Priyamani : ಸ್ಯಾಂಡಲ್ ವುಡ್ ನಟಿ ಬದುಕಿನಲ್ಲಿ ಬಿರುಗಾಳಿ…! ಪ್ರಿಯಾಮಣಿ ಮದುವೆ ಸಿಂಧುವಲ್ಲ ಎಂದ ಮುಸ್ತಫಾ ಮೊದಲ ಪತ್ನಿ…!!

ಸದ್ಯ ಸ್ಯಾಂಡಲ್ ವುಡ್ ಸಿನಿಮಾಗಿಂತ ಜಾಸ್ತಿ ನಟ-ನಟಿಯರ ವೈಯಕ್ತಿಕ ವಿವಾದಗಳಿಂದಲೇ ‌ಸುದ್ದಿ ಮಾಡುತ್ತಿದೆ. ಅಂತರ ಧರ್ಮಿಯ ವಿವಾಹವಾಗಿದ್ದ ಪ್ರಿಯಾಮಣಿ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು ಪ್ರಿಯಾಮಣಿ ಹಾಗೂ ಮುಸ್ತಫಾ ಮದುವೆ ವಿರುದ್ಧ ಮೊದಲ ಪತ್ನಿ ತಿರುಗಿ ಬಿದ್ದಿದ್ದಾರೆ.

ಸ್ಯಾಂಡಲ್ ವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಹೆಸರು ಗಳಿಸಿದ ನಟಿ ಪ್ರಿಯಾಮಣಿ ಸದ್ಯ ಫ್ಯಾಮಿಲಿ‌ಮ್ಯಾನ್ ವೆಬ್ ಸರಣಿಯಿಂದ ದೇಶದಾದ್ಯಂತ ಅಭಿಮಾನಿಗಳನ್ನು ಗಳಿಸಿ ದ್ದಾರೆ. ಆದರೆ ಅವರ ವೈಯಕ್ತಿಕ ಬದುಕು ಮಾತ್ರ ವಿವಾದಕ್ಕೆ ಸಿಲುಕಿದ್ದು ಪ್ರಿಯಾಮಣಿ ಹಾಗೂ ಮುಸ್ತಫಾರಾಜ್ ಮದುವೆ ಕಾನೂನಿನ ಪ್ರಕಾರ ಸಿಂಧುವಲ್ಲ ಎಂದು ಮುಸ್ತಾಫಾ ರಾಜ್ ಮೊದಲ ಪತ್ನಿ ಆಯೀಷಾ ಆರೋಪಿಸಿದ್ದಾರೆ.

ಮುಸ್ತಫಾರಾಜ್ ಹಾಗೂ ಆಯೀಷಾ ಮೊದಲು ಮದುವೆಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2013ರಲ್ಲಿ ಆಯೀಷಾರಿಂದ ದೂರವಾಗಿದ್ದ ಮುಸ್ತಫಾ ರಾಜ್ 2017 ರಲ್ಲಿ ಪ್ರಿಯಾಮಣಿ ಅವರನ್ನು ವಿವಾಹವಾಗಿದ್ದರು. ಆದರೇ ಪ್ರಿಯಾಮಣಿ ಹಾಗೂ ಮುಸ್ತಫಾರಾಜ್ ಮದುವೆ ನಾಲ್ಕು ವರ್ಷಗಳ ಬಳಿಕ ಆಯೀಷಾ ಈಗ ಪ್ರಿಯಾಮಣಿ ಹಾಗೂ ಮುಸ್ತಫಾ ಮದುವೆ ವಿರುದ್ಧ ಆರೋಪಮಾಡುತ್ತಿದ್ದು ಕಾನೂನಿನ ಪ್ರಕಾರ ನಾನು ಮುಸ್ತಫಾ ಇನ್ನೂ ವಿಚ್ಛೇಧನ ಪಡೆದಿಲ್ಲ. ಹೀಗಾಗಿ ಅವರ ಎರಡನೇ ಮದುವೆ ಕಾನೂನು ಸಮ್ಮತವಲ್ಲ ಎಂದಿದ್ದಾರೆ.

ಇದನ್ನೂ ಓದಿ : ಮತ್ತೆ ಚರ್ಚೆಗೆ ಬಂತು ಪವಿತ್ರಾ ಗೌಡ ಹೆಸರು….! ಏನಿದು ದಚ್ಚು-ಪವಿ ಅಸಲಿ ಕಹಾನಿ…!!

ಆದರೆ ಇದು ಹಣ ಸೆಳೆಯುವ ತಂತ್ರ ಎಂದಿರುವ ಮುಸ್ತಫಾ ರಾಜ್, ಪ್ರಿಯಾಮಣಿ ಮದುವೆಗೂ ಮುನ್ನವೇ ನಾನು ಆಕೆಗೆ ವಿಚ್ಛೇದನ ನೀಡಿದ್ದೇನೆ. ಮಕ್ಕಳನ್ನು ಸಾಕಲು ಹಣವನ್ನು ನೀಡುತ್ತಿದ್ದೇನೆ. ಆದರೆ ನನ್ನಿಂದ ಹೆಚ್ಚಿನ‌ಹಣ ಪಡೆಯಲು ಆಯೀಷಾ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಒಂದೊಮ್ಮೆ ಆಯೀಷಾ ಮಾತು‌ ನಿಜವಾಗಿದ್ದರೇ ಆಕೆ ಇಷ್ಟು ವರ್ಷಗಳ ಕಾಲ ಯಾಕೆ ಮೌನ ವಾಗಿದ್ದರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಆಯೀಷಾ ಅವರನ್ನು ಒಳ್ಳೆಯ ರೀತಿಯಲ್ಲಿ ಸರಿದಾರಿಗೆ ತರಲು ನಾನು ಪ್ರಯತ್ನಿಸಿದೆ. ಅದು ಸಾಧ್ಯವಾಗದೇ ಹೋದಾಗ ಹೀಗೆ ಮಾಡುವುದು ಅನಿವಾರ್ಯವಾಯಿತು ಎಂದಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

ಇತ್ತೀಚಿಗಷ್ಟೇ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಿಯಾಮಣಿ ತಮ್ಮ ಹಾಗೂ ಮುಸ್ತಫಾ ದಾಂಪತ್ಯದ ಬಗ್ಗೆ ಮಾತನಾಡಿ, ಮುಸ್ತಫಾ ನನ್ನ ಬದುಕಿನಲ್ಲಿ ಬಂದ ಮೇಲೆ ಎಲ್ಲವೂ ಒಳ್ಳೆಯದೇ ಅಗುತ್ತಿದೆ. ಆತ ನನ್ನ ಅದೃಷ್ಟ ಎಂದಿದ್ದರು. ಇದೀಗ ಮುಸ್ತಫಾ ಹಾಗೂ ಪ್ರಿಯಾಮಣಿ ದಾಂಪತ್ಯದ ಮೇಲೆ ವಿವಾದ ಸೃಷ್ಟಿ ಯಾಗಿದ್ದು ಪ್ರಿಯಾಮಣಿ ಮುಜುಗರಕ್ಕಿಡಾಗಿದ್ದಾರೆ.

Comments are closed.