Horoscope Today : ದಿನಭವಿಷ್ಯ – ಮಾರ್ಚ್ 24 ಶುಕ್ರವಾರ

ಮೇಷರಾಶಿ
(Horoscope Today) ಹಿರಿಯರ ಅನುಭವದಿಂದ ಪ್ರಯೋಜನ ಪಡೆಯುವಿರಿ. ಅನಗತ್ಯ ವಾದಗಳನ್ನು ಮಾಡಿ, ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಇಂದು ನೀವು ಪ್ರಮುಖ ವ್ಯಕ್ತಿಗಳೊಂದಿಗೆ ಸಂಬಂಧಗಳು ಬಲಗೊಳ್ಳುವುದು. ಅದೇ ಸಮಯದಲ್ಲಿ, ಯೋಗವು ಇದ್ದಕ್ಕಿದ್ದಂತೆ ಸಂಪತ್ತಿನ ಮೂಲವಾಗುತ್ತಿದೆ. ಸೃಜನಶೀಲತೆ ಅರಳಲಿದೆ. ನಿಮ್ಮ ಪ್ರತಿಭೆಯಿಂದ ನೀವು ಅದ್ಭುತಗಳನ್ನು ಮಾಡಲು ಸಾಧ್ಯವಾಗುತ್ತದೆ. ಸೋಮಾರಿತನದಿಂದ ಸಮಯವು ವ್ಯರ್ಥವಾಗಲಿದೆ. ಅನಿವಾರ್ಯವಾಗಿ ದೂರ ಪ್ರಯಾಣ, ವಾಹನ ಚಲಾಯಿಸುವಲ್ಲಿ ಎಚ್ಚರ, ಕೃಷಿ ಕೆಲಸಗಳಿಗಾಗಿ ಪರಿಶ್ರಮ

ವೃಷಭರಾಶಿ
ತರಾತುರಿಯಲ್ಲಿ ಮಾಡಿದ ಕೆಲಸವು ಹಾನಿಯನ್ನುಂಟು ಮಾಡುತ್ತದೆ. ಮಗುವಿನ ನಡವಳಿಕೆಯು ನೋವನ್ನು ಉಂಟುಮಾಡುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಲು ಆಸಕ್ತಿ ಉಂಟಾಗಬಹುದು. ಕುಟುಂಬದಲ್ಲಿ ಅಭಿವೃದ್ಧಿ, ಸಜ್ಜನರ ಸಹವಾಸದಿಂದ ಜ್ಞಾನವೃದ್ಧಿ, ಸಾಲ ಮರುಪಾವತಿ. ನೀವು ನಿಮ್ಮ ಆಸೆಗಳನ್ನು ಈಡೇರಿಸಲು ದಾರಿ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಹೊಸ ಸಾಧ್ಯತೆಗಳು ಕಾಣಿಸಿಕೊಳ್ಳುಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ಸಹೋದರನ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಬಹುದು. ಆರ್ಥಿಕ ಯೋಗವಿದೆ.

ಮಿಥುನರಾಶಿ
ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಲಿವೆ. ಸಂಗಾತಿಯ ಬೆಂಬಲ ಇರುತ್ತದೆ. ಆಲೋಚನೆಗಳು ನಿಧಾನಗತಿಯಲ್ಲಿ ಇರಲಿವೆ. ತಲೆನೋವು, ಮಾನಸಿಕ ಅಸ್ವಸ್ಥತೆಯಂದ ತೊಂದರೆ, ಅನಗತ್ಯ ವಿಚಾರಗಳ ಬಗ್ಗೆ ಗಮನಹರಿಸಬೇಡಿ. ಅಧಿಕ ಖರ್ಚುಗಳು ಉಂಟಾಗಲಿದೆ. ಆದರೆ ಒಳ್ಳೆಯ ಕಾರ್ಯಕ್ಕೆ ಆಗುತ್ತಿದೆ ಎಂಬ ಸಂತೋಷವಿರಲಿದೆ. ಚಿಂತನಾ ಹೆಚ್ಚಾಗುತ್ತದೆ. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಭೂಮಿಯ ವ್ಯವಹಾರವನ್ನು ಮಾಡಲಿದ್ದೀರಿ.

