ನಿತ್ಯಭವಿಷ್ಯ : 01-06-2020

0

ಮೇಷರಾಶಿ
ಆರ್ಥಿಕವಾಗಿ ಧನ ಸಂಚಯಕ್ಕೆ ಕಷ್ಟವಾದೀತು. ಭವಿಷ್ಯದ ಬಗ್ಗೆ ಆಲೋಚನೆ, ಮಾತಿನ ಮೇಲೆ ಹಿಡಿತ ಅಗತ್ಯ, ದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಹೆಚ್ಚಿನ ನಿರೀಕ್ಷೆ ಸಾಧ್ಯವಾಗದು.ಕುಟುಂಬಸ್ಥರಿಂದ ಹಿತವಚನ, ಆತುರ ನಿರ್ಧಾರದಿಂದ ಸಂಕಷ್ಟ, ವ್ಯವಹಾರ ಒಪ್ಪಂದ ಮುಂದೂಡುವುದು ಉತ್ತಮ.ವಿ ರಾಜಕೀಯದವರಿಗೆ ಆಗಾಗ ಸಂಚಾರ ಕಂಡು ಬರಲಿದೆ. ಪತ್ನಿಯ ಆರೋಗ್ಯ ಜಾಗ್ರತೆ ಮಾಡಿರಿ.

ವೃಷಭರಾಶಿ
ವೈಯಕ್ತಿಕ ಹಾಗೂ ವೈವಾಹಿಕ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ ಕಂಡು ಬರಲಿದೆ. ಅನೇಕ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲದ ವಾತಾವರಣ. ಇತರರ ಕಷ್ಟನಷ್ಟಗಳಿಗೆ ನೆರವಾಗುವ ನಿಮ್ಮ ಮನೋಧರ್ಮ ಮನಸ್ಸಿಗೆ ಶಾಂತಿ ನೀಡಲಿದೆ. ಉದ್ವೇಗ ಕಡಿಮೆ ಮಾಡಿರಿ.

ಮಿಥುನರಾಶಿ
ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಲಾಭದಾಯಕವಾದೀತು. ಸರಕಾರೀ ಕೆಲಸದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳಿರುತ್ತವೆ. ಅನ್ಯ ಜನರಲ್ಲಿ ಪ್ರೀತಿ, ನಂಬಿಕಸ್ಥರಿಂದ ದ್ರೋಹ, ವಾಹನ ರಿಪೇರಿ, ಮನಸ್ಸಿನಲ್ಲಿ ಭಯ, ಬಂಧುಗಳಿಂದ ಕಿರಿಕಿರಿ, ಹಣಕಾಸು ಪರಿಸ್ಥಿತಿ ಚೇತರಿಕೆ. ಸಾಂಸಾರಿಕವಾಗಿ ಹಿತಶತ್ರುಗಳ ಸಮಯಸಾಧಕತನದಿಂದ ವ್ಯಾಕುಲಗೊಳ್ಳುವಿರಿ.

ಕಟಕರಾಶಿ
ಸಾಂಸಾರಿಕವಾಗಿ ಆಗಾಗ ಅಡಚಣೆಗಳು ತೋರಿ ಬಂದರೂ ತಾಳ್ಮೆ, ಸಮಾಧಾನದಿಂದ ಮುಂದುವರಿಯಿರಿ. ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಶೀತ ಸಂಬಂಧಿತ ರೋಗ, ತಾಳ್ಮೆಯಿಂದ ಕಾರ್ಯ ಯಶಸ್ಸು, ಕೃಷಿಕರಿಗೆ ಅಲ್ಪ ಲಾಭ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಹೆಚ್ಚಾಗಿ ಭಾಗವಹಿಸುವಂತಾದೀತು. ವೈವಾಹಿಕವಾಗಿ ಸಂಬಂಧಗಳಿಗೆ ಪ್ರಯತ್ನ ಪಡಿರಿ.

