ಗ್ಯಾರಂಟಿ ಉಚಿತ ಯೋಜನೆ : ಆರ್.ವಿ.ದೇಶಪಾಂಡೆ ಅಪಹಾಸ್ಯ

ಉತ್ತರ ಕನ್ನಡ (uttara kannada) : ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆ (Karnataka Guarantee Scheme) ಗಳನ್ನು ಜಾರಿಗೆ ತಂದಿದೆ.
ಆದರೆ ಗ್ಯಾರಂಟಿ ಯೋಜನೆಯ ಬಗ್ಗೆ ಖುದ್ದು ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅಪಹಾಸ್ಯ ಮಾಡಿದ್ದಾರೆ. ದಾಂಡೇಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರು ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಅವರ ಮಾತಿಗೆ ನೆರೆದಿದ್ದ ಜನರು ಬಿದ್ದು ಬಿದ್ದು ನಕ್ಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಏನಿದು ನಿಮ್ಮ ಉಚಿತ ಯೋಜನೆ ಎಂದು ಪ್ರಶ್ನಿಸಿದ್ದಾರೆ.
ಉಚಿತ ಯೋಜನೆಯಡಿ ಓಡಾಡುವ ಬಸ್ಸುಗಳ ಸ್ಥಿತಿ ಹೇಳೋದೆ ಬೇಡ. ಉಚಿತ್ ವಿದ್ಯುತ್ ಯೋಜನೆಗೂ ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯ ಸರಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆರ್ಎಸ್ಎಸ್ ನಿಷೇಧ, ಪ್ರಿಯಾಂಕ ಖರ್ಗೆ ಪತ್ರೆ : ಸುನಿಲ್ ಕುಮಾರ್ ಆಕ್ರೋಶ
ಉಚಿತ ಯೋಜನೆ (Karnataka Guarantee Scheme) ಗಳನ್ನು ಜಾರಿಗೆ ತರುವಾಗ ನಮ್ಮ ಗಮನಕ್ಕೆ ತರುತ್ತಿಲ್ಲ. ಅವರೇ ಸೇರಿಕೊಂಡು ಯೋಜನೆ ರೂಪಿಸಿದ್ದಾರೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಈ ಹಿಂದೆ ಕೂಡ ಆರ್.ವಿ.ದೇಶಪಾಂಡೆ ಅವರು ಈ ಹಿಂದೆ ಉಚಿತ ಗ್ಯಾರಂಟಿ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಆರ್.ವಿ.ದೇಶಪಾಂಡೆ ಅವರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ಜಾತಿ ಸಮೀಕ್ಷೆ ಎಡವಟ್ಟು, ಸತ್ತ ಸಿಬ್ಬಂದಿಗೆ ಸಮೀಕ್ಷೆಯ ಡ್ಯೂಟಿ …!