ಕರ್ಕಾಟಕರಾಶಿ
(Horoscope Today) ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊಸತನ್ನು ಕಲಿಯಬೇಕು ಎನದನುವ ತುಡಿತ ಇರಲಿದೆ. ಬಹುದಿನಗಳಿಂದ ಯೋಚಿಸುತ್ತಿದ್ದ ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡುವಿರಿ. ಹಿರಿಯರ ಸಲಹೆಯಿಂದ ಪ್ರಯೋಜನವಾಗಲಿದೆ. ಅಧಿಕಾರಿಗಳ ವರ್ಗದವರಿಂದ ಪ್ರಶಂಸೆ, ಕ್ರಿಯಾತ್ಮಕ ಕೆಲಸಗಳಲ್ಲಿ ಶುಭ, ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯ ದೂರ. ಭೋಗದ ವಸ್ತುಗಳ ಮೂಲಕ ಖುಷಿ ಪಡೆಯುವಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು‌ಮಾಡಲಿದೆ.

ಸಿಂಹರಾಶಿ
ಆಪ್ತರಿಂದ ಉಡುಗೊರೆ ಸಿಗಲಿದೆ. ಸ್ವಲ್ಪ ಆಲಸ್ಯವು ನಿಮ್ಮ ಕೆಲಸವನ್ನು ಹಿಂದಿಕ್ಕುವುದು. ಸ್ವತಂತ್ರವಾಗಿ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮವರ ಅಹಸಜ ವರ್ತನೆ ನಿಮಗೆ ಬೇಸರ ತರಿಸೀತು. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಸರ್ಕಾರಿ ಕೆಲಸಗಳು ವಿಳಂಬವಾಗುವುದು. ನೆಚ್ಚಿನ ಕಲಾವಿದರ ಭೇಟಿಯಾಗಲಿದೆ. ಆಪ್ತರಿಂದ ಉಡುಗೊರೆ ಸಿಗಲಿದೆ. ಸಂಶೋಧನಾ ಕ್ಷೇತ್ರದವರಿಗೆ ಶುಭ, ಕುಟುಂಬದಲ್ಲಿ ಕಲಹ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ

ಕನ್ಯಾರಾಶಿ
ಶಿಕ್ಷಣದ ಬಗ್ಗೆ ನಿಮಗಿರುವ ಆಸಕದತಿ ಮತ್ತಷ್ಟು ಅಧಿಕ ವಾಗಬಹುದು. ಮಕ್ಕಳ ಚಿಂತೆಯಿಂದ ಎಲ್ಲ ಸಂತೋಷಗಳು ಮರೆಯಾಗಲಿವೆ. ಅನವಶ್ಯಕವಾದ ಸಮಸ್ಯೆಗಳು ನಿಮ್ಮನ್ನು ಕಾಡಿಯಾವು. ಮಾನಸಿಕ ವೇದನೆ, ವಿಪರೀತ ಕೋಪ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ನೀವಿಂದು ನಿಮ್ಮ ಮೇಲೆ ಪೂರ್ಣಾವಾದ ನಂಬಿಕೆ ಇಡುವ ಮೂಲಕ ಯಶಸ್ಸು ಕಾಣುವಿರಿ. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. ಎಂದೊಕ ಮಾಡಿಕೊಂಡ ವಿದೇಶದ ಸಂಪರ್ಕಗಳು ಇಂದು ಪ್ರಯೋಜನವಾಗಲಿದೆ. ಶಿಕ್ಷಣದ ಬಗ್ಗೆ ನಿಮಗಿರುವ ಆಸಕದತಿ ಮತ್ತಷ್ಟು ಅಧಿಕವಾಗಬಹುದು.

