ನಿತ್ಯಭವಿಷ್ಯ : 08-07-2020

1

ಮೇಷರಾಶಿ
ಹತ್ತು ಹಲವು ಕೆಲಸಗಳಿಗಾಗಿ ಧನವ್ಯಯವಾಗಲಿದೆ. ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಹಣಕಾಸು ಅನುಕೂಲ, ಹಿರಿಯರ ಮಾತಿಗೆ ಗೌರವ ನೀಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವಾಗಿ ಉದ್ಯೋಗ‌ ದೊರಕಲಿದೆ. ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು ಇದೆ.

ವೃಷಭರಾಶಿ
ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಸಫ‌ಲತೆಯನ್ನು ಪಡೆಯಲಿವೆ. ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಅವಿವಾಹಿತರಿಗೆ ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ದಾನ ಧರ್ಮದಲ್ಲಿ ಆಸಕ್ತಿ, ಭವಿಷ್ಯದ ಆಲೋಚನೆ ಬಹುಪಾಲು ನೀವು ಸುಖೀಗಳನ್ನಬಹುದು. ಸರಕಾರಿ ಕೆಲಸದಲ್ಲಿ ಲಾಭವಿದೆ. ಮಕ್ಕಳ ಬಗ್ಗೆ ಚಿಂತೆ ಇದೆ.

ಮಿಥುನರಾಶಿ
ಶುಭಮಂಗಲ ಕಾರ್ಯಗಳಿಗೆ ವಿಘ್ನಭಯ ತೋರಿ ಬಂದರೂ ಹಿರಿಯರ ಅನುಗ್ರಹದಿಂದ ಕಾರ್ಯಸಾಧನೆಯಾಗಲಿದೆ. ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ತ್ರೀಯರಿಗೆ ಶುಭ, ಹಿತ ಶತ್ರುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆ ಇದೆ.ನ್ಯಾಯಾಲಯದಲ್ಲಿ ಜಯವಿದೆ.

ಕಟಕರಾಶಿ
ರಾಜಕೀಯದಲ್ಲಿ ತಟಸ್ಥ ಧೋರಣೆ ಅತೀ ಉತ್ತಮವೆನಿಸಲಿದೆ. ಅನಾವಶ್ಯಕ ದ್ವೇಷ ಸಾಧಿಸುವಿರಿ, ಮಿತ್ರರಲ್ಲಿ ಕಲಹ, ಮಕ್ಕಳಿಂದ ನೋವು, ಅಲ್ಪ ಕಾರ್ಯ ಸಿದ್ಧಿ, ಉದ್ಯೋಗದಲ್ಲಿ ಕಿರಿಕಿರಿ. ಹಿರಿಯರಿಗೆ ಕಫ‌ ದೋಷದಿಂದ ಅನಾರೋಗ್ಯ ಕಂಡು ಬಂದೀತು. ದುಡುಕಿನ ನಿರ್ಧಾರಗಳು ಎಲ್ಲಾ ವಿಚಾರದಲ್ಲಿ ಪರಿಣಾಮವನ್ನು ಬೀರಲಿವೆ.

ಸಿಂಹರಾಶಿ
ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಧನವ್ಯಯ ಕಂಡು ಬರಲಿದೆ. ಯತ್ನ ಕಾರ್ಯದಲ್ಲಿ ಜಯ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಸರಿ ತಪ್ಪುಗಳ ಬಗ್ಗೆ ಚಿಂತಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ವ್ಯಾಪಾರ,ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತಂದೀತು. ಗೃಹಿಣಿಗೆ ಇಷ್ಟಪೂರ್ತಿಯಿಂದ ತೃಪ್ತಿ ತರಲಿದೆ. ಹೊಸ ಮಿತ್ರರ ಸ್ನೇಹಲಾಭದಿಂದ ಕಾರ್ಯಸಾಧನೆಯಾಗಲಿದೆ.

ಕನ್ಯಾರಾಶಿ
ಅನಾವಶ್ಯಕವಾಗಿ ಕಲಹಗಳು ತೋರಿ ಬಂದಾವು. ಮನೆಯಲ್ಲಿ ಶುಭ ಕಾರ್ಯ, ಶ್ರಮಕ್ಕೆ ತಕ್ಕ ಫಲ, ಉತ್ತಮ ಬುದ್ಧಿ ಶಕ್ತಿ, ಹಣಕಾಸು ಪರಿಸ್ಥಿತಿ ಉತ್ತಮ. ನಿರುದ್ಯೋಗಿಗಳು ತಾತ್ಕಾಲಿಕ ವೃತ್ತಿಯಲ್ಲೇ ನೆಮ್ಮದಿಯನ್ನು ಹೂಡಿಯಾರು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳು ಹಿರಿಯರಿಗೆ ಪ್ರತಿಕೂಲವಾಗಿ ಬೇಸರವಾಗಲಿದೆ.

