆಚ್ಚಗಳೇ ಹೆಚ್ಚಾದೀತು.ದಿನಾಂತ್ಯ ಶುಭವಾರ್ತೆ. ವ್ಯಾಪಾರದಲ್ಲಿ ಲಾಭ, ಅಧಿಕ ಧನಾಗಮನ, ಪ್ರೇಮಿಗಳಿಗೆ ಕಂಕಣ ಭಾಗ್ಯ.

ಕಟಕರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಆಕಸ್ಮಿಕ ಧನಾಗಮನ, ನಿಮ್ಮ ವ್ಯಾಪಾರ, ವ್ಯವಹಾರಗಳಲ್ಲಿ ದೊಡ್ಡ ತಿರುವು ಒದಗಬಹುದು. ಸಾಂಸಾರಿಕವಾಗಿ ಅಧಿಕ ಖರ್ಚುಗಳು ತೋರಿ ಬರುವುದು.ಧರ್ಮಕಾರ್ಯಗಳಿಗಾಗಿ ಧನವ್ಯಯವಿದೆ. ಮಕ್ಕಳ ವಿಚಾರದಲ್ಲಿ ಜಾಗ್ರತೆ ಇರಲಿ. ಸಂಗಾತಿಯಿಂದ ಅಪಮಾನ, ಗೌರವಕ್ಕೆ ಧಕ್ಕೆ, ಮಧುರವಾದ ಮಾತಿನಿಂದ ಕಾರ್ಯ ಜಯ.

ಸಿಂಹರಾಶಿ
ಮಕ್ಕಳಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ದಾಂಪತ್ಯ ಸಣ್ಣ ಪುಟ್ಟ ಅಭಿಪ್ರಾಯ ಬೆೇಧ ಬರಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಫ‌ಲ ದೊರಕಲಿದೆ.ಯೋಗ್ಯ ವಯಸ್ಕರಿಗೆ ನೆಂಟಸ್ಥಿಕೆ ಸಾಮಿಪ್ಯ ಪಡೆದೀತು. ನೌಕರ ವರ್ಗದಿಂದ ಸಮಸ್ಯೆಗಳು ಬಂದಾವು. ಉದ್ಯೋಗ ವ್ಯಾಪಾರದಲ್ಲಿ ಲಾಭ, ಮಕ್ಕಳಿಂದ ಸಹಕಾರ, ಆಕಸ್ಮಿಕ ಅವಘಡ, ಆರೋಗ್ಯದಲ್ಲಿ ವ್ಯತ್ಯಾಸ. ಮೈಕೈ ನೋವು, ಅಜೀರ್ಣ ಸಮಸ್ಯೆ.

ಕನ್ಯಾರಾಶಿ
ಶತ್ರು, ಸೇವಕರಿಂದ ತೊಂದರೆ, ಸಾಲಗಾರರಿಂದ ಆರ್ಥಿಕ ಸಂಕಷ್ಟ, ಹಾಳು ದುಶ್ಚಟಕ್ಕೆ ಬಲಿ ಬೀಳಬಹುದು. ಹಾಗಿದ್ದರೆ ಅವನತಿ,ಅಧೋಗತಿ.ದೂರ ಸಂಚಾರದಲ್ಲಿ ಕಾರ್ಯ ಸಿದ್ಧಿ ಇರುತ್ತದೆ.ವಿದ್ಯಾರ್ಥಿಗಳಿಗೆ ಅಲಸ್ಯದಿಂದ ಪ್ರಗತಿಯಲ್ಲಿ ಹಿನ್ನಡೆ ಇದೆ.ತಾಂತ್ರಿಕ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ.ಲಾಭ ಪ್ರಮಾಣ ಕುಂಠಿತ, ವಾಹನ-ಸ್ಥಿರಾಸ್ತಿ, ವ್ಯಾಪಾರಕ್ಕಾಗಿ ಮಾಡಿದ ಸಾಲದ ಚಿಂತೆ, ಅಧಿಕ ಚಿಂತೆಯಿಂದ ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ,

ತುಲಾರಾಶಿ
ಸಾಲ ತೀರಿಸುವುದಕ್ಕೆ ಅನುಕೂಲ, ರಾಜಕೀಯವಾಗಿ ಸ್ಥಾನಮಾನಕ್ಕಾಗಿ ಹೋರಾಟ. ಕೆಲಸಕಾರ್ಯಗಳು ಶತ್ರುಪೀಡೆಯಿಂದಾಗಿ ವಿಫ‌ಲ ವಾದೀತು. ಆದಾಯಕ್ಕೆ ಮೀರಿ ಅಧಿಕವಾಗಿ ಖರ್ಚು ಗಳಿರುತ್ತವೆ.ರಿಪೇರಿ ಕೆಲಸಕಾರ್ಯಗಳಿಗೆ ಖರ್ಚಿಗಳಿರುತ್ತವೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಆರ್ಥಿಕ ಮುಗ್ಗಟ್ಟು ಬಗೆಹರಿಯುವುದು, ವ್ಯಾಪಾರ-ವ್ಯವಹಾರ ಆರಂಭಕ್ಕೆ ಅನುಕೂಲ ವಾತಾವರಣ.