ತುಲಾರಾಶಿ
ಕೆಲವು ನಕಾರಾತ್ಮಕ ಸುದ್ದಿಗಳಿಂದಾಗಿ ನಿಮ್ಮ ಮನಸ್ಸು ಚಿಂತಿತವಾಗಬಹುದು. ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಧರ್ಮ ಕಾರ್ಯಕ್ಕೆ ಅಡೆತಡೆ ಪರಿಹಾರ. ಆರ್ಥಿಕವಾದ ಏರಿಳಿತಗಳು ಹೆಚ್ಚಾಗಿ ಕಾಣಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ಲ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದಾನ ಮಾಡುವ ಮನೋಭಾವವು ಹೆಚ್ಚಾಗುತ್ತದೆ. ನೀವು ಇಂದು ಮಂಗಲಕಾರ್ಯವನ್ನು ಯೋಜಿಸುವಿರಿ.

ವೃಶ್ಚಿಕರಾಶಿ
(Horoscope Today) ಆರಂಭದಲ್ಲಿ, ಕೆಲವು ಕೆಲಸಗಳನ್ನು ಯೋಚಿಸದೆ ಮಾಡಲಾಗುತ್ತದೆ ಮತ್ತು ಕೆಲವು ಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ, ಇದು ಗುರಿಯ ಸಾಧನೆಗೆ ಅಥವಾ ಅನುಭವದ ಅನನ್ಯ ಕೊಡುಗೆಗೆ ಕಾರಣವಾಗುತ್ತದೆ. ಮನೋ ನಿಯಂತ್ರಣ ಇಲ್ಲದಿರುವಿಕೆ, ಆರ್ಥಿಕ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ ಪರಿಹಾರ. ನಿಮ್ಮ ಮಾತು ಮತ್ತು ಬುದ್ಧಿವಂತಿಕೆಯಿಂದ ಜನರು ಪ್ರಭಾವಿತರಾಗಲಿದ್ದಾರೆ. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಈ ಸಮಯದಲ್ಲಿ ದೊಡ್ಡ ಅವಕಾಶದ ಹುಡುಕಾಟವು ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ : Dehli Capitals : ಐಪಿಎಲ್‌ನಲ್ಲಿ ಇಂಗ್ಲೆಂಡ್ ಪರ ಆಡಲಿದ್ದಾರೆ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್

ಧನಸ್ಸುರಾಶಿ
ನೀವು ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡಲಿದೆ. ಅನುಭವಿ ಜನರನ್ನು ಸಂಪರ್ಕಿಸಲಾಗುವುದು. ಆರೋಗ್ಯ ದುರ್ಬಲವಾಗಬಹುದು. ಆಸ್ತಿಯ ವಿಚಾರ ಪುನಃ ಬೆಳಕಿಗೆ ಬಂದು ಸಣ್ಣ ಕಲಹದಲ್ಲಿ ಮುಕ್ತಾಯವಾದೀತು. ಸಹೋದರ ಸಹೋದರಿಯರಲ್ಲಿ ವಾಗ್ವಾದ, ಉದ್ಯೋಗ ವ್ಯಾಪಾರಗಳಲ್ಲಿ ಅಡೆತಡೆ, ಅಧಿಕ ಖರ್ಚು ಅನಿವಾರ್ಯ. ಇಂದು ಹಳೆಯ ಸಂಬಂಧಗಳು ಪುನಃ ಹತ್ತಿರವಾಗಿ ಸಂತೋಷಕ್ಕೆ ಕಾರಣವಾಗಲಿದೆ. ಉನ್ನತ ಮಟ್ಟದ ಸಂಬಂಧಗಳು ದೂರಗಾಮಿ ಪ್ರಯೋಜನಗಳಿಗೆ ದಾರಿ ಮಾಡಿಕೊಡುತ್ತವೆ. ನೀವು ತಕ್ಷಣ ಪ್ರತಿಕ್ರಿಯಿಸದಿರುವುದು ಒಳ್ಳೆಯದು.‌ಅನಗತ್ಯ ಧೈರ್ಯವನ್ನು ತೋರಿಸುವುದನ್ನು ತಪ್ಪಿಸುವುದು ಸೂಕ್ತ.