ತುಲಾರಾಶಿ
ವಾಹನ ಖರೀದಿಯ ಚಿಂತನೆ ಚಾಲನೆಗೆ ಬರಲಿದೆ.ನಿರೀಕ್ಷಿತ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ಪ್ರಿಯ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಅತೀ ಬುದ್ಧಿವಂತಿಕೆ, ಮಾನಸಿಕ ನೆಮ್ಮದಿ ಪ್ರಾಪ್ತಿ, ವಾಹನ ಖರೀದಿ ಯೋಗ. ಪಾಲು ಬಂಡವಾಳದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಮುತ್ತಿಕೊಳ್ಳಲಿವೆ. ಜಾಗ್ರತೆ.

ವೃಶ್ಚಿಕರಾಶಿ
ದಾಂಪತ್ಯದಲ್ಲಿ ಅನಾವಶ್ಯಕ ಕಲಹಗಳು ಕಂಡು ಬರಲಿವೆ. ರಾಜಕೀಯ ಕ್ಷೇತ್ರದವರಿಗೆ ಮಾನಸಿಕವಾಗಿ ನೆಮ್ಮದಿ ಇರದು. ಮಾನಸಿಕ ಒತ್ತಡ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ಆಲಸ್ಯ ಮನೋಭಾವ, ನೆಮ್ಮದಿ ಇಲ್ಲದ ಜೀವನ, ಉದ್ಯೋಗ ಸ್ಥಳದಲ್ಲಿ ಆತಂಕ. ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ಇದೆ.ಪ್ರಯತ್ನಬಲ ಅಗತ್ಯವಿದೆ.

ಧನುರಾಶಿ
ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಪ್ರೀತಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಿರೀಕ್ಷಿತ ಲಾಭ, ತೀರ್ಥಯಾತ್ರೆ ದರ್ಶನ. ದೂರ ಸಂಚಾರದಲ್ಲಿ ಕಾರ್ಯಸಾಧನೆ ಇದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬೆಳೆಯಲಿದೆ. ಕೌಟುಂಬಿಕವಾಗಿ ಆಗಾಗ ಕಿರಿಕಿರಿ ಇದ್ದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಮುನ್ನಡೆಯಿರಿ.

ಮಕರರಾಶಿ
ಸಕಾಲಿಕ ಯೋಜನೆಗಳು ಕಾರ್ಯರೂಪಕ್ಕೆ ಬಂದರೂ ಮನಸ್ಸಿಗೆ ನೆಮ್ಮದಿ ಇರದು. ಸ್ಥಳ ಬದಲಾವಣೆ, ಮಾತಿನ ಚಕಮಕಿ, ಋಣ ಬಾಧೆ, ಮನಃಕ್ಲೇಷ, ವಿವಾದಗಳಿಂದ ದೂರ ಉಳಿಯಿರಿ, ಸುಖ ಭೋಜನ ಪ್ರಾಪ್ತಿ. ವೃತ್ತಿರಂಗದಲ್ಲಿ ಸಾವಧಾನವಾಗಿ ಮುನ್ನಡೆಯಿರಿ.ಹೊಸ ಸಾಮಗ್ರಿಗಳು ಮನೆಯನ್ನು ಅಲಂಕರಿಸಿವುದು.ಶುಭವಿದೆ.

ಕುಂಭರಾಶಿ
ನೆರೆಹೊರೆಯವರೊಡನೆ ಅನಾವಶ್ಯಕ ಘರ್ಷಣೆ ತಂದೀತು. ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ದೂರ ಪ್ರಯಾಣ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಪರಿಚಿತರಿಂದ ಸಹಾಯ. ಆಗಾಗ ಉದ್ವೇಗ ಪರಿಸ್ಥಿತಿಯಿಂದ ಮನಸ್ಸಿಗೆ ಸಮಾಧಾನವಿರದು.ದೇವತಾ ಕಾರ್ಯಗಳಿಗಾಗಿ ಧನವ್ಯಯವಿದೆ.ಅನಿರೀಕ್ಷಿತ ಭೇಟಿ ಇರುವುದು.

ಮೀನರಾಶಿ
ಆಗಾಗ ಬಂಧುಮಿತ್ರರ ಆಗಮನದಿಂದ ಸಂತಸವಿದೆ. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಹಿಳೆಯರಿಗೆ ಶುಭ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಖರ್ಚಿನ ಬಗ್ಗೆ ನಿಗಾವಹಿಸಿ. ಸಂಪಾದನೆಯ ಇನ್ನೊಂದು ದಾರಿಯು ಗೋಚರಿಸಲಿದೆ.ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ವಿವಾಹಿತರಿಗೆ ಸದ್ಯದಲ್ಲೇ ಶುಭವಾರ್ತೆ ಇದೆ.

1 Comment
  1. ವೆಂಕಟೇಶ ಮೊಗೇರ says

    ಗ್ರಹಚಾರ ಕೆಟ್ಟಿದೆ

Leave A Reply

Your email address will not be published.