Pranitha Subhash : ಭೀಮನ ಅಮಾವಾಸ್ಯೆ ಸ್ಪೆಶಲ್ : ಪತಿಯ ಪಾದ ಪೂಜೆ ಮಾಡಿದ ನಟಿ

Bheemana Amavasya : ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿದ ಅಪ್ಪಟ ಕನ್ನಡತಿ ನಟಿ ಪ್ರಣೀತಾ ಸುಭಾಶ್ (Pranitha Subhash) ಸದ್ಯ ತಾಯ್ತನದ ಬ್ರೇಕ್ ನಲ್ಲಿದ್ದಾರೆ. ಆದರೆ ತಾಯ್ತನದ ಸಂಭ್ರಮದ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿರೋ ಪ್ರಣೀತಾ ಸ್ಪೆಶಲ್ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಪ್ರಣೀತಾ ಶೇರ್ ಮಾಡಿರೋ ಸ್ಪೆಶಲ್ ಪೋಟೋ ನೋಡಿದ ಅಭಿಮಾನಿಗಳು ಒಹೋ ಹೀಗೂ ಇದ್ಯಾ ಅಂತ ಹುಬ್ಬೆರಿಸಿದ್ದಾರೆ.

ಹೌದು ನಟಿ ಪ್ರಣೀತಾ ಹಿಂದೂಗಳ ವಿಶೇಷ ಹಬ್ಬವಾದ ಭೀಮನ ಅಮಾವ್ಯಾಸೆಯನ್ನು ಅದ್ದೂರಿಯಾಗಿ ಸೆಲಿಬ್ರೇಟ್ ಮಾಡಿದ್ದಾರೆ. ಪತಿಯ ಪಾದ ಪೂಜೆ ಮಾಡಿರೋ ಪ್ರಣೀತಾ ಈ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಸಿನಿಮಾ‌ಕ್ಷೇತ್ರದಲ್ಲಿ ಸಕ್ರಿಯವಾಗಿರೋ ಪ್ರಣೀತಾ ಅಪಾರ ದೈವ ಭಕ್ತೆಯೂ ಹೌದು. ಮಾತ್ರವಲ್ಲ ಹಿಂದೂ ಧರ್ಮ ಹಾಗೂ ಆಚರಣೆಗಳ ಬಗ್ಗೆಯೂ ಅಪಾರ ಶೃದ್ಧೆ ಹೊಂದಿದ್ದಾರೆ.

ಹೀಗಾಗಿ ಆಶಾಢ ಅಮಾವಾಸ್ಯೆಯಂದು ಪತಿಯ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ನಡೆಸುವ ಭೀಮನ ಅಮಾವಾಸ್ಯೆಯ ಪೂಜೆಯನ್ನು ನೆರವೇರಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟಿಯರು ಪೂಜೆ ಪುನಸ್ಕಾರಗಳಲ್ಲಿ ನಂಬಿಕೆ ಇಡೋದು ಅಪರೂಪ. ಆದರೆ ಪ್ರಣೀತಾ ಮಾತ್ರ ಪೂಜೆ ಪುನಸ್ಕಾರದಲ್ಲಿ ನಂಬಿಕೆ ಇಟ್ಟಿದ್ದು ಮಾತ್ರವಲ್ಲ ಪೂಜೆ ಮಾಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಪ್ರಣೀತಾ ಕಳೆದ ವರ್ಷ ಸರಳ ಸಮಾರಂಭವೊಂದರಲ್ಲಿ ತಮ್ಮ ಬಹುಕಾಲದ ಸ್ನೇಹಿತ ನಿತಿನ್ ರಾಜ್ ಅವರನ್ನು ಮದುವೆಯಾಗಿದ್ದರು. ಮಾತ್ರವಲ್ಲ ಕೆಲ ತಿಂಗಳ ಹಿಂದೆಯಷ್ಟೇ ಪ್ರಣೀತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ವಿಡಿಯೋ ಹಾಗೂ ತಾಯಿಯೇ ನಿಮ್ಮ ಹೆರಿಗೆ ಮಾಡಿಸುವ ವೈದ್ಯರಾದರೇ ಹೇಗಿರುತ್ತೆ ಎಂಬ ಪೋಸ್ಟ್ ಗಳ ಮೂಲಕ ತಾಯ್ತನದ ಅಪ್ಡೇಟ್ ಮಾಹಿತಿ ಕೂಡ ನೀಡಿದ್ದರು ‌

ಇತ್ತೀಚಿಗಷ್ಟೇ ಪ್ರಣೀತಾ ಪುಟ್ಟ ಮಗುವಿನ ಜೊತೆ ಟ್ರಿಪ್ ಕೂಡ ಹೋಗಿ ಬಂದಿದ್ದರು. ಈಗ ಹೊಸ ಅಪ್ಡೇಟ್ ಪೂಜೆಯ ಪೋಟೋ ಹಂಚಿಕೊಂಡಿದ್ದಾರೆ. ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದ ಪ್ರಣೀತಾ ಹಲವು ಭಾಷೆಯಲ್ಲಿ ನಟಿಸಿದ್ದು, ಈ ಹಿಂದೆ ರಾಮಮಂದಿರ ನಿರ್ಮಾಣಕ್ಕೆ ಭಾರಿ ಮೊತ್ತದ ಕಾಣಿಕೆ ನೀಡಿದ್ದರು‌. ಅಲ್ಲದೇ ಟ್ರಸ್ಟ್ ಮೂಲಕ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡ ಪ್ರಣೀತಾ, ಕೊರೋನಾ ಲಸಿಕೆ ಅಭಿಯಾನವನ್ನು ನಡೆಸಿ ಜನರಿಗೆ ಸಹಾಯ ಹಸ್ತ ಚಾಚಿದ್ದರು.

ಇದನ್ನೂ ಓದಿ : Death Threat : ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಗೆ ಕೊಲೆ ಬೆದರಿಕೆ; ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ : Katrina Kaif : ಕತ್ರಿನಾ ಕೈಫ್​ಗೆ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ: ಕತ್ರಿನಾರನ್ನು ಮದುವೆಯಾಗೋದು ನನ್ನಾಸೆ ಎಂದ ಆರೋಪಿ

Bheemana Amavasya festival celebrated Pranitha Subhash

Comments are closed.