Olavina Nildana:ತಾರಿಣಿಯ ಕಡೆ ವಾಲುತ್ತಿದ್ದಾನೆ ಸಿದ್ದಾಂತ್, ಕುತೂಹಲ ಹುಟ್ಟಿಸಿದ ಒಲವಿನ ನಿಲ್ದಾಣ

ಒಲವಿನ ನಿಲ್ದಾಣ(Olavina Nildana) ಧಾರಾವಾಹಿ ಆರಂಭದಿಂದಲೇ ವಿಭಿನ್ನವಾದ ಕಥೆಯ ಎಳೆಯಿಂದ.ಸಾಮಾನ್ಯವಾಗಿ ಧಾರವಾಹಿಗಳಲ್ಲಿ ಹುಡುಗಿಯನ್ನು ಪಡೆಯಲು ಹುಡುಗ ಪಡುವ ಹರಸಾಹಸಗಳನ್ನು ತೋರಿಸುತ್ತಾರೆ .ಆದರೆ ಈ ಧಾರಾವಾಹಿ ವಿಭಿನ್ನವಾಗಿದೆ.ಮಲೆನಾಡ ಹುಡುಗಿ ತನ್ನ ಕನಸಿನ ರಾಜನನ್ನು ಪಡೆಯಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ಮಲೆನಾಡ ಹುಡುಗಿಯ ಪ್ರೀತಿಯ ಕಥೆಗೆ ಪ್ರೇಕ್ಷಕರು ಕೂಡ ಮನ ಸೋತಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಧಾರವಾಹಿ ಪ್ರಸಾರವಾಗತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ.

ತುಂಬು ಕುಟುಂಬದಲ್ಲಿ ಬೆಳೆದ ಹುಡುಗಿಗೆ ಸಿಗುವ ಪ್ರೀತಿ ವಾತ್ಸಲ್ಯವನ್ನು ತೋರಿಸಿದ್ದಾರೆ.ಆದ್ದರಿಂದ ಈ ಧಾರಾವಾಹಿ ಪ್ರೇಕ್ಷಕರಿಗೆ ಹತ್ತಿರವೆನಿಸುತ್ತದೆ. ಈ ಧಾರಾವಾಹಿಯಲ್ಲಿ ಮೆನ್‌ ಸೆಂಟರ್‌ ಆಪ್‌ ಅಟ್ರಾಕ್ಷನ್‌ ಸಿದ್ದಾಂತ್‌ ಮತ್ತು ತಾರಿಣಿ ಇವರಿಬ್ಬರನ್ನು ಒಟ್ಟಿಗೆ ನೊಡುವುದಕ್ಕೆ ಜನರು ಇಷ್ಟಪಡುತ್ತಾರೆ. ನಿನ್ನೆಯ ಸಂಚಿಕೆಯಲ್ಲಿ ಸಿದ್ದಾಂತ್‌ ಜೈಲಿನಿಂದ ಹೊರಗೆ ಬಂದ ಖುಷಿಯಲ್ಲಿ ತಾರಿಣಿಗೆ ಒಂದು ಚಿಕ್ಕ ಪಾರ್ಟಿ ಕೊಡಲು ಯೋಚನೆ ಮಾಡುತ್ತಾನೆ. ಅದರಂತೆ ಅವಳನ್ನು ಆಚೆ ಕರೆಯುತ್ತಾನೆ. ಮನೆಯಲ್ಲಿ ಸೆಮಿನಾರ್‌ ಇದೆ ಎಂದು ಸುಳ್ಳು ಹೇಳಿ ಮನೆಯಿಂದ ಹೊರಡುವ ಸಂದರ್ಭದಲ್ಲಿ ಅವರ ಅತ್ತಿಗೆಗೆ ಅನುಮಾನ ಬರುತ್ತದೆ. ಸೆಮಿನಾರ್‌ ಗೆ ಇಷ್ಟು ರೆಡಿಯಾಗಿ ಹೋಗುತ್ತಿದ್ದಾನೆ ಎಂದು ಅವಳಲ್ಲಿ ಮಾತನಾಡಿಕೊಳ್ಳುತ್ತಾ ಅತ್ತೆ ಹತ್ತಿರ ಈ ವಿಚಾರವನ್ನು ಹೇಳಬೇಕು ಎಂದು ನಿರ್ಧಾರ ಮಾಡುತ್ತಾಳೆ. ಸಿದ್ದಾಂತ್‌ ಹೊರಗಡೆ ಹೊಗುವಾಗ ಅವರ ಅಪ್ಪ ಸಿಗುತ್ತಾರೆ ಅವರು ಯಾವಾಗಲು ತಮಾಷೆ ಆಗಿರುವುದರಿಂದ ತಾರಿಣಿಯ ವಿಷಯವಾಗಿ ಕಾಲನ್ನು ಎಳೆಯುತ್ತಾರೆ. ಆಗ ಸಿದ್ದಾಂತ್‌ ನಮ್ಮಿಬ್ಬರ ಮಧ್ಯೆಎನು ಇಲ್ಲ ಬರಿ ಸ್ನೇಹ ಎಂದು ಹೇಳುತ್ತಾನೆ. ಹೀಗೆ ಹೇಳಿ ತಾರಿಣಿಯನ್ನು ಮಿಟ್‌ ಮಾಡಲು ಹೊರಡುತ್ತಾನೆ.

ಬೈಕ್‌ ನಿಲ್ಲಿಸಿಕೊಂಡು ಕಾಯುವಾಗ ತಾರಿಣಿ ಬರುವುದನ್ನು ನೋಡಿ ಹಾಗೆ ನಿಲ್ಲುತ್ತಾನೆ . ತಾರಿಣಿ ಬಂದು ಹಾಯ್‌ ಎನ್ನುತ್ತಾಳೆ. ಇವನು ಕೂಡ ಹಾಯ್‌ ಎನ್ನುತ್ತಾನೆ. ಎಲ್ಲಿಗೆ ಹೋಗುವುದು ಎಂದು ತಾರಿಣಿ ಪ್ರಶ್ನೇ ಕೇಳಿದಾಗ ಸಿದ್ದಾಂತ್‌ ಇವತ್ತು ನೀವು ಹೇಳಿದ ಜಾಗಕ್ಕೆ ಹೋಗುವುದು ಎಂದು ಹೇಳುತ್ತಾನೆ. ಆಗ ತಾರಿಣಿಗೆ ತುಂಬಾ ಖುಷಿಯಾಗುತ್ತದೆ. ಅವಳು ಇಲ್ಲೆ ಹತ್ತಿರದಲ್ಲಿ ಗಣೇಶನ ದೇವಸ್ಥಾನ ಇದೆ ಮೊದಲು ಅಲ್ಲಿಗೆ ಹೋಗಿ ಮೊದಕದಿಂದ ಮಾಡಿದ ಹಾರವನ್ನು ಕೊಡಬೇಕು ಎಂದಾಗ ಸಿದ್ದಾಂತ್‌ ಯಾಕೆ ಎಂದು ಪ್ರಶ್ನಿಸುತ್ತಾನೆ ಆಗ ತಾರಿಣಿ ನಿಮಗಾಗಿ ಹರಕೆಯನ್ನು ಹೊತ್ತಿದ್ದೆ ಎಂದು ಹೇಳಿದಾಗ ಅವಳನ್ನು ದಿಟ್ಟಿಸಿ ನೋಡುತ್ತಾನೆ. ನಂತರ ಇಬ್ಬರು ದೇವಸ್ಥಾನಕ್ಕೆ ಹೋಗಿ ಗಿಪ್ಟ ತೆಗೆದು ಕೊಳ್ಳಲು ಹೋಗುವ ಸಂದರ್ಭದಲ್ಲಿ ಮಹಿಳೆ ಒಬ್ಬಳು ರೋಡನ್ನು ದಾಟಲ್ಲು ಕಷ್ಟಪಡುತ್ತಿರುತ್ತಾಳೆ. ಅವರನ್ನು ದಾಟಿಸುತ್ತಾಳೆ ಸಿದ್ದಾಂತ್‌ ಗೆ ಅವಳ ಈ ಗುಣ ಇಷ್ಟ ಆಗುತ್ತದೆ.