ಸಿಂಹರಾಶಿ
ಕೃಷಿಕರು ಕೃಷಿಗಾಗಿ ಉತ್ಸಾಹದಾಯಕರಾದಾರು. ಮನೆ ಖರೀದಿ ಚಿಂತನೆ ಕಾರ್ಯಗತವಾಗಲಿದೆ. ಆರ್ಥಿಕವಾಗಿ ಧನಾಗಮನದ ಅವಕಾಶಗಳು ಒದಗಿ ಬಂದಾವು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ ಲಭಿಸುವುದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ಸಮಸ್ಯೆ, ಪಿತ್ರಾರ್ಜಿತ ಆಸ್ತಿಗಾಗಿ ತಕರಾರು, ಸಾಂಸಾರಿಕ ಸಂಬಂಧವನ್ನು ಗಟ್ಟಿಯಾಗಿರಿಸಿರಿ.

ಕನ್ಯಾರಾಶಿ
ದಾಯಾದಿಗಳ ಕಿರುಕುಳದಿಂದ ಬೇಸರವಾದೀತು. ವೈಯಕ್ತಿಕ ಸಂಬಂಧಗಳು ಕೆಟ್ಟು ಹೋಗಲಿವೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾತೃವಿನಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ, ಐಷಾರಾಮಿ ಜೀವನಕ್ಕೆ ಮನಸ್ಸು, ನಿಮ್ಮ ಕಷ್ಟಕ್ಕೆ ಆತ್ಮೀಯರಿಂದ ನೆರವು. ಸಾಂಸಾರಿಕವಾಗಿ ಹೊಂದಾಣಿಕೆ ಅತೀ ಅಗತ್ಯವಿದೆ. ವ್ಯಾಪಾರ ವ್ಯವಹಾರಗಳು ಮಂದಗತಿಯಲ್ಲಿ ನಡೆದು ಆತಂಕವಾದೀತು.

ತುಲಾರಾಶಿ
ಮನೆ ರಿಪೇರಿ ಕೆಲಸಗಳಿಗಾಗಿ ಧನವ್ಯಯವಾದೀತು. ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭ ಕಂಡುಬರಲಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರುಗಳ ಬಾಧೆ, ನಂಬಿಕಸ್ಥರಿಂದ ಮೋಸ ಹೋಗುವಿರಿ, ಅತೀ ಆತ್ಮವಿಶ್ವಾಸದಿಂದ ಸಂಕಷ್ಟ, ತಾಳ್ಮೆಯಿಂದ ಕಾರ್ಯ ಸಿದ್ಧಿ. ಸಾಂಸಾರಿಕವಾಗಿ ಸಂಬಂಧಿಗಳ ಸಹಕಾರದಿಂದ ಸಂತಸವಿದೆ. ವೈಯಕ್ತಿಕ ಆರೋಗ್ಯ ಆಗಾಗ ಏರುಪೇರಾಗಲಿದೆ.

ವೃಶ್ಚಿಕರಾಶಿ
ಮಕ್ಕಳ ಬಗ್ಗೆ ಯೋಚಿಸುವಂತಾದೀತು. ಆರ್ಥಿಕವಾಗಿ, ಹೊಸ ಸಮಸ್ಯೆಗಳು ಉದ್ಭವ, ತಾಳ್ಮೆ ಕಳೆದುಕೊಂಡರೆ ಅಶಾಂತಿ, ಮೌನವಾಗಿರುವುದು ಉತ್ತಮ, ಶತ್ರುಗಳ ಕುತಂತ್ರಕ್ಕೆ ಸಿಲುಕುವಿರಿ, ಅಧಿಕ ಚಿಂತೆಯಿಂದ ನಿದ್ರಾಭಂಗ, ದಿನಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ. ಹಂತಹಂತವಾಗಿ ಅಭಿವೃದ್ಧಿ ಕಂಡು ಬರವಿದೆ. ಆಪ್ತಮಿತ್ರರೊಡನೆ ನಿಷ್ಠುರಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಸಣ್ಣಪುಟ್ಟ ಕಾರ್ಯಕ್ಕಾಗಿ ಧನವ್ಯಯವಿದೆ.