ಮಕರರಾಶಿ
(Horoscope Today) ಆರ್ಥಿಕವಾಗಿ ಅನೇಕ ಲಾಭಗಳು ಆಗಲಿವೆ. ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಹಿರಿಯರೊಂದಿಗೆ ಆತ್ಮೀಯತೆ ಬೆಳೆಯಲಿದೆ. ವ್ಯಾಪಾರವನ್ನು ಬೆಳಗಿಸಲು ಅನೇಕ ಅವಕಾಶಗಳಿವೆ, ಆದರೆ ನಿಮ್ಮ ನಿರ್ಲಕ್ಷ್ಯವು ಕೆಲಸವನ್ನು ಹಾಳು ಮಾಡಬಹುದು. ಉದ್ಯೋಗ ದೊರಕುವ ಸಂದರ್ಭ, ಅಧಿಕ ಒತ್ತಡದ ಜೀವನ, ನಿದ್ರಾಭಂಗ. ಬಹು ದಿನಗಳ ಆಸೆಗಳು ಇಂದು ಈಡೇರಲಿದೆ. ಇಂದು ಮಹತ್ವದ ಕಾಮಗಾರಿಗಳು ನಿಮ್ಮ ಪಾಲಿಗೆ ಸಿಗಲಿದೆ. ಇದನ್ನೂ ಓದಿ : Water supply – power cut : ಉಡುಪಿ: ಇಂದು ವಿದ್ಯುತ್‌, ನೀರಿನ ಪೂರೈಕೆಯಲ್ಲಿ ವ್ಯತ್ಯಯ

ಕುಂಭರಾಶಿ
ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕಲಿಕೆಯ ವಿಚಾರದಲ್ಲಿ ನೀವು ಎಂದಿಗಿಂತ ಹೆಚ್ಚು ಪ್ರಯತ್ನಶೀಲರು. ವಿವೇಚನೆ ಹೆಚ್ಚಲಿದೆ. ಯಾರೊಬ್ಬರ ಸಲಹೆ ಫಲ ನೀಡಲಿದೆ. ಕಾಲುಗಳು ಮತ್ತು ಸ್ನಾಯುಗಳಲ್ಲಿ ನೋವು ಇರುತ್ತದೆ. ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು, ಉದ್ಯೋಗಸ್ಥರಿಗೆ ಅನುಕೂಲ, ಪ್ರಯಾಣದಲ್ಲಿ ನಿರಾಳಭಾವ, ಕೃಷಿಕರಿಗೆ ಅನಾನುಕೂಲ. ಇಂದು ನೀವು ಸಂಸಾರದ ಸುಖವನ್ನು ಅನುಭವಿಸುವಿರಿ. ನಿಮ್ಮ ಊಹೆಯ ಅಳೆತೆಯು ಸರಿಯಾಗಿ ಇರಲಿದೆ. ಹೆಚ್ಚಿನ ಶ್ರದ್ಧೆ ಮತ್ತು ತಿಳುವಳಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ.

ಮೀನರಾಶಿ
(Horoscope Today) ಪ್ರತಿಕೂಲಸ್ಥಿತಿಗಳು ದೂರವಾಗಲಿವೆ. ಶತ್ರಗಳು ಸೋಲು ಕಾಣುವರು. ನಿಮ್ಮ ಸಂಕೀರ್ಣವಾದ ಕಾರ್ಯವು ಮುಕ್ತಾಗೊಳ್ಳುವುದು. ದಿನದ ಆರಂಭದಲ್ಲಿ ಉತ್ಸಾಹದಿಂದ ಮಾಡುವ ಪ್ರಯತ್ನಗಳು ಫಲವನ್ನು ಕೊಡುವುವು. ಸರಿಯಾದ ಮಾರ್ಗ ಮಾತ್ರ ವಿಜಯಕ್ಕೆ ಕಾರಣವಾಗುತ್ತದೆ. ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು, ಸಂಗಾತಿಯಿಂದ ನೋವು, ಕೋರ್ಟ್ ಕೇಸುಗಳಲ್ಲಿ ಮುನ್ನಡೆ ಸಿಗಲಿದೆ.

Comments are closed.