ಪಾದ ತೊಳೆದು ನೀರು ಕುಡಿಯುವಂತೆ ಯುವಕನಿಗೆ ಚಿತ್ರಹಿಂಸೆ : ವೈರಲ್​ ಆಯ್ತು ಅಮಾನವೀಯ ವಿಡಿಯೋ

Viral News: ಈಗ ಇನ್​ಸ್ಟಾಗ್ರಾಂ(Instagram) ಬಳಕೆ ಮಾಡದವರು ಯಾರೂ ಇಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರ ಮೊಬೈಲ್​ನಲ್ಲೂ ಇನ್​ಸ್ಟಾಗ್ರಾಂ ಖಾತೆ ಇದ್ದೇ ಇರುತ್ತದೆ. ಆದರೆ ಮಧ್ಯಪ್ರದೇಶದ ದಾಮೋಹ್​ ಜಿಲ್ಲೆಯಲ್ಲಿ ಇನ್​ಸ್ಟಾಗ್ರಾಂನ ಪೋಸ್ಟ್​ ಒಂದನ್ನು ಆಧರಿಸಿ ಒಬಿಸಿ ಸಮುದಾಯದ ಯುವಕನೊಬ್ಬನ ಬಳಿ ಬ್ರಾಹ್ಮಣ ವ್ಯಕ್ತಿಯ ಪಾದ ತೊಳೆದು ನೀರು ಕುಡಿಯುವಂತೆ ಒತ್ತಾಯಿಸಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

ದಾಮೋಹ್​ನ ಸತಾರಿಯಾ ಗ್ರಾಮದ ಪುರುಷೋತ್ತಮ್​ ಕುಶ್ವಾಹ ಎಂಬಾತ ಇನ್​ಸ್ಟಾಗ್ರಾಂನಲ್ಲಿ AI ತಂತ್ರಜ್ಞಾನದ ಸಹಾಯದಿಂದ ಅಣ್ಣು ಪಾಂಡೆ ಎಂಬಾತನ ಫೋಟೋಗೆ ಚಪ್ಪಲಿ ಮಾಲೆ ಹಾಕಿದ್ದ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ಆ ಫೋಟೋವನ್ನು ಡಿಲೀಟ್​ ಮಾಡಿದ್ದ ಪುರುಷೋತ್ತಮ್​ ಕ್ಷಮಾಪಣೆಯನ್ನೂ ಕೇಳಿದ್ದ ಎನ್ನಲಾಗಿದೆ.

Also Read: ವಿಶ್ವದ ಅತಿ ಶ್ರೀಮಂತ ಈ ರಾಜಕುಮಾರಿಯ ಆದಾಯ ಕೇಳಿದ್ರೆ ತಲೆ ತಿರುಗುತ್ತೆ

ಆದರೆ ಇಲ್ಲಿಗೆ ಪ್ರಕರಣ ಕೊನೆಗಂಡಿರಲಿಲ್ಲ. ಗ್ರಾಮ ಪಂಚಾಯತ ಮಟ್ಟದಲ್ಲಿ ಸಭೆ ನಡೆಸಿ ಪಾಂಡೆಯ ಪಾದಗಳನ್ನು ತೊಳೆದು ನೀರು ಕುಡಿಯುವಂತೆ ಕುಶ್ವಾಹಗೆ ಒತ್ತಾಯಿಸಲಾಯಿತು ಹಾಗೂ 5100 ರೂಪಾಯಿಗಳ ದಂಡವನ್ನೂ ವಿಧಿಸಲಾಗಿತ್ತು. ಈ ಅಮಾನವೀಯ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು ಗ್ರಾಮಸ್ಥರ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಸ್ಥಳೀಯ ಠಾಣೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಈ ಸಂಬಂಧ ಪುರುಷೋತ್ತಮ್ ಯಾವುದೇ ರೀತಿಯ ದೂರನ್ನು ದಾಖಲಿಸಿಲ್ಲ. ಪಾಂಡೆ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್​ನ್ನು ಪೊಲೀಸರು ಸ್ವಯಂಪ್ರೇರತರಾಗಿ ದಾಖಲಿಸಿಕೊಂಡಿದ್ದಾರೆ ಎಂದು ದಾಮೋಹ್​ ಜಿಲ್ಲಾಧಿಕಾರಿ ಸುಧೀರ್​ ಕುಮಾರ್​ ಕೊಚ್ಚರ್​ ಮಾಹಿತಿ ನೀಡಿದ್ದಾರೆ.

Also Read: ಧ್ವಂಸವಾಗಲಿದೆಯಾ ಪ್ಯಾರಿಸ್​ನ ಐಕಾನಿಕ್​ ಐಫೆಲ್​ ಟವರ್​ : ಇಲ್ಲಿದೆ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು

ಪುರುಷೋತ್ತಮ್​ನ ಮತ್ತೊಂದು ವಿಡಿಯೋ ಕೂಡ ವೈರಲ್​ ಆಗಿದ್ದು, ಈ ವಿಡಿಯೋದಲ್ಲಿ ಆತ ನಾನು ಮಾಡಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇನೆ. ಹಾಗೂ ಇದರಲ್ಲಿ ಯಾವುದೇ ರಾಜಕೀಯ ಮಿಶ್ರಣ ಮಾಡುವ ಇಚ್ಛೆ ನನಗಿಲ್ಲ ಎಂದು ಹೇಳಿದ್ದಾನೆ.

ದಾಮೋಹ್​​ನಲ್ಲಿ ನಡೆದ ಈ ಘಟನೆಯು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್​ ಈ ಘಟನೆಯನ್ನು ಮಾನವೀಯತೆಗೆ ಬಳಿದ ಕಳಂಕ ಎಂದು ಖಂಡಿಸಿದರೆ ಆಡಳಿತಾರೂಢ ಬಿಜೆಪಿ ಪ್ರತಿ ಪ್ರಕರಣಗಳಿಗೂ ರಾಜಕೀಯ ಬಣ್ಣ ಬಳಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories