ತೆಲಂಗಾಣ : ಮದುವೆ ಕಾರ್ಯ ನೆರವೇರಿಸಲು ಬಂದಿದ್ದ ಪುರೋಹಿತನೋರ್ವ ಮಂಗಳಸೂತ್ರವನ್ನೇ ಕಳವು ಮಾಡಿರುವ ವಿಚಿತ್ರ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ತುಪ್ರಾನ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಯುವಕ ಹಾಗೂ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯ ಸಮಾರಂಭಕ್ಕಾಗಿ ಗಜ್ವೆಲ್ ಮೂಲದ ಪುರೋಹಿತರೋರ್ವರನ್ನು ಗೊತ್ತು ಮಾಡಿದ್ದರು. ಮದುವೆಯ ಸಾಂಪ್ರದಾಯಿಕ ಕಾರ್ಯಗಳು ನಡೆಯುತ್ತಿತ್ತು. ವಧುವರರ ಸಂಬಂಧಿಕರು ನೆರೆದಿದ್ದರು. ಈ ವೇಳೆಯಲ್ಲಿ ಮದುವೆ ನೆರವೇರಿಸಲು ಬಂದಿದ್ದ ಪುರೋಹಿತ ಎಲ್ಲರ ಗಮನವನ್ನು ಬೇರೆಡೆಗೆ ಸೆಳೆದು ಮಾಂಗಲ್ಯ ಸರವನ್ನು ಕಳವು ಮಾಡಿದ್ದಾನೆ.
ಇನ್ನೇನು ವರ ವಧುವಿಗೆ ತಾಳಿ ಕಟ್ಟಬೇಕು ಅನ್ನುವಾಗ ಮಾಂಗಲ್ಯ ಸರ ಇಲ್ಲದಿರುವುದನ್ನು ನೋಡಿ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲಾ ಪುರೋಹಿತ ಮದುವೆ ಮಂಟಪದಿಂದ ಗಡಿಬಿಡಿಯಲ್ಲಿ ನಿರ್ಗಮಿಸಿದ್ದಾನೆ. ಇದು ವಧು ವರರ ಕಡೆಯವರಿಗೆ ಅನುಮಾನ ಮೂಡಿಸಿತ್ತು. ಕೂಡಲೇ ವಿಡಿಯೋ ಕ್ಯಾಮರಾ ಪರಿಶೀಲನೆಯನ್ನು ನಡೆಸಿದಾಗ ಪುರೋಹಿತ ತಾಳಿ ಕದ್ದಿರುವುದು ಬೆಳಕಿಗೆ ಬಂದಿದೆ.
ಪುರೋಹಿತರಿಗೆ ಕರೆ ಮಾಡಿದ್ರೆ ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಕೂಡಲೇ ಪುರೋಹಿತರ ಮನೆಗೆ ಹೋದಾಗಲೂ ಉಢಾಪೆಯ ಉತ್ತರವನ್ನು ನೀಡಿದ್ದಾನೆ. ಇದರಂದ ಆಕ್ರೋಶಗೊಂಡ ವಧು ಹಾಗೂ ವರನ ಕಡೆಯವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆಯ ವಿಡಿಯೋವನ್ನು ವಶಕ್ಕೆ ಪಡೆದು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇನ್ನೊಂದೆಡೆ ಪುರೋಹಿತರೇ ಮಂಗಳ ಸೂತ್ರ ಕಳವು ಮಾಡಿರೋ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜನರು ಶಾಕ್ ಆಗಿದ್ದಾರೆ.
Comments are closed.