Bihar Accident :ಪೊಲೀಸ್ ವಾಹನಕ್ಕೆ ಬೈಕ್ ಢಿಕ್ಕಿ, ಮೂವರು ಸಾವು, ಓರ್ವ ಸಜೀವ ದಹನ

ಪಾಟ್ನಾ : (Bihar Accident)ಪೊಲೀಸ್ ವಾಹನ ಹಾಗೂ ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಈ ಪೈಕಿ ಓರ್ವ ಬೈಕ್ ಸವಾರ ಸಜೀವವಾಗಿ ದಹನವಾಗಿರುವ ಘಟನೆ ಬಿಹಾರದ ಚಾಪ್ರ- ಸಿವಾನ್ ಹೆದ್ದಾರಿಯಲ್ಲಿ ನಡೆದಿದೆ. ಸದ್ಯ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದ(Bihar Accident) ಚಾಪ್ರಾ ಮತ್ತು ಸಿವಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಈ ದುರಂತ ಸಂಭವಿಸಿದೆ. ಸುಮಾರು ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವಾಹನ ಬೈಕ್ ಗೆ ಢಿಕ್ಕಿ ಹೊಡೆದಿದೆ. ಬೈಕಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಈ ಪೈಕಿ ಓರ್ವ ಪೊಲೀಸ್ ವಾಹನದ ಅಡಿಯಲ್ಲಿ ಸಿಲುಕಿಕೊಂಡಿದ್ದಾನೆ. ಆತನನ್ನು ವಾಹನ ಸುಮಾರು ನೂರು ಮೀಟರ್ ವರೆಗೆ ಎಳೆದುಕೊಂಡು ಹೋಗಿತ್ತು. ನಂತರದಲ್ಲಿ ವಾಹನದ ಇಂಧನ ಟ್ಯಾಂಕ್ ಸ್ಪೋಟಗೊಂಡು ಬೈಕ್ ಸವಾರ ಸಜೀವವಾಗಿ ದಹನವಾಗಿದ್ದಾನೆ.

ಇದನ್ನೂ ಓದಿ:Badminton Player PV Sindhu : ಸೀರೆಯುಟ್ಟು ರೀಲ್ಸ್ ಮಾಡಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು

ಇದನ್ನೂ ಓದಿ:Aircraft Crashed MiG-29K : ವಿಮಾನ ಅಪಘಾತ; ಗೋವಾದಲ್ಲಿ MiG-29K ಯುದ್ಧ ವಿಮಾನ ಪತನ

ಇದನ್ನೂ ಓದಿ:ಗಟ್ಟಿ ತರ್ಕ, ನ್ಯೂಸ್‌ ರಿಪೋಟರ್‌ ಹುನ್ನಾರಕ್ಕೆ ತಣ್ಣೀರೆರಚಿದ ಭುವಿ

ಪೊಲೀಸ್ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಪೊಲೀಸ್ ಸಿಬ್ಬಂಧಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಿ.ಜಯಪ್ರಕಾಶ್‌ ನಾರಾಯಣ್‌ ಅವರ 120 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪಾಲ್ಗೊಂಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

A bike collided with a police vehicle, three died, one was burnt alive

Comments are closed.