ನಿತ್ಯಭವಿಷ್ಯ : 04-07-2020

0

ಮೇಷರಾಶಿ
ಅಧಿಕಾರದಲ್ಲಿ ಬದಲಾವಣೆ ಸಂಭವವಿದೆ. ಸ್ಥಿರಾಸ್ತಿ-ವಾಹನ ಖರೀದಿಯೋಗ, ತಂದೆಯಿಂದ ನಷ್ಟ, ಅನಗತ್ಯ ಕಿರಿಕಿರಿ, ತಾಯಿ ಕಡೆಯಿಂದ ಅನುಕೂಲ. ಕೃಷಿಕಾರ್ಯದಲ್ಲಿ ಸಂತಸದ ದಿನಗಳಿವು. ತಾಯಿಗೆ ಸೇವಾ ಶುಶ್ರೂಷೆ. ಮಗನ ವಿದ್ಯಾಲಾಸ್ಯದಿಂದ ಅವಮಾನ ಪ್ರಸಂಗವಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.

ವೃಷಭರಾಶಿ
ಕೆಲವೊಂದು ವಿಷಯಗಳಲ್ಲಿ ನಿಮ್ಮ ನಿರ್ಧಾರಗಳನ್ನು ಹೇಳುವ ಮುನ್ನ ಯೋಚಿಸಿ, ಆಕಸ್ಮಿಕ ಧನ ಲಾಭ, ಸಹೋದರನೊಂದಿಗೆ ಕಿರಿಕಿರಿ, ಕುಟುಂಬದಲ್ಲಿ ಮನಃಸ್ತಾಪ, ಪ್ರಯಾಣಕ್ಕೆ ಅಡೆತಡೆ, ಗೃಹ ಬದಲಾವಣೆಯಿಂದ ತೊಂದರೆ. ಚಿಂತಿಸಿ ಮುನ್ನಡೆವ ಅಗತ್ಯವಿದೆ. ಏಕಾಂತದಲ್ಲಿ ಕಾಲಕಳೆಯುವುದರಲ್ಲಿರುವ ಸುಖ ನಿಮಗೆ ಅರಿವಾಗಲಿದೆ.

ಮಿಥುನರಾಶಿ
ಅವಿವಾಹಿತರು ತಮ್ಮ ಸಂಗಾತಿಯಿಂದ ಮಿಶ್ರಪ್ರತಿಕ್ರಿಯೆಯನ್ನು ಸ್ವೀಕರಿಸಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ಸಹಕಾರ, ಸ್ನೇಹಿತರಿಂದ ಧನಾಗಮನ, ಆಧ್ಯಾತ್ಮಿಕ ಚಿಂತೆ. ಒಂಟಿಯಾಗಿರುವವರಿಗೆ ಜಂಟಿಯಾಗುವ ಆಸೆ ಇರುತ್ತದೆ. ವಧು ಭೇಟಿಯಲ್ಲಿರುವವರಿಗೆ ಯಶಸ್ಸು.

ಕಟಕರಾಶಿ
ನೀವು ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಈಗಲೂ ನೀವು ಪಶ್ಚಾತ್ತಾಪ ಪಡಲಿದ್ದೀರಿ. ಶತ್ರುಗಳ ಕಾಟ, ಶರೀರದಲ್ಲಿ ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ಸಾಲದ ಸುಳಿಗೆ ಸಿಲುಕುವಿರಿ. ಬಂದ ಅವಕಾಶಗಳು ಕೈ ತಪ್ಪಿ ಹೋಗದಂತೆ ಜಾಗ್ರತೆ ವಹಿಸಿರಿ. ಮುಖ್ಯವಾಗಿ ಘನತೆಯನ್ನು ಕಾಪಾಡಿಕೊಳ್ಳಿ.

ಸಿಂಹರಾಶಿ
ವಿಘ್ನ ಬಾಧೆಯಿಂದ ಆಗಾಗ ಆದಾಯದಲ್ಲಿ ವಿಳಂಬವಾದೀತು. ಮಕ್ಕಳಿಗಾಗಿ ಅಧಿಕ ಖರ್ಚು, ಆಕಸ್ಮಿಕ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ, ಮಕ್ಕಳಿಗೆ ಆಕಸ್ಮಿಕ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ. ಯಂತ್ರೋಪಜೀವಿಗಳಿಗೆ ಮುಂಭಡ್ತಿ ಸಂಭವ. ಪ್ರಯಾಣಾದಿಗಳಲ್ಲಿ ಸಮಸ್ಯೆಗಳು ತೊರಿ ಬಂದಾವು. ಆರೋಗ್ಯದಲ್ಲಿ ಜಾಗ್ರತೆ.

ಕನ್ಯಾರಾಶಿ
ಮಂಗಲ ಕಾರ್ಯಗಳು ವಿಘ್ನವಿಲ್ಲದೆ ನೆರವೇರಲಿವೆ. ಸ್ಥಿರಾಸ್ತಿ-ವಾಹನದಿಂದ ಲಾಭ, ಮಾನಸಿಕ ವ್ಯಥೆ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಆಧ್ಯಾತ್ಮಿಕ ಕಾರ್ಯದಲ್ಲಿ ಒಲವು, ಸಹೋದರನಿಂದ ಧನಾಗಮನ. ವ್ಯಾಪಾರ, ವ್ಯವಹಾರಗಳು ಚೆನ್ನಾಗಿದ್ದರೂ ವ್ಯಾಪಾರಿಗಳಿಗೆ ಸಾಲಬಾಧೆ ಮನೆಯವರ ಮಾತಿಗೆ ಕಿವಿಗೊಡಿರಿ ಕಾರ್ಯಸಾಧನೆಗೆ ಅನುಕೂಲ.

