ಮಹಾರಾಷ್ಟ್ರದಲ್ಲಿ ಹೆಚ್ಚಿದ ಶಿವಸೇನೆ ದೌರ್ಜನ್ಯ :’ಶೇಮ್​’ ಇದು ಕಂಗನಾ ಪ್ರತಿಕ್ರಿಯೆ

0

ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ವರ್ಸಸ್ ಶಿವಸೇನೆ ಸಂಘರ್ಷ ತೀವ್ರಗೊಂಡಿದೆ. ಈ ನಡುವಲ್ಲೇ ಮುಂಬೈನಲ್ಲಿ ಶಿವಸೇನಾ ಅಟಾಟೋಪ ಎಲ್ಲೆಮೀರುತ್ತಿದೆ. ನೌಕಾಪಡೆಯ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಟಿ ಕಂಗನಾ ಮಹಾರಾಷ್ಟ್ರ ಸರಕಾರಕ್ಕೆ ಶೇಮ್ ಅಂತಾ ಕಮೆಂಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ದಿನಕ್ಕೊಂದು ಘಟನೆ ನಡೆಯುತ್ತಿದೆ. ಈ ನಡುವಲ್ಲೇ ಪತ್ರಕರ್ತ ಆಶಿಶ್ ಸಿಂಗ್ “ಮುಂಬೈನಲ್ಲಿ ಏನಾಗುತ್ತಿದೆ? ಶಿ ವಸೈನಿಕರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಅವರು ಮಾಡಿದ ತಪ್ಪೇನು ಅಂದ್ರೆ ಸಿಎಂ ಉದ್ಧವ್ ಅವರನ್ನು ಟೀಕಿಸಿದ್ದ ವಾಟ್ಸ್​ಆ್ಯಪ್ ಸಂದೇಶವನ್ನು ಟ್ವೀಟರ್ ನಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈಗಾಗಲೇ ಅವರ ಟ್ವೀಟ್ 8 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು ಶಿವಸೇನಾ ಗೂಂಡಾಗಿರಿ ವ್ಯಾಪಕವಾಗಿ ಟೀಕೆಗೊಳಗಾಗಿದೆ. ಅವರ ಟ್ವೀಟ್​ನಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಅಟ್ಯಾಚ್ ಮಾಡಿದ್ದು ಶಿವಸೇನಾ ಗೂಂಡಾಗಿರಿಗೆ ಸಾಕ್ಷ್ಯವೆಂಬಂತಿದೆ. ಅದರಲ್ಲಿ ಆಶಿಶ್ ಸಿಂಗ್, ಕೇಂದ್ರ ಸರ್ಕಾರ ಕಂಗಾನ ಅವರಿಗೆ ಭದ್ರತೆ ಒದಗಿಸದೇ ಹೋಗಿದ್ದರೆ ಪರಿಸ್ಥಿತಿ ಏನಾಗಬಹುದಿತ್ತು ಎಂಬುದನ್ನು ಊಹಿಸಿಕೊಳ್ಳಿ” ಈ ಟ್ವೀಟನ್ನು ಚಿತ್ರನಟಿ ಕಂಗನಾ ರೀಟ್ವೀಟ್ ಮಾಡಿದ್ದು, ಶೇಮ್ ಎಂಬ ಕಮೆಂಟನ್ನೂ ಸೇರಿಸಿದ್ದಾರೆ.

ಪತ್ರಕರ್ತನ ಮಾಡಿದ ಟ್ವೀಟ್ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದ್ದರೆ, ಇತ್ತ ಕಂಗನಾ ರಾಣಾವತ್ ಕೂಡ ರೀ ಟ್ವೀಟ್ ಮಾಡಿದ್ದು, ಶೇಮ್ ಅಂದಿದ್ದಾರೆ.

Leave A Reply

Your email address will not be published.