ವೃಶ್ಚಿಕರಾಶಿ
ಪ್ರಯಾಣದಲ್ಲಿ ಅನುಕೂಲ, ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ಅವಿರತ ಪ್ರಯತ್ನಬಲಕ್ಕೆ ಕಾರ್ಯಸಿದ್ಧಿ ಇದೆ. ಸರಕಾರಿ ಕೆಲಸಕ್ಕಾಗಿ ಧನವ್ಯಯವಿದೆ.ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ ಇದೆ. ಮನೆಯಲ್ಲಿ ದೇವತಾಕಾರ್ಯಗಳು ನಡೆದು ಸಮಾಧಾನವಾಗಲಿದೆ. ವ್ಯವಹಾರದಲ್ಲಿ ತೊಂದರೆ, ಆರ್ಥಿಕ ಸಮಸ್ಯೆ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ.

ಧನಸ್ಸುರಾಶಿ
ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ-ವಾಹನ ಯೋಗ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಇಷ್ಟಾರ್ಥ ಸಿದ್ಧಿ. ಮಾರ್ಯಾದೆಗೆ ಎಡವಟ್ಟಾದರೂ ಮಾನ ಉಳಿದೀತು ಕೋರ್ಟು ಕಚೇರಿ ಕಾರ್ಯಗಳಲ್ಲಿ ಮುನ್ನಡೆಯು ಸಮಾಧಾನ ತರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಲಾಭವಿದೆ. ನೂತನ ಗೃಹ ಖರೀದಿಯ ವೆಚ್ಚಗಳಿರುತ್ತವೆ.

ಮಕರರಾಶಿ
ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ, ನವ ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ಅಧಿಕಾರಿ ರಂಗದಲ್ಲಿ ಅಸಮಾಧಾನ ಕಂಡು ಬರಲಿದೆ. ಕೃಷಿಕರಿಗೆ ಸಮಾಧಾನ ತರುವ ದಿನಗಳಿವು. ಗೃಹ ಬಳಕೆಯ ಸಾಮಾಗ್ರಿಗಳಿಗಾಗಿ ಧನವ್ಯಯವಿದೆ. ಅನಿರೀಕ್ಷಿತ ಸ್ಥಳ, ಗೃಹ ಬದಲಾವಣೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ನಷ್ಟ ಪ್ರಮಾಣ ಅಧಿಕವಾಗುವುದು.

ಕುಂಭರಾಶಿ
ಸಾಲಬಾಧೆಗಳಿಂದ ಮುಕ್ತಿ ಸಾಧ್ಯತೆ, ನಿಮ್ಮ ಸಿಡುಕಿನ ವರ್ತನೆ ವಿರುದ್ಧ ಪರಿಣಾಮ ಬೀರಲಿದೆ. ವಿಳಂಬಿತ ಕಾರ್ಯ ನಿರ್ವಹಣೆಯಿಂದ ತೃಪ್ತ ಮನಸ್ಸು ತಣ್ಣಗಾಗದು. ಯಾವುದಕ್ಕೂ ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಜಾಗ್ರತೆ ಮಾಡುವುದು. ಆರೋಗ್ಯ ವೃದ್ಧಿಗೆ ಉತ್ತಮ ಚಿಕಿತ್ಸೆ, ಉದ್ಯೋಗಾವಕಾಶಗಳು ಪ್ರಾಪ್ತಿ, ಮಾನಸಿಕ ನೆಮ್ಮದಿ ವಾತಾವರಣ, ಕುಟುಂಬಸ್ಥರಿಂದ ಸಹಕಾರ.

ಮೀನರಾಶಿ
ಮಕ್ಕಳಿಗಾಗಿ ಖರ್ಚು, ಸಾಲಗಾರರಾಗುವ ಪರಿಸ್ಥಿತಿ, ಅಧಿಕವಾದ ಉಷ್ಣ, ಗ್ಯಾಸ್ಟ್ರಿಕ್, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಉದ್ಯೋಗ ನಷ್ಟ ಮಾಡಿಕೊಳ್ಳುವಿರಿ. ಆದಾಯವೃದ್ಧಿಯಿಂದಾಗಿ ಖರ್ಚುಗಳು ತಲೆಬಿಸಿ ಮಾಡದು.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಇರುತ್ತದೆ.ಅಸೂಯಾಪರರ ದೃಷ್ಟಿಯಿಂದ ವೃತ್ತಿರಂಗದಲ್ಲಿ ಕಾರ್ಯವಿಳಂಬವಾದೀತು.

Leave A Reply

Your email address will not be published.