Padubidri Fraud: 2 ಲಕ್ಷ ಹಣ ಪಡೆದು ವಂಚಿಸಿದ ದಂಪತಿ: ದೂರು ದಾಖಲು
Padubidri Fraud: ವ್ಯಕ್ತಿಯೋರ್ವರಿಂದ 2 ಲಕ್ಷ ರೂಪಾಯಿ ಹಣ ಪಡೆದು ದಂಪತಿ ವಂಚಿಸಿದ್ದಾರೆ. ನಂತರ ಹಣ ಕೇಳಿದ್ದಕ್ಕೆ ಬೆದರಿಕೆಯೊಡ್ಡಿದ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಲ್ಕಿಯ ಸದಾಶಿವ ನಗರದ ಜಮೀಲ್ (59 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ಹಣ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ರಝಾಕ್ (45) ಮತ್ತು ಆತನ ಪತ್ನಿ ಶಾಹಿದ್ (35) ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.
Also Read: ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಜಗಳ, ಪ್ರಕರಣ ದಾಖಲು
ಮಂಗಳೂರು ತಾಲೂಕಿನ ಕೊಲ್ನಾಡ್ ಸೆಂಟ್ರಲ್ ಮಾರ್ಕೆಟ್ ನಲ್ಲಿ ಹಣ್ಣು ಮಕ್ಕಳು ತರಕಾರಿ ವ್ಯಾಪಾರ ನಡೆಸುತ್ತಿದ್ದ ರಝಾಕ್ ತನ್ನ ಸಂಬಂಧಿ ಜಮೀಲ್ ಎಂಬವರಿಂದ 2 ಲಕ್ಷ ರೂಪಾಯಿ ಹಣ ಪಡೆದಿದ್ದರು.
ಹಣ ಪಡೆಯುವಾಗ ಒಂದು ತಿಂಗಳ ಒಳಗಾಗಿ ವಾಪಾಸ್ ಮಾಡುವುದಾಗಿ ತಿಳಿಸಿದ್ದ ರಝಾಕ್ ವರ್ಷ ಕಳೆದರೂ ಹಣ ನೀಡಿರಲಿಲ್ಲ. ಹಣ ಕೇಳಿದಾಗ ರಝಾಕ್ ಹಾಗೂ ಆತನ ಪತ್ನಿ ಸತಾಯಿಸಿದ್ದಾರೆ.
Also Read: Manipal News: ಮಣಿಪಾಲ: ಯುವಕ ನಾಪತ್ತೆ, ಸೇತುವೆ ಬಳಿ ಬೈಕ್ ಪತ್ತೆ
ರಝಾಕ್ ಹಾಗೂ ಶಾಹಿದ್ ಹಣ ಕೇಳಿದ್ದಕ್ಕೆ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಬೆದರಿಕೆ ಒಡ್ಡಿದ್ದಾರೆ ಎಂದು ಜಮೀಲ್ ಇದೀಗ ಪಡುಬಿದ್ರಿ(Padubidri) ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