ಇದನ್ನೂ ಓದಿ:Sourav Ganguly: ಅವತ್ತು ದ್ರಾವಿಡ್, ಇವತ್ತು ಬಿನ್ನಿ.. ಸೌರವ್ ಗಂಗೂಲಿ ಪಟ್ಟಕ್ಕೆ ಲಗ್ಗೆ ಇಟ್ಟ ಕನ್ನಡಿಗರು

ಇದನ್ನೂ ಓದಿ:karnataka hijab ban:ಹಿಜಾಬ್​ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಆದೇಶದಲ್ಲಿ ಏನಿತ್ತು: ಇಲ್ಲಿದೆ ಸಂಪೂರ್ಣ ಮಾಹಿತಿ

ಸಿದ್ದಾಂತ್‌ ಮತ್ತು ತಾರಿಣಿಯ ಎಂಗೆಜ್ ಮೆಂಟ್‌ ಗೆ ಮನೆಯವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ವಾರ ಸಿದ್ದಾಂತ್‌ ಮನೆಯವರು ತಾರಿಣಿಯ ಮನೆಗೆ ಹೊಗುತ್ತಿದ್ದಾರೆ. ಇನ್ನೊಂದೆಡೆ ಸಿದ್ದಾಂತ್‌ ಜೈಲಿನಿಂದ ಆಚೆ ಬಂದಿರುವುದು ಅವಳ ಚಿಕ್ಕಪ್ಪನ ಕುತ್ತಿಗೆಗೆ ಬಂದಿದೆ. ತಾರಿಣಿಗೆ ನೋಡಿದ ಹುಡುಗನ ಮನೆಯವರ ಹತ್ತಿರ ಇವರು ಹಣವನ್ನು ಪಡೆದಿದ್ದರು ಅದನ್ನು ಮರಳಿಸುವಂತೆ ಕೇಳಿದಾಗ. ತಾರಿಣಿಯ ಚಿಕ್ಕಪ್ಪ ಇನ್ನೊಂದು ಅವಕಾಶ ಕೊಡಿ ಈ ಮದುವೆ ಮುರಿದು ಬಿಳುವಂತೆ ಮಾಡುತ್ತೆನೆ ಎಂದಾಗ ಒಪ್ಪಿಕೊಳ್ಳುತ್ತಾರೆ. ಅದರಂತೆ ತಾರಿಣಿಯ ಅಮ್ಮನ ಹತ್ತಿರ ಬಂದು ಮದುವೆ ಮುರಿಯುವಂತಹ ಉಪಾಯವನ್ನು ಕೊಡುತ್ತಾನೆ. ಇಬ್ಬರ ಜಾತಕವನ್ನು ತೋರಿಸಿ ಹೊಂದಿಕೆಯಾದರೆ ಮದುವೆಯನ್ನು ಜೋರಾಗಿ ಮಾಡೋಣ, ಒಂದು ವೇಳೆ ಹೊಂದಾಣಿಕೆ ಆಗದಿದ್ದರೆ ಈ ಮದುವೆ ಮಾಡುವುದು ಬೇಡವೆಂದು ಹೇಳುತ್ತಾನೆ. ಅತ್ತ ತಾರಿಣಿ ತನ್ನ ಕನಸಿನ ರಾಜನನ್ನು ಮದುವೆಯಾಗುವ ಕನಸು ಕಂಡರೆ ಇತ್ತ ಮದುವೆಯನ್ನು ನಿಲ್ಲಿಸುವಂತಹ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.

Olavina Nildana Siddhanth showing interesting on tarini

Comments are closed.