ತುಲಾರಾಶಿ
ಆರೋಗ್ಯದಲ್ಲಿ ಪಿತ್ತಪ್ರಕೋಪ ಸಮಸ್ಯೆ ತಂದೀತು. ಉದ್ಯಮದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಬಂಧುಗಳಿಂದ ಅವಮಾನ, ಸಾಲ ಬಾಧೆ, ಮನಸ್ಸಿನಲ್ಲಿ ಅಶಾಂತಿ. ಹಿರಿಯರ ಮಾರ್ಗದರ್ಶನದಿಂದ ಸ್ಥಾನ ಲಾಭವಿದೆ. ರಾಜಕೀಯದಲ್ಲಿ ಗೊಂದಲದ ಪರಿಸ್ಥಿತಿ ಇದೆ. ಪಾಲು ಬಂಡವಾಳದಲ್ಲಿ ಸಮಸ್ಯೆಗಳು ಎದುರಾಗಲಿವೆ.

ವೃಶ್ಚಿಕರಾಶಿ
ಹೊಟೇಲ್‌ ಉದ್ಯಮದವರಿಗೆ ಉತ್ತಮ ಆದಾಯವಿದೆ. ಕಾರ್ಯ ನಿಮಿತ್ತ ಓಡಾಟ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಅನಗತ್ಯ ಖರ್ಚು, ಮಕ್ಕಳ ಮನಸ್ಸಿಗೆ ನೋವು ಮಾಡುವಿರಿ. ಬಂಧುವರ್ಗದಲ್ಲಿ ಆಪ್ತರ ವಿರಹ ದುಃಖ ಬಂದೀತು.ಉದ್ಯೋಗಿಗಳಿಗೆ ಮುನ್ನಡೆ ಸಂತಸ ತರಲಿದೆ.ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.

ಧನುರಾಶಿ
ಕಲಾಜಗತ್ತಿಗೆ ಅಲ್ಪ ಆದಾಯವಿದ್ದು ಹೊಸ ಪ್ರಕ್ರಿಯೆಗೆ ವಿಳಂಬಿಸುವುದು ಉತ್ತಮ. ವಾಹನ ಅಪಘಾತ, ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಿರಾಸ್ತಿ ತಗಾದೆಯಿಂದ ಕೋರ್ಟ್‍ನ ಮೊರೆ. ಹಳೆಯ ಶತ್ರುವೊಬ್ಬ ಕಾಲ್ಕೆರೆದು ಕಲಹಕ್ಕೆ ಕಾರಣನಾದಾನು. ನ್ಯಾಯಾಲಯದ ಕೆಲಸಗಳು ಮಧ್ಯಸ್ಥಿಕೆಯಿಂದ ಮುಕ್ತಾಯವಾದಾವು.

ಮಕರರಾಶಿ
ಹಿರಿಯರಿಗೆ ಆರೋಗ್ಯದ ಬಗ್ಗೆ ಖರ್ಚುವೆಚ್ಚಗಳು ಅಧಿಕವಾದಾವು. ಶುಭ ಕಾರ್ಯಗಳಿಗೆ ಖರ್ಚು, ಆತ್ಮೀಯರಿಂದ ನಂಬಿಕೆದ್ರೋಹ, ಸಹೋದರನಿಂದ ಮೋಸ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.ಹೊಟೇಲ್‌ ವ್ಯವಹಾರದಲ್ಲಿ ಲಾಭಾಂಶವಿರದು. ಆಲೋಚಿಸಿ ಮುನ್ನಡೆಯಿರಿ.

ಕುಂಭರಾಶಿ
ಸಾಲದ ಸಹಾಯ ಪ್ರಾಪ್ತಿ, ಕುಟುಂಬದಲ್ಲಿ ವಾಗ್ವಾದ, ಮನಸ್ಸಿಗೆ ಕಿರಿಕಿರಿ, ಕೆಲಸಗಾರರ ಕೊರತೆ ನಿವಾರಣೆ. ಮಿತ್ರರು, ಬಂಧುಗಳು ನಿಮ್ಮ ಪಾಲಿಗೆ ಹಿತವೆನಿಸಿದರೂ ಜಾಗ್ರತೆ ವಹಿಸಿರಿ. ಕೋರ್ಟು ಕಚೇರಿಗಳ ಕೆಲಸ, ದಾವೆ, ಪುರಾವೆಗಳು ತೀರ್ಮಾನಕ್ಕೆ ಅನುಕೂಲವಾಗಲಿವೆ.ತೈಲ ಪದಾರ್ಥಗಳಿಂದ ಉತ್ತಮಗಳಿವೆ.

ಮೀನರಾಶಿ
ಆಕಸ್ಮಿಕ ಆದಾಯವಿದೆ. ಮಕ್ಕಳೊಳಗಿನ ಒಳಜಗಳ ಕಿರಿಕಿರಿ ತಂದೀತು. ಬಂಧುಗಳ ಸಹಕಾರದಿಂದ ಋಣಬಾಧೆ ಮುಕ್ತಾಯವಾದೀತು. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಅನುಕೂಲ. ಹೊಸ ವಾಹನ ಖರೀದಿಯ ಸಾಧ್ಯತೆ ಇದೆ. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ.

Leave A Reply

Your email address will not be published.