ಉಡುಪಿಯ ಮೀನುಗಾರರಿಗೂ ತಟ್ಟಿದ ಗ್ಯಾಸ್​ ಟ್ರಬಲ್​ : ಆಳಸಮುದ್ರ ಮೀನುಗಾರಿಕೆಗೆ ಸಂಕಷ್ಟ

ಮತ್ಸ್ಯಕ್ಷಾಮದಿಂದಾಗಿ ನಷ್ಟದಲ್ಲಿದ್ದ ಮೀನುಗಾರರು ಇದೀಗ ಗ್ಯಾಸ್​ ಸಿಲಿಂಡರ್​ ಅಲಭ್ಯತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಯಿಂದಲೂ ವಾಪಸ್ಸಾಗಿದ್ದಾರೆ. ಹೀಗೆ ಆಗಿ ನಮ್ಮ ವ್ಯಾಪಾರ ನಿಂತರೆ ಹೊಟ್ಟೆಪಾಡು ಹೇಗೆ ಸರಿದೂಗಿಸುವುದು ಎಂಬ ಚಿಂತೆ ಮೀನುಗಾರರಲ್ಲಿ ಎದುರಾಗಿದೆ.

ಉಡುಪಿ : ಕರಾವಳಿ ಭಾಗದಲ್ಲಿ ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿದ್ದ ಗ್ಯಾಸ್​ ಟ್ರಬಲ್​ ಇದೀಗ ಮತ್ಸ್ಯೋದಮಕ್ಕೂ ತಟ್ಟಿದೆ. ವಾಣಿಜ್ಯ ಸಿಲಿಂಡರ್​ಗಳನ್ನು ಆದ್ಯತೆಯ ಮೇರೆಗೆ ವಿತರಿಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್​ ಸಿಲಿಂಡರ್​ಗಳು ಮಾರುಕಟ್ಟೆಗಳಲ್ಲಿ ಲಭ್ಯವಾಗದೇ ಆಳಸಮುದ್ರ ಮೀನುಗಾರಿಕೆಯನ್ನು ಉಡುಪಿ ಮೀನುಗಾರರು ಬಹುತೇಕ ಸ್ಥಗಿತಗೊಳಿಸಿದ್ದಾರೆ.

ಆಳ ಸಮುದ್ರ ಮೀನುಗಾರಿಕೆಗೆ ಬೋಟ್​​ಗಳಲ್ಲಿ ತೆರಳುವ ಕಡಲ ಮಕ್ಕಳು ಅಡುಗೆಗೆ ವಾಣಿಜ್ಯ ಸಿಲಿಂಡರ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಇದೀಗ ವಾಣಿಜ್ಯ ಸಿಲಿಂಡರ್​ಗಳನ್ನು ಶಾಲೆಯ ಬಿಸಿಯೂಟ, ಆಸ್ಪತ್ರೆ ಹಾಗೂ ಕಾರಾಗೃಹ ಸೇರಿದಂತೆ ಸರ್ಕಾರಿ ಸಂಸ್ಥೆಗಳಿಗೆ ಆದ್ಯತೆಯ ಆಧಾರದಲ್ಲಿ ವಿತರಣೆ ಮಾಡುತ್ತಿರುವುದರಿಂದ ಮೊದಲಿನಷ್ಟು ಸುಲಭದಲ್ಲಿ ವಾಣಿಜ್ಯ ಸಿಲಿಂಡರ್​ ಕೈಗೆಟುಕುತ್ತಿಲ್ಲ.

ಮೊದಲೇ ಮತ್ಸ್ಯಕ್ಷಾಮದಿಂದಾಗಿ ನಷ್ಟದಲ್ಲಿದ್ದ ಮೀನುಗಾರರು ಇದೀಗ ಗ್ಯಾಸ್​ ಸಿಲಿಂಡರ್​ ಅಲಭ್ಯತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಯಿಂದಲೂ ವಾಪಸ್ಸಾಗಿದ್ದಾರೆ. ಹೀಗೆ ಆಗಿ ನಮ್ಮ ವ್ಯಾಪಾರ ನಿಂತರೆ ಹೊಟ್ಟೆಪಾಡು ಹೇಗೆ ಸರಿದೂಗಿಸುವುದು ಎಂಬ ಚಿಂತೆ ಮೀನುಗಾರರಲ್ಲಿ ಎದುರಾಗಿದೆ. ಹೀಗಾಗಿ ನಮ್ಮನ್ನೂ ಆದ್ಯತೆಯ ಪಟ್ಟಿಗೆ ಸೇರಿಸಿಕೊಳ್ಳುವಂತೆ ಸರ್ಕಾರಕ್ಕೆ ಮೀನುಗಾರರು ಮನವಿ ಮಾಡಿದ್ದಾರೆ.

Also Read : ಅಡುಗೆ ಅನಿಲ ಪೂರೈಕೆಯಲ್ಲಿ ವಿಳಂಬವಾಗುತ್ತಿದೆಯೇ ? ಈ ಸಹಾಯವಾಣಿಗೆ ದೂರು ಸಲ್ಲಿಸಿ

ಈಗಾಗಲೇ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಅನ್ನಪ್ರಸಾದಕ್ಕೆ ಸಿಲಿಂಡರ್​ ಅಭಾವ ಅಡ್ಡಿಯಾಗಿದೆ. ಆದರೂ ದೇವಸ್ಥಾನಗಳ ಮೆನು ಬದಲಾಯಿಸಿ, ಕಟ್ಟಿಗೆ ಒಲೆಗಳನ್ನು ಉರಿಸಿ ಅಡುಗೆ ಸಿಬ್ಬಂದಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮುಂದುವರಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈ ಎಲ್ಲಾ ಸಂಕಷ್ಟ ಎದುರಾಗುತ್ತಿದ್ದು ಯುದ್ಧ ಆದಷ್ಟು ಬೇಗ ಕೊನೆಗಾಣಲಿ ಎಂದು ಕರಾವಳಿ ಜನತೆ ಪ್ರಾರ್ಥಿಸುತ್ತಿದ್ದಾರೆ.

Also Read : ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೂ ತಟ್ಟಿದ ಗ್ಯಾಸ್​ ಟ್ರಬಲ್​ : ಅಡುಗೆ ಒಲೆಯಲ್ಲಿ ಭೋಜನ ವ್ಯವಸ್ಥೆ

Udupi fishermen deep sea fishing lpg gas shortage issue

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories