ನಟನೆಗೆ ಗುಡ್‌ ಬೈ ಹೇಳಿ ಊರಲ್ಲಿ ಕೃಷಿ ಮಾಡ್ತಾರಾ ನಟ ದಿಗಂತ್?

ತಮಗೆ ಸರಿಯಾದ ಸಿನಿಮಾಗಳು ಸಿಗದ ಕಾರಣ ನಟನೆಗೆ ವಿದಾಯ ಹೇಳಿ, ತಮ್ಮೂರಿಗೆ ಮರಳಿ ಕೃಷಿ ಮಾಡುವ ಆಲೋಚನೆಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ದೂದ್ ಪೇಡಾ’ ಖ್ಯಾತಿಯ ಜನಪ್ರಿಯ ನಟ ದಿಗಂತ್ ಮಂಚಾಲೆ ಅವರು (Actor Diganth) ಚಿತ್ರರಂಗದಲ್ಲಿ ಎದುರಾಗಿರುವ ಅವಕಾಶಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಸರಿಯಾದ ಸಿನಿಮಾಗಳು ಸಿಗದ ಕಾರಣ ನಟನೆಗೆ ವಿದಾಯ ಹೇಳಿ, ತಮ್ಮೂರಿಗೆ ಮರಳಿ ಕೃಷಿ ಮಾಡುವ ಆಲೋಚನೆಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಬಾಡಿಗೆ ಹಣವೇ ಜೀವನಕ್ಕೆ ಆಧಾರ

ತಮ್ಮ ಹೊಸ ಸಿನಿಮಾ ‘ರುದ್ರ ಕಾಲ’ದ ಮುಹೂರ್ತದ ಸಮಯದಲ್ಲಿ ಮಾತನಾಡಿದ ದಿಗಂತ್, ಚಿತ್ರರಂಗದ ಇಂದಿನ ಸಂಕಷ್ಟದ ಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಆರು ತಿಂಗಳ ಹಿಂದೆ ಇಬ್ಬರು ನಿರ್ಮಾಪಕರು ಸಿನಿಮಾ ಮಾಡೋಣ ಎಂದು ಬಂದು, ನಂತರ ಪರಿಸ್ಥಿತಿ ಸರಿಯಿಲ್ಲ ಎಂದು ಹಿಂದೆ ಸರಿದರು. ನಂದಿ ಬೆಟ್ಟದ ಸಮೀಪವಿರುವ ನನ್ನ ಮನೆಯ ಬಾಡಿಗೆ ಹಣದಿಂದಲೇ ಜೀವನ ನಡೆಸುವಂತಾಗಿದೆ. ಈ ನಟನೆ ಸಾಕು, ತೀರ್ಥಹಳ್ಳಿಗೆ ಮರಳಿ ಕೃಷಿ ಮಾಡೋಣ ಎಂದು ನಿರ್ಧರಿಸಿದ್ದೆ” ಎಂದು ಭಾವುಕರಾಗಿ ನುಡಿದಿದ್ದಾರೆ.

ಕನ್ನಡ ಚಿತ್ರರಂಗದ ಇಂದಿನ ಸ್ಥಿತಿ

ಕನ್ನಡ ಸಿನಿಮಾಗಳಿಗೆ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಮತ್ತು ನಿರ್ಮಾಪಕರು ಬಂಡವಾಳ ಹೂಡಲು ಭಯಪಡುತ್ತಿದ್ದಾರೆ ಎಂದು ದಿಗಂತ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈಗಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂಬುದು ಅವರ ಅಭಿಪ್ರಾಯ.‌

ಇದನ್ನೂ ಓದಿ: Monsoon Update : ರಾಜ್ಯದ ಜನತೆಗೆ ತಂಪು ಸುದ್ದಿ; ಈ ಬಾರಿ ವಾಡಿಕೆಗಿಂತ ಮೊದಲೇ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾನೆ ಮಳೆರಾಯ

ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರೂ, ಇಂದಿನ ಅನಿಶ್ಚಿತತೆಯಿಂದಾಗಿ ಒಬ್ಬ ಜನಪ್ರಿಯ ನಟ ಕೃಷಿಯತ್ತ ಮುಖ ಮಾಡಲು ಯೋಚಿಸುತ್ತಿರುವುದು ಸ್ಯಾಂಡಲ್‌ವುಡ್‌ನ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories