ನಿತ್ಯಭವಿಷ್ಯ : 01-07-2020

0

ಮೇಷರಾಶಿ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಳೆಯ ಸೋಲುಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುವುದು ಬೇಡ. ಸಕಾರಾತ್ಮಕ ಚಿಂತನೆಯಿಂದ ಲಾಭವಿದೆ. ಸ್ತ್ರೀಯರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ಅಧಿಕ ತಿರುಗಾಟ, ವಾದ-ವಿವಾದ ಹೆಚ್ಚಾಗುವುದು.

ವೃಷಭರಾಶಿ
ಹಳೆಯ ಸೋಲುಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುವುದು ಬೇಡ. ಸಕಾರಾತ್ಮಕ ಚಿಂತನೆಯಿಂದ ಲಾಭವಿದೆ. ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ನಿರೀಕ್ಷಿತ ಲಾಭ ಲಭಿಸುವುದು, ಮಾನಸಿಕ ನೆಮ್ಮದಿ, ಆತ್ಮೀಯರಿಂದ ಹೊಗಳಿಕೆ, ದಾಂಪತ್ಯದಲ್ಲಿ ಪ್ರೀತಿ.

ಮಿಥುನರಾಶಿ
ದುಷ್ಟರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವೈಭವದ ಬದುಕನ್ನು ನಡೆಸುವ ಕನಸುಗಳಿವೆ. ಅದಕ್ಕೆ ತಕ್ಕ ಪರಿಶ್ರಮವನ್ನೂ ನಡೆಸಿದರೆ ಸಫಲತೆ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.

ಕಟಕರಾಶಿ
ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ, ಉತ್ತಮ ಫಲ, ಪದೇಪದೆ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಇಂದು ಯಾವುದೇ ಥರದ ಮಾತಿಗೂ ಸಿಟ್ಟಾಗಬೇಡಿ. ಶೀತ ಸಂಬಂಧಿತ ಸಮಸ್ಯೆ, ವಿವಾದಗಳಿಗೆ ಅಸ್ಪಾದಕೊಡಬೇಡಿ, ಹಿತ ಶತ್ರುಗಳ ಬಾಧೆ.

ಸಿಂಹರಾಶಿ
ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಕಾರ್ಯ ಸಿದ್ಧಿ, ಜೀವನದಲ್ಲಿನ ಸುಮಧುರ ಕ್ಷಣಗಳು ನಿಮ್ಮ ಕೈಗೆಟುಕಲಿವೆ. ಮಾನಸಿಕವಾದ ನೆಮ್ಮದಿಯಿಂದ ಮನೆಯಲ್ಲೂ ಹರ್ಷವಿದೆ. ಚಂಚಲ ಮನಸ್ಸು, ಕ್ರಯ-ವಿಕ್ರಯಗಳಿಂದ ಲಾಭ, ಮಿಶ್ರ ಫಲ ಯೋಗ ಪ್ರಾಪ್ತಿ.

ಕನ್ಯಾರಾಶಿ
ವಿದ್ಯಾರ್ಥಿಗಳಲ್ಲಿ ಗೊಂದಲ, ನೆಮ್ಮದಿ ಇಲ್ಲದ ಜೀವನ, ಹೊಸ ಉತ್ಸಾಹದಿಂದ ಕೆಲಸ ಆರಂಭ ಮಾಡುವುದಷ್ಟೇ ಅಲ್ಲ. ಹಳೆಯ ವಿಧಾನಗಳ ಬಗೆಗೂ ಆದರಣೆ ಇರಲಿ. ಕಾರ್ಯ ಸಾಧನೆಗಾಗಿ ಓಡಾಟ, ಪರಿಶ್ರಮಕ್ಕೆ ತಕ್ಕ ಫಲ, ಆತ್ಮೀಯರ ಮೇಲೆ ಅತಿಯಾದ ನಂಬಿಕೆ, ಯತ್ನ ಕಾರ್ಯದಲ್ಲಿ ಅನುಕೂಲ.

ತುಲಾರಾಶಿ
ದುಶ್ಚಟಗಳು ಹೆಚ್ಚಾಗುವುದು, ಪೆಟ್ಟಾಗುವ ಸಾಧ್ಯತೆ ಎಚ್ಚರ, ಒಂದೇ ಸಲಕ್ಕೆ ಯಶಸ್ಸು ಸಿಕ್ಕಿಬಿಡಬೇಕು ಎಂಬ ನಿಮ್ಮ ಆಲೋಚನೆಯಲ್ಲಿ ತಪ್ಪಿಲ್ಲ. ಜತೆಗೆ ಕಾರ್ಯತ್ಪರತೆ ಕೂಡ ಇರಲಿ. ಆಲಸ್ಯ ಮನೋಭಾವ, ಇಲ್ಲ ಸಲ್ಲದ ತಕರಾರು, ಆಕಸ್ಮಿಕ ಅಧಿಕ ಖರ್ಚು.

ವೃಶ್ಚಿಕರಾಶಿ
ದೂರ ಪ್ರಯಾಣದಿಂದ ಸಮಸ್ಯೆ, ಸಾಕಷ್ಟು ಜನ ತಾತ್ವಿಕ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮ್ಮ ಕಾರ್ಯಕ್ಕೆ ಅದು ಅಡಚಣೆ ಎಂದೆನಿಸದಿರಲಿ. ನಂಬಿಕಸ್ಥರಿಂದ ಮೋಸ, ಯಾರನ್ನೂ ನಂಬಬೇಡಿ, ಎಲ್ಲ ಕಡೆಯಿಂದಲೂ ಒತ್ತಡ ಜಾಸ್ತಿ, ಕುಟುಂಬಸ್ಥರಿಂದ ಅಲ್ಪ ಕಿರಿಕಿರಿ, ದೈವಾನುಗ್ರಹದಿಂದ ಅನುಕೂಲ.

ಧನಸ್ಸುರಾಶಿ
ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರಿಂದ ಹಿತನುಡಿ, ಭಕ್ತಿಯಿಂದ ಪೂಜೆ ಮಾಡಿ. ನಿಮ್ಮ ಮನಸ್ಸಿನ ಸಂಕಲ್ಪಗಳೆಲ್ಲ ಶೀಘ್ರದಲ್ಲಿಯೇ ಕೈಗೂಡಲಿವೆ. ಮಿತ್ರರಿಂದ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.

ಮಕರರಾಶಿ
ನಾನಾ ಮೂಲಗಳಿಂದ ಧನಾಗಮನ, ಹಣಕಾಸು ಲಾಭ, ಹೋರಾಟದಲ್ಲಿ ನೀವೇ ನಾಯಕರಾಗುವ ಸಂದರ್ಭ ಬರಬಹುದು. ಅದಕ್ಕೂ ಮೊದಲು ಯೋಚಿಸಿಯೇ ನಿರ್ಧರಿಸಿ. ಸ್ತ್ರೀಯರಿಗೆ ತಾಳ್ಮೆಯಿಂದ ಉತ್ತಮ ಫಲ, ವೈರಿಗಳಿಂದ ದೂರವಿರಿ, ಅನ್ಯರ ಕಷ್ಟಕ್ಕೆ ಸ್ಪಂದಿಸುವ ಸಾಧ್ಯತೆ.

ಕುಂಭರಾಶಿ
ಪರರ ತಪ್ಪಿನಿಂದ ನಿಂದನೆ, ಗೌರವಕ್ಕೆ ಧಕ್ಕೆ, ಅತಿಥಿಗಳ ಉಪಚಾರ ಮಾಡುವುದರಲ್ಲೇ ದಿನ ಕಳೆಯಬಹುದು. ಕೆಲಸಕ್ಕೆ ಅಡಚಣೆ ಆಗದಂತೆ ನೋಡಿಕೊಳ್ಳಿ. ದ್ರವ್ಯ ಲಾಭ, ಕೃಷಿಕರಿಗೆ ಲಾಭ, ಭಾವನೆಗಳಿಗೆ ಸ್ಪಂದಿಸುವಿರಿ.

ಮೀನರಾಶಿ
ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯದಲ್ಲಿ ಅಧಿಕ ಒತ್ತಡ, ವಿನೂತನ ಸಾಹಸಗಳನ್ನು ಮಾಡುವುದು ನಿಮ್ಮ ಸ್ವಭಾವ. ಇಂದಿನ ಪ್ರಯತ್ನದಲ್ಲೂ ನಿಮಗೆ ಯಶಸ್ಸು ಸಿಗಲಿದೆ. ಮಾತೃವಿನಿಂದ ಶುಭ ಹಾರೈಕೆ.

Leave A Reply

Your email address will not be published.