ಧನುರಾಶಿ
ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉತ್ತಮ ಯಶಸ್ಸು ದೊರಕಲಿದೆ. ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಿ, ಹಣಕಾಸು ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾರ್ಥಿಗಳಿಗೆ ಅನುಕೂಲ. ಗೃಹಬಳಕೆಯ ಸಾಮಗ್ರಿ ಗಾಗಿ ಧನವ್ಯಯವಾದೀತು. ಮಿತ್ರವರ್ಗದವರಿಂದ ಶುಭ ಸಮಾಚಾರವಿರುತ್ತದೆ. ಆರೋಗ್ಯದಲ್ಲಿ ಏರುಪೇರಾದೀತು.

ಕರರಾಶಿ
ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕಾರ್ಯರಂಗದಲ್ಲಿ ಕೆಲವೊಂದು ಸಮಸ್ಯೆಗಳು ಕಂಡು ಬಂದರೂ ಕಾರ್ಯಸಾಧನೆಯಾಗಲಿದೆ. ಕುಟುಂಬಸ್ಥರೊಂದಿಗೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ತಂದೆ-ತಾಯಿಯೊಂದಿಗೆ ಪ್ರೀತಿ, ಮಾನಸಿಕ ನೆಮ್ಮದಿ, ಅನ್ಯರಿಗಾಗಿ ಖರ್ಚು ಮಾಡುವಿರಿ, ಕಷ್ಟ ಕಾಲಕ್ಕೆ ಸಹಾಯ ಲಭಿಸುವುದಿಲ್ಲ. ಆರ್ಥಿವಾಗಿ ಕೊಟ್ಟು ಕೊಳ್ಳುವಿಕೆಯಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ.

ಕುಂಭರಾಶಿ
ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಗಮನಹರಿಸಿರಿ. ತಾಳ್ಮೆ ಕಳೆದುಕೊಳ್ಳುವಿರಿ, ಚಂಚಲ ಸ್ವಭಾವ, ಹೇಳಿಕೆ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕುವಿರಿ, ನೆಮ್ಮದಿ ಇಲ್ಲದ ದಿನ ನಿಮ್ಮದಾಗುವುದು, ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ ಕಾಡಲಿದೆ. ಗೃಹಸುಖ ಸಮಾಧಾನ ತರುತ್ತದೆ. ಬೇಸಾಯಗಾರರಿಗೆ ಕಾಯುವಂತಹ ಪರಿಸ್ಥಿತಿ ಕಂಡುಬಂದೀತು.

ಮೀನರಾಶಿ
ರಾಜಕೀಯ ವರ್ಗದವರು ಎಲ್ಲರ ಸಂಪರ್ಕವಿಟ್ಟು ಕೊಂಡಲ್ಲಿ ಕಾರ್ಯಸಾಧನೆಗೆ ಅನುಕೂಲವಾದೀತು. ವಿದ್ಯಾರ್ಥಿಗಳಿಗೆ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಕೆಲಸದಲ್ಲಿ ಅಲ್ಪ ಹಿನ್ನಡೆ, ಸೈಟ್-ವಾಹನ ಖರೀದಿಗೆ ಆಲೋಚನೆ, ಕಾರ್ಯ ಕ್ಷೇತ್ರದಲ್ಲಿ ಸ್ವಂತ ಪ್ರಯತ್ನದಿಂದಲೇ ಕಾರ್ಯ ಸಾಧನೆಯಾಗಲಿದೆ. ಜಾಗ್ರತೆ ಇರಲಿ.

Leave A Reply

Your email address will not be published.