ಪತ್ನಿ, ಅತ್ತೆಯನ್ನು ಕತ್ತು ಸೀಳಿ ಕೊಂದ ಪಾಪಿ ಪತಿ

ಬೆಂಗಳೂರು : ಮದುವೆ ಆಗದೇ ಸಂಸಾರ ನಡೆಸುತ್ತಿದ್ದಾತನಿಗೆ ತನ್ನ ಮಗಳನ್ನು ಮದುವೆಯಾಗುವಂತೆ‌ ಕೇಳಿದ್ದೇ ತಪ್ಪಾಗಿ ಹೋಗಿದೆ. ಪಾಪಿ ಪತಿಯೋರ್ವ ಬೆಳ್ಳಂಬೆಳಗ್ಗೆಯೇ ಪತ್ನಿ ಹಾಗೂ ಅತ್ತೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೈಚಾಪುರದಲ್ಲಿ ನಡೆದಿದ್ದು, ಲಕ್ಷ್ಮಿ ದೇವಿ (50 ವರ್ಷ ) , ರಮಾದೇವಿ (30 ವರ್ಷ ) ಎಂಬವರೇ ಕೊಲೆಯಾದ ಅಮ್ಮ, ಮಗಳು. ಮಲಯ ಫರೀದ (40ವರ್ಷ) ಎಂಬಾತನೇ ಹತ್ಯೆ ಗೈದ ಪಾಪಿ ಪತಿ.
ಓರಿಸ್ಸಾ ಮೂಲದ ಈ ಕುಟುಂಬ ನಗ ಮನೆಯನ್ನು ಬಾಡಿಗೆ ಪಡೆದು ಜೀವನ ಸಾಗಿಸುತ್ತಿತ್ತು. ಆರೋಪಿ ಮಲಯ ಫರಿದ ಮದುವೆ ಆಗದೆ ಸಂಸಾರ ಮಾಡುತ್ತಿದ್ದ. ದಂಪತಿಗಳಿಗೆ 5 ತಿಂಗಳ ಮಗುವಿತ್ತು.

ಹೀಗಾಗಿ ತನ್ನ ಮಗಳನ್ನು ಮದುವೆಯಾಗುವಂತೆ ಅತ್ತೆ ಲಕ್ಷ್ಮೀ ದೇವಿ ಆಗಾಗ ಒತ್ತಾಯ ಮಾಡುತ್ತಿದ್ದರು. ಆದರೆ ಮದುವೆಯಾಗೋದು ಮಲಯ ಫರೀದನಿಗೆ ಇಷ್ಟವಿರಲಿಲ್ಲ. ಹೀಗಾಗಿ ಕೋಪಗೊಂಡ ಫರೀದ ಮಧ್ಯರಾತ್ರಿ ಅತ್ತೆ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಮಲಗಿದ್ದ ಪತ್ನಿಯನ್ನು ಎಬ್ಬಿಸಿ ವಿಚಾರವನ್ನು ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಪತ್ನಿ ರಮಾದೇವಿ ಕಿರುಚಿದ್ದಾಳೆ. ಈ ವೇಳೆಯಲ್ಲಿ ಆರೋಪಿ ಫರೀದಾ ಪತ್ನಿಯ ಕತ್ತುಸೀಳಿ ಕೊಲೆಗೈದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೊತ್ತರ ಪರೀಕ್ಷೆಗೆ ಮೃತ ದೇಹ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

Comments are